ಬ್ರೇಕಿಂಗ್ ನ್ಯೂಸ್
01-05-22 09:49 pm Mangalore Correspondent ಕರಾವಳಿ
ಮಂಗಳೂರು, ಮೇ 1: ಮಸೀದಿಯಲ್ಲಿ ಆಝಾನ್ ಕೂಗುವ ಮೈಕ್ಗಳನ್ನು ಒಂದೋ ತೆಗೆಯಬೇಕು. ಇಲ್ಲವೇ ಅದರ ಶಬ್ದ ಕಡಿಮೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಆಜಾನ್ ಧ್ವನಿ ಕೇಳಿಸದಷ್ಟು ಓಂಕಾರ ಮತ್ತು ಸುಪ್ರಭಾತ ಹಾಕುತ್ತೇವೆ. ನಮ್ಮ ಕೆಲಸವನ್ನು ಹತ್ತಿಕ್ಕಲು ಯತ್ನಿಸಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಮುತಾಲಿಕ್, ಮೇ 9 ಕ್ಕೆ ಬೆಳಗ್ಗೆ 5 ಗಂಟೆಗೆ ರಾಜ್ಯದ ಒಂದು ಸಾವಿರ ದೇವಾಲಯ, ಮಠಗಳಲ್ಲಿ ಓಂಕಾರ, ಸುಪ್ರಭಾತ ಹಾಕಲು ತೀರ್ಮಾನಿಸಿದ್ದೇವೆ. ಸರಕಾರ ಇದನ್ನು ತಡೆಯಲು ಮುಂದಾದರೆ ಸಂಘರ್ಷ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮೇ 9 ರಂದು ಆಝಾನ್ ಧ್ವನಿ ಕೇಳಿಸದಷ್ಟು ಶಬ್ದದಲ್ಲಿ ಓಂಕಾರ, ಸುಪ್ರಭಾತ ಹಾಕುತ್ತೇವೆ. ಆಝಾನ್ ಮೈಕ್ ನಿಲ್ಲಿಸಲು ಆಗದ ರಾಜ್ಯ ಸರ್ಕಾರ ಮತ್ತು ಕೋರ್ಟ್ ಆದೇಶ ಪಾಲಿಸದ ಮುಸ್ಲಿಂ ಸಮುದಾಯಕ್ಕೆ ಚಾಲೆಂಜ್ ಆಗಿ ಇದನ್ನು ಮಾಡಲಿದ್ದೇವೆ. ಆಝಾನ್ ಮೈಕ್ ಶಬ್ದ ನಿಲ್ಲಿಸದೆ ಇದ್ದರೆ ನಾವೂ ನಮ್ಮ ಸುಪ್ರಭಾತ, ಓಂಕಾರ ನಿಲ್ಲಿಸಲ್ಲ. ಈ ಹೋರಾಟಕ್ಕೆ ಎಲ್ಲ ಹಿಂದೂ ಸಂಘಟನೆಗಳು, ಸ್ವಾಮೀಜಿಗಳು, ಧರ್ಮದರ್ಶಿಗಳು ಸಹಕಾರ ನೀಡುತ್ತಿದ್ದಾರೆ. ಸರ್ಕಾರ ಧೈರ್ಯ ತೋರಿಸಿ ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಆಝಾನ್ ಮೈಕ್ ಇಳಿಸಿದಂತೆ ಕ್ರಮ ಕೈಗೊಳ್ಳಬೇಕು. ಬರೇ ನೋಟಿಸ್ ನೀಡುವ ನಾಟಕ ಮಾಡಬೇಡಿ ಎಂದು ಸರಕಾರದ ವಿರುದ್ಧ ಮುತಾಲಿಕ್ ಕಿಡಿಕಾರಿದ್ದಾರೆ.
ಅಕ್ಷಯ ತೃತೀಯ ದಿನದಂದು ಹಿಂದುಗಳು, ಹಿಂದುಗಳ ಅಂಗಡಿಯಲ್ಲೇ ಚಿನ್ನ, ಬೆಳ್ಳಿ ಖರೀದಿಸಬೇಕು. ಮೇ 3ರಂದು ಅಕ್ಷಯ ತೃತೀಯ ಹಿಂದೂಗಳ ಪಾಲಿಗೆ ಮಹತ್ವದ ಹಬ್ಬವಾಗಿದೆ. ಈ ದಿನ ಹಿಂದು ವಿರೋಧಿಗಳಿಂದ ಚಿನ್ನ, ಬೆಳ್ಳಿ ಖರೀದಿ ಮಾಡಬಾರದು. ಕೇರಳದಿಂದ ಗೋವಾ, ಮಹಾರಾಷ್ಟ್ರ, ತಮಿಳುನಾಡಿಗೆ ದುಬೈನಿಂದ ಕಳ್ಳತನದಿಂದ ಬಂದ ಚಿನ್ನದ ವ್ಯಾಪಾರವನ್ನು ಹಿಂದೂವೇತರರು ಮಾಡುತ್ತಿದ್ದಾರೆ.
ಇದೊಂದು ಬೃಹತ್ ಚಿನ್ನದ ಮಾಫಿಯಾ. ಹಿಂದೂ ಸಮಾಜಕ್ಕೆ ಈ ಮಾಫಿಯಾ ಮೋಸ ಮಾಡುತ್ತಿದೆ. ಕೇರಳದಲ್ಲಿ 8೦೦ಕ್ಕೂ ಅಧಿಕ ಹಿಂದೂ ಮುಖಂಡರು, ಕಾರ್ಯಕರ್ತರ ಕೊಲೆಯಾಗಿದೆ. ಈ ಕೊಲೆಗಡುಕ ಜಾಲಕ್ಕೆ ಚಿನ್ನದ ವ್ಯವಹಾರದಿಂದ ಹಣ ಹೋಗುತ್ತಿದೆ. ಗೋ ಸಾಗಾಟ, ಲವ್ ಜಿಹಾದ್ ಕೃತ್ಯಗಳಿಗೂ ಇದೇ ಚಿನ್ನದ ಮಾಫಿಯಾ ಬೆಂಗಾವಲಾಗಿದೆ. ಇದಕ್ಕಾಗಿ ದುರ್ಗಾಸೇನೆಯವರು ಎಲ್ಲ ಮಹಿಳೆಯರಿಗೂ ಜಾಗೃತಿ ಮೂಡಿಸಬೇಕೆಂದು ಮನವಿ ನೀಡಿದ್ದೇವೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
May 9th we will put load speakers outside temples for suprabatha, warns Pramod Muthalik in Mangalore. Those trying to stop us will see communal violence he added.
01-10-25 10:06 pm
HK News Desk
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
Mahesh Shetty: ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆ...
30-09-25 03:58 pm
ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಪ್ರಬ...
30-09-25 01:08 pm
01-10-25 09:44 pm
HK News Desk
Cough Syrup Side Effects Suspected, Kidney Fa...
01-10-25 05:32 pm
ಮುಂಬೈ ಉಗ್ರ ದಾಳಿ ; 17 ವರ್ಷಗಳ ಬಳಿಕ ಪಿ. ಚಿದಂಬರಂ...
01-10-25 04:10 pm
ಫಸ್ಟ್ ನೈಟ್ ಅರ್ಜೆಂಟ್ ಮಾಡಂಗಿಲ್ಲ..! ಮದುಮಗಳ ರಾಗಕ್...
30-09-25 04:08 pm
ಪಾಕಿಸ್ತಾನದ ಕ್ವೆಟ್ಟಾದಲ್ಲಿ ಭಾರೀ ಸ್ಫೋಟ ; ಕಾರಿನಲ್...
30-09-25 04:03 pm
01-10-25 11:00 pm
Mangalore Correspondent
Jayanth, Chinnayya, Dharmasthala Case: ಚಿನ್ನಯ...
01-10-25 04:45 pm
ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ತಂಡದ ಮುಡಿಗೇರಿದ ಕು...
01-10-25 03:35 pm
ಮಂಗಳೂರು ಪೂರ್ತಿ ಝಗಮಗ ; ಕೋಟಿ ಕೋಟಿ ಮಿನಿಚರ್ ಅಳವಡಿ...
30-09-25 10:57 pm
Ullal Municipal Commissioner: ಉಳ್ಳಾಲ ನಗರಸಭೆಯಲ...
30-09-25 06:48 pm
01-10-25 02:39 pm
Mangalore Correspondent
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm