ಕಿಶೋರ್ ಜೊತೆಗಿನ ಪಾರ್ಟಿಯೇ ಅನುಶ್ರೀಗೆ ಸಂಕಷ್ಟ ತರುತ್ತಾ ?

25-09-20 11:51 am       Mangalore Correspondent   ಕರಾವಳಿ

ಮಂಗಳೂರಿನಲ್ಲಿ ಪೊಲೀಸರ ವಿಚಾರಣೆಯಲ್ಲಿ ಕಿಶೋರ್ ಮತ್ತು ತರುಣ್, ತಾವು ಅನುಶ್ರೀ ಜೊತೆಗೆ ಪಾರ್ಟಿ ಮಾಡಿದ್ದಾಗಿ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಹೆಚ್ಚು ಕ್ಲೋಸ್ ಆಗಿದ್ದೆವು. ನೇರ ಸಂಪರ್ಕ ಇತ್ತೆಂದು ಹೇಳಿಕೆ ನೀಡಿದ್ದಾರೆ.

ಮಂಗಳೂರು, ಸೆಪ್ಟಂಬರ್ 25: ಡ್ರಗ್ಸ್ ನಂಟಿನಲ್ಲಿ ಮಂಗಳೂರು ಪೊಲೀಸರಿಂದ ಬುಲಾವ್ ಆಗಿರುವ ನಿರೂಪಕಿ ಅನುಶ್ರೀಗೆ ಡ್ಯಾನ್ಸರ್ ಕಂ ಕೊರಿಯೋಗ್ರಾಫರ್ ಕಿಶೋರ್ ಅಮನ್ ಜೊತೆಗಿನ ಪಾರ್ಟಿಯೇ ಸಂಕಷ್ಟ ತರುತ್ತಾ ಅನ್ನುವ ಅನುಮಾನ ಕೇಳಿಬಂದಿದೆ. 

ಮಂಗಳೂರಿನಲ್ಲಿ ಪೊಲೀಸರ ವಿಚಾರಣೆಯಲ್ಲಿ ಕಿಶೋರ್ ಮತ್ತು ತರುಣ್, ತಾವು ಅನುಶ್ರೀ ಜೊತೆಗೆ ಪಾರ್ಟಿ ಮಾಡಿದ್ದಾಗಿ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಹೆಚ್ಚು ಕ್ಲೋಸ್ ಆಗಿದ್ದೆವು. ನೇರ ಸಂಪರ್ಕ ಇತ್ತೆಂದು ಹೇಳಿಕೆ ನೀಡಿದ್ದಾರೆ.

ಕಿಶೋರ್ ಮತ್ತು ತರುಣ್ ಬೆಂಗಳೂರಿನಲ್ಲಿ ಕೊರಿಯೋಗ್ರಾಫರ್ ಆಗಿದ್ದು ಖಾಸಗಿ ವಾಹಿನಿಯ "ಕುಣಿಯೋಣು ಬಾರಾ" ರಿಯಾಲಿಟಿ ಶೋನಲ್ಲಿ ಅನುಶ್ರೀಗೆ ಡ್ಯಾನ್ಸ್ ಕೊರಿಯೋಗ್ರಾಫ್ ಮಾಡಿದ್ದರು. ಅದರಲ್ಲಿ ಅನುಶ್ರೀ ವಿನ್ನರ್ ಆಗಿದ್ದಲ್ಲದೆ, ಮೆಡಲ್ ಪಡೆದಿದ್ದಕ್ಕಾಗಿ ಇಬ್ಬರು 'ಗುರು'ಗಳಿಗೆ ಪಾರ್ಟಿ ನೀಡಿದ್ದಳು ಎಂದು ವಿಚಾರಣೆಯಲ್ಲಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. 

ಮಂಗಳೂರು ಪೊಲೀಸರ ವಿಚಾರಣೆಯಲ್ಲಿ ಆರೋಪಿಗಳು ಬಾಯ್ಬಿಟ್ಟಿರುವ ಈ ಮಾಹಿತಿಯೇ ಅನುಶ್ರೀ ಪಾಲಿಗೆ ಸಂಕಷ್ಟಕ್ಕೆ ಕಾರಣವಾಗಿದೆ. ಇದೇ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಅನುಶ್ರೀಯನ್ನ ವಿಚಾರಣೆಗೆ ಕರೆದಿದ್ದಾರೆ ಎನ್ನಲಾಗ್ತಿದೆ. ಇದೇ ವಿಚಾರದಲ್ಲಿ ಪೊಲೀಸರು ಅನುಶ್ರೀಯನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ.

Join our WhatsApp group for latest news updates (2)