ಬ್ರೇಕಿಂಗ್ ನ್ಯೂಸ್
20-05-22 12:05 pm Mangalore Correspondent ಕರಾವಳಿ
ಮಂಗಳೂರು, ಮೇ 20 : ನಾರಾಯಣ ಗುರುಗಳಂತಹ ದಾರ್ಶನಿಕರ ಬಗೆಗಿನ ಪಠ್ಯವನ್ನು ತೆಗೆದು ಹಾಕಿದ್ದು ಘೋರ ಅಪರಾಧ. ತೆಗೆದು ಹಾಕಿದ ಪಠ್ಯವನ್ನು ಮತ್ತೆ ಸೇರಿಸಬೇಕೆಂದು ನಾನು ಹೇಳುತ್ತಿಲ್ಲ. ಆದರೆ ಈ ಪ್ರಮಾದಕ್ಕಾಗಿ ನಾರಾಯಣ ಗುರುಗಳನ್ನು ಕುಲಗುರುಗಳೆಂದು ಹೇಳಿಕೊಳ್ಳುವ ಸಮುದಾಯಕ್ಕೆ ಸೇರಿದ ಕರಾವಳಿಯ ಇಬ್ಬರು ನಾಯಕರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಸಮುದಾಯದ ಪರವಾಗಿ ಶಿಕ್ಷಣ ಇಲಾಖೆಗೆ ಬಿಸಿ ಮುಟ್ಟಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ರಮಾನಾಥ ರೈ, ಬೇರೆ ಬೇರೆ ಪಕ್ಷಗಳ ಕಾರ್ಯಕರ್ತರು, ನಾಯಕರಿಗೆ ಬೇರೆ ಬೇರೆಯದೇ ಆದ ವ್ಯಕ್ತಿಗಳು ಆದರ್ಶರಾಗಿರಬಹುದು. ಗೋಡ್ಸೆ, ಗಾಂಧಿ ಅಭಿಮಾನಿಗಳು ಇರಬಹುದು. ಒಂದು ಸಂಘಟನೆಯ ಮುಖ್ಯಸ್ಥ ಹೆಡಗೇವಾರ್ ಬಗ್ಗೆ ಅಭಿಮಾನ ಇರಬಹುದು. ಯಾರು ಬೇಕಾದರೂ ಪ್ರಚಾರ ಸಭೆಯಲ್ಲಿ ಗೋಡ್ಸೆ, ಹೆಡಗೇವಾರ್ ಆದರ್ಶ ಎಂದು ಹೇಳಿಕೊಳ್ಳಬಹುದು. ಅದಕ್ಕೆ ನಮ್ಮ ಆಕ್ಷೇಪವಿಲ್ಲ.
ಆದರೆ ಸರ್ವಜನಾಂಗದ ಶಾಂತಿಯ ತೋಟ ಎಂದು ಬಣ್ಣಿತವಾಗಿರುವ ಕರ್ನಾಟಕದಲ್ಲಿ ಒಬ್ಬ ದಾರ್ಶನಿಕ ವ್ಯಕ್ತಿಗೆ ಅಪಮಾನ ಆಗುವುದು ಆಗಬಾರದಿತ್ತು. ದಾರ್ಶನಿಕ ವ್ಯಕ್ತಿಗಳಿಗೆ ಅಪಮಾನ ಮಾಡುವುದು ಘೋರ ಅಪರಾಧ. ಇದರ ಹಿಂದಿನ ದುರುದ್ದೇಶ ಏನೆನ್ನುವುದು ತಿಳಿಯುತ್ತದೆ. ಇದು ಒಂದು ರೀತಿಯ ರಾಜಕೀಯ ಗಿಮಿಕ್. ಪಿಟ್ಟಿ ಪಾಲಿಟಿಕ್ಸ್ ಅಂತ ಹೇಳಬೇಕಷ್ಟೆ.
ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ಒಪ್ಪುವುದಾದರೆ ಮಂಗಳೂರಿನ ರೈಲು ನಿಲ್ದಾಣ ಅಥವಾ ಏರ್ಪೋರ್ಟ್ ಗೆ ಅವರ ಹೆಸರು ಇಡಬೇಕಿತ್ತು. ಚುನಾವಣೆ ನೆಪದಲ್ಲಿ ಏನೋ ಹೆಸರು ಬದಲಾವಣೆ ಮಾಡಬಹುದು. ಆದರೆ ಇದರ ಹಿಂದಿನ ನೀತಿ ಏನು ಎನ್ನುವುದು ತಿಳಿಯ ಬೇಕಾಗುತ್ತದೆ. ನಾರಾಯಣ ಗುರುಗಳ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಒಬ್ಬ ಮಂತ್ರಿ ಹೇಳುತ್ತಾರೆ. ಆದರೆ ಈ ವಿಚಾರವನ್ನು ಕಾಂಗ್ರೆಸ್ ಎತ್ತಿರುವ ಪ್ರಶ್ನೆಗಳಲ್ಲ. ಪ್ರತಿಷ್ಠಿತ ಪತ್ರಿಕೆಗಳು, ಚಿಂತಕರು ಪ್ರಶ್ನೆ ಎತ್ತಿರುವುದು. ಹಾಗಾಗಿ ಉತ್ತರ ಕೊಡಬೇಕಾಗುತ್ತದೆ ಎಂದು ರೈ ಹೇಳಿದರು.
ಪಠ್ಯ ಪುಸ್ತಕ ಮರು ಪರಿಷ್ಕರಣಾ ಸಮಿತಿಯ ಬಗ್ಗೆಯೇ ಆಕ್ಷೇಪ ಇದೆ. ದಾರ್ಶನಿಕ ವ್ಯಕ್ತಿಗಳ ಹೆಸರು, ಅವರ ವಿಚಾರಗಳನ್ನು ಪಠ್ಯದಿಂದ ತೆಗೆದು ಹಾಕುವುದರ ಹಿಂದಿನ ಅಜೆಂಡಾ ಅರ್ಥ ಮಾಡಬೇಕಾಗುತ್ತದೆ. ಏನೇ ರಾಜಕೀಯ ಇರಲಿ, ಬಿಲ್ಲವ, ಈಡಿಗರ ಪಾಲಿನ ಗುರುಗಳಿಗಾದ ಅವಮಾನಕ್ಕಾಗಿ ಅವರನ್ನು ಪ್ರತಿನಿಧಿಸುವ ನಾಯಕರು ರಾಜಿನಾಮೆ ನೀಡಬೇಕು ಎಂದು ಪರೋಕ್ಷವಾಗಿ ಸುನಿಲ್ ಕುಮಾರ್ ಮತ್ತು ಕೋಟ ಶ್ರೀನಿವಾಸ ಪೂಜಾರಿ ಹೆಸರೇಳದೆ ರಮಾನಾಥ ರೈ ರಾಜಿನಾಮೆಗೆ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಶಶಿಧರ್ ಹೆಗ್ಡೆ, ಇಬ್ರಾಹಿಂ ಕೋಡಿಜಾಲ್ ಮತ್ತಿತರರಿದ್ದರು.
Mangalore Text on Narayana Guru, Periyar removed from class 10 Ramanath Rai slams BJP.
17-11-25 07:25 pm
Bangalore Correspondent
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
17-11-25 10:58 pm
HK News Desk
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
ರಾಜ್ಯದಲ್ಲಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ; ಸಿ...
15-11-25 11:12 pm
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
18-11-25 10:18 pm
Mangaluru Staff
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ...
17-11-25 06:16 pm
ದೇರಳಕಟ್ಟೆ ಕಾಲೇಜಿನ ಕೇರಳ ವಿದ್ಯಾರ್ಥಿ ನಾಪತ್ತೆ ; ಗ...
16-11-25 10:48 pm
18-11-25 09:09 pm
Mangaluru Staff
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm
Ullal News, Animal Attack, Crime, Kumpala: ಕಣ...
14-11-25 11:16 am