ಪಣಂಬೂರು ಠಾಣೆಗೆ ಅನುಶ್ರೀ ಹಾಜರು ; ಮಾಧ್ಯಮಗಳ ಕಣ್ತಪ್ಪಿಸಿದ ಪೊಲೀಸರು ! 

26-09-20 09:49 am       Mangaluru Correspondent   ಕರಾವಳಿ

ನಟಿ, ನಿರೂಪಕಿ ಅನುಶ್ರೀ ಕೊನೆಗೂ ಮಂಗಳೂರಿನಲ್ಲಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ.

ಮಂಗಳೂರು, ಸೆಪ್ಟಂಬರ್ 26: ನಟಿ, ನಿರೂಪಕಿ ಅನುಶ್ರೀ ಕೊನೆಗೂ ಮಂಗಳೂರಿನಲ್ಲಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ. ಮಂಗಳೂರು ನಗರ ಹೊರವಲಯದ ಪಣಂಬೂರು ಎಸಿಪಿ ಕಚೇರಿಗೆ ಆಗಮಿಸಿದ್ದು ಸಿಸಿಬಿ ಅಧಿಕಾರಿಗಳ ವಿಚಾರಣೆಗೆ ಒಳಗಾಗಿದ್ದಾರೆ. 

ಎಸಿಪಿ ಕಚೇರಿಯ ಮೇಲಿನ ಮಹಡಿಯಲ್ಲಿ ಅನುಶ್ರೀಯನ್ನು ಪ್ರಕರಣದ ತನಿಖಾಧಿಕಾರಿ ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ನೇತೃತ್ವದಲ್ಲಿ ವಿಚಾರಣೆ ಆರಂಭಿಸಿದ್ದಾರೆ. ಹಲವು ಪ್ರಶ್ನೆಗಳಿಗೆ ಸಿಸಿಬಿ ಅಧಿಕಾರಿಗಳು ಉತ್ತರ ಪಡೆಯಲಿದ್ದು ಕನಿಷ್ಠ ಎರಡು ಗಂಟೆ ಕಾಲ ವಿಚಾರಣೆ ನಡೆಯುವ ಸಾಧ್ಯತೆಯಿದೆ. 

ನಿನ್ನೆ ಮಂಗಳೂರಿ‌ನ ಪಾಂಡೇಶ್ವರದ ನಾರ್ಕೋಟಿಕ್ ಸೆಲ್ ನಲ್ಲಿ ವಿಚಾರಣೆ ಎಂದಿತ್ತು. ಅನುಶ್ರೀ ನಿನ್ನೆಯೇ ಅಲ್ಲಿ ಹಾಜರಾಗುತ್ತಾರೆ ಎನ್ನಲಾಗ್ತಿತ್ತು. ಆದರೆ, ಸಂಜೆ ವರೆಗೂ ಪೊಲೀಸರು ಮತ್ತು ಮಾಧ್ಯಮದವರನ್ನು ಕಾಯಿಸಿದ ಅನುಶ್ರೀ ವಿಚಾರಣೆಗೆ ಬಂದಿರಲಿಲ್ಲ. 

ಪೊಲೀಸರು ಕೊನೆಕ್ಷಣದಲ್ಲಿ ಮಾಧ್ಯಮಗಳ ಕಣ್ತಪ್ಪಿಸಲೆಂದೇ ವಿಚಾರಣೆಯನ್ನು ಪಣಂಬೂರಿಗೆ ವರ್ಗಾಯಿಸಿದ್ದರು. ಇಂದು ಬೆಳ್ಳಂಬೆಳಗ್ಗೆ ಪಣಂಬೂರು ಠಾಣೆಗೆ ಬರುವಂತೆ ಬುಲಾವ್ ನೀಡಲಾಗಿತ್ತು.

Join our WhatsApp group for latest news updates (2)