ಬ್ರೇಕಿಂಗ್ ನ್ಯೂಸ್
11-12-20 05:49 pm Mangalore Correspondent ಸ್ಪೆಷಲ್ ಕೆಫೆ
ಮಂಗಳೂರು, ಡಿ.11: ಸಾಧಾರಣವಾಗಿ ರಸ್ತೆ ಬದಿಯೋ, ಬಸ್ ನಿಲ್ದಾಣದಲ್ಲೋ ಭಿಕ್ಷುಕರು, ನಿರ್ಗತಿಕರು ಕಂಡುಬಂದರೆ ಅವರಿಂದ ಜನ ದೂರ ನಿಲ್ಲುತ್ತಾರೆ. ಅವರೂ ನಮ್ಮಂತೇ ಮನುಷ್ಯರು, ಏನೋ ಕಾರಣದಿಂದ ಅವರಿಗೆ ಈ ಸ್ಥಿತಿ ಬಂದಿದೆ ಅನ್ನುವುದನ್ನು ಜನ ಮರೆಯುತ್ತಾರೆ. ಅವರಲ್ಲೂ ಮನುಷ್ಯತ್ವ ಇದೆಯೆಂದು ಗುರುತಿಸುವ ನಿಸ್ವಾರ್ಥ ಭಾವ ನಮ್ಮಲ್ಲಿ ಇಲ್ಲವಾಗುತ್ತಿದೆ. ಇದೇ ವಿಚಾರ ಇಟ್ಟುಕೊಂಡು ಕಿರುಚಿತ್ರ ಹೆಣೆದಿದ್ದಾರೆ ಪುತ್ತೂರಿನ ಕಲಾವಿದರು.
ಪುತ್ತೂರಿನ ಜ್ಞಾನ ಕ್ರಿಯೇಶನ್ಸ್ ಎನ್ನುವ ಲಾಂಛನದಡಿ 12 ನಿಮಿಷಗಳ ಕಿರುಚಿತ್ರ ತಯಾರಿಸಲಾಗಿದ್ದು, ಇತ್ತೀಚೆಗೆ ಉಪ್ಪಿನಂಗಡಿಯ ಸಭಾಂಗಣ ಒಂದರಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ. 4ನೇ ಕ್ಲಾಸ್ ಓದುತ್ತಿರುವ ಜ್ಞಾನ ರೈ ಎಂಬ ಹೆಣ್ಮಗಳನ್ನು ಮುಖ್ಯವಾಗಿಟ್ಟು ಹೆಣೆದಿರುವ ಕಥಾನಕದಲ್ಲಿ ಸಮಾಜಕ್ಕೆ ಸಂದೇಶ ನೀಡುವ ಅಂಶ ಇದೆ. ಜನರ ಭಾವನೆಯನ್ನು ಕೆದಕುವ ಥಿಯರಿ ಇದೆ. ಶಾಲೆಗೆ ಹೋಗುವ ಬಾಲಕಿಯೊಬ್ಬಳು ನಿರ್ಗತಿಕನಲ್ಲಿ ಮನುಷ್ಯತ್ವ ಗುರುತಿಸಿ, ಸಂತೈಸುವುದೇ ಚಿತ್ರದ ಥೀಮ್.
ಮಾತಿಲ್ಲ. ಸಂಭಾಷಣೆ ಇಲ್ಲ. ಬರೀಯ ಅಭಿನಯ ಮತ್ತು ಹಿನ್ನೆಲೆ ಸಂಗೀತ ಮಾತ್ರ. ಆದರೆ, 12 ನಿಮಿಷಗಳ ಚಿತ್ರವನ್ನು ಅದೇ ನೋಡುವಂತೆ ಮಾಡುತ್ತದೆ. ಪ್ರೇಮರಾಜ್ ಆರ್ಲಪದವು ನಿರ್ದೇಶನ ಮತ್ತು ಅರುಣ್ ರೈ ಪುತ್ತೂರು ಅವರ ಛಾಯಾಗ್ರಹಣ ಒಳ್ಳೆದಾಗಿ ಮೂಡಿಬಂದಿದೆ. ಮಂಗಳೂರಿನ ಹುಡುಗಿ ಕನ್ನಡ ಕೋಗಿಲೆ ಖ್ಯಾತಿಯ ಅಪೇಕ್ಷಾ ಪೈ ಹಾಡಿದ್ದಾರೆ. ಬೇಬಿ ಜ್ಞಾನ ರೈ ಕುರಿಯ, ಭರತ್ ಆಳ್ವ ಸೂರಂಬೈಲ್, ಪ್ರದೀಪ್ ನಾಯರ್, ಜ್ಯೋತಿ ಕೆದಿಲ, ವಸಂತ ಲಕ್ಷ್ಮಿ ಪುತ್ತೂರು ಪಾತ್ರವರ್ಗದಲ್ಲಿದ್ದಾರೆ.
Most Anticipated Short Movie acted by Jnana Rai having a great social message "Nishvarta" has now been released under the banner of Jnana Creations, Puttur.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm