ಬ್ರೇಕಿಂಗ್ ನ್ಯೂಸ್
28-09-20 09:45 am Headline Karnataka News Network ಕ್ರೀಡೆ
ಮುಂಬೈ, ಸೆಪ್ಟಂಬರ್ 28: ಗುರುವಿನಂತೆ ಶಿಷ್ಯ ಎನ್ನುತ್ತಾರೆ. ಈ ದೃಶ್ಯ ನೋಡಿದರೆ ಯಾರು ಕೂಡ ಈ ಮಾತನ್ನು ನಿರಾಕರಣೆ ಮಾಡಲಾಗದು. ಬೌಂಡರಿ ಗೆರೆ ದಾಟಿ ಸಿಕ್ಸರ್ ಅಟ್ಟಿದ್ದ ಚೆಂಡನ್ನು ಆತ ಗಾಳಿಯಲ್ಲಿ ಹಾರುತ್ತಾ ಹಿಡಿದು ಮೈದಾನಕ್ಕೆ ತಿರುಗಿ ಎಸೆಯುವ ದೃಶ್ಯ ಕ್ರಿಕೆಟ್ ಪ್ರೇಮಿಗಳಲ್ಲಿ ಹುಚ್ಚೆಬ್ಬಿಸಿದೆ. ಫೀಲ್ಡಿಂಗ್ ಕ್ಷೇತ್ರದಲ್ಲಿ ವಿಶ್ವಖ್ಯಾತಿ ಗಳಿಸಿರುವ ಜಾಂಟಿ ರೋಡ್ಸ್ ಕಲಿಸಿದ ಪಾಠವನ್ನು ಯಥಾವತ್ತಾಗಿ ಶಿಷ್ಯ ಪಾಲನೆ ಮಾಡಿದ್ದ..!
ಇದು ನಡೆದಿರುವುದು ನಿನ್ನೆಯ ಪಂಜಾಬ್ ಮತ್ತು ರಾಜಸ್ಥಾನ ನಡುವಿನ ಐಪಿಎಲ್ ಪಂದ್ಯದಲ್ಲಿ. ಪಂಜಾಬ್ ತಂಡದ ಕೋಚ್ ಜಾಂಟಿ ರೋಡ್ಸ್. ಪಂಜಾಬ್ ತಂಡದ 224 ರನ್ ಬೆನ್ನತ್ತುವ ಸಂದರ್ಭ, ರಾಜಸ್ಥಾನ ತಂಡದ ಸಂಜು ಸ್ಯಾಮ್ಸನ್ ಸಿಕ್ಸರ್ ಅಟ್ಟಿದ್ದ ಚೆಂಡನ್ನು ಫೀಲ್ಡರ್ ನಿಕೋಲಸ್ ಪೂರಣ್ ಗಾಳಿಯಲ್ಲಿ ಹಾರಾಡುತ್ತಾ ಕ್ಯಾಚ್ ಮಾಡಿದ್ದಾರೆ. ಆದರೆ, ಕ್ಯಾಚ್ ಹಿಡಿದು ನೆಲಕ್ಕೆ ಬಿದ್ದರೆ ಸಿಕ್ಸರ್ ಆಗುವುದರಿಂದ ಚೆಂಡನ್ನು ಹಾಗೆಯೇ ನೆಲಕ್ಕೆ ಬೀಳುವ ಮೊದಲು ಮೈದಾನದತ್ತ ಎಸೆದಿದ್ದಾರೆ.. ಆಮೂಲಕ ಸಿಕ್ಸರ್ ತಡೆದಿದ್ದಲ್ಲದೆ ನಾಲ್ಕು ರನ್ ಉಳಿಸಿದ್ದ ಪೂರಣ್. ಈ ಮಾದರಿಯ ಫೀಲ್ಡಿಂಗ್ ಭಾರೀ ಅಪರೂಪದ್ದಾಗಿದ್ದು ವಿಶ್ವಾದ್ಯಂತ ಕ್ರಿಕೆಟ್ ಪ್ರೇಮಿಗಳನ್ನು ಸೆಳೆದಿದೆ. ಅಷ್ಟೇ ಅಲ್ಲ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ನಾನು ಕ್ರಿಕೆಟ್ ಜೀವನದಲ್ಲಿ ನೋಡೇ ಇಲ್ಲದ ಚಮತ್ಕಾರ ಎಂದು ಟ್ವೀಟ್ ಮೂಲಕ ಉದ್ಗರಿಸಿದ್ದಾರೆ.
ವಿಶೇಷ ಅಂದ್ರೆ, ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್ ಸಚಿನ್ ಟ್ವೀಟನ್ನು ಮರು ಟ್ವೀಟ್ ಮಾಡಿದ್ದು ತುಳುವಿನಲ್ಲಿ "ಶೇ ಎಂಚಿನ ಫೀಲ್ಡಿಂಗ್ ಮಾರ್ರೆ..! " (ಛೇ, ಎಂತ ಫೀಲ್ಡಿಂಗ್ ಮಾರ್ರೆ..) ಎಂದು ಕಮೆಂಟಿಸಿದ್ದು ತುಳುವರಲ್ಲಿ ಕಿಚ್ಚು ಹಚ್ಚಿದೆ. ತುಳುವರು ಈ ಟ್ವೀಟ್ ನೋಡಿ ಫಿದಾ ಆಗಿದ್ದು ಅದನ್ನು ಕಾಪಿ ಮಾಡಿ ಹಂಚುತ್ತಿದ್ದಾರೆ. ಹೀಗಾಗಿ ಕರಾವಳಿ ಸೇರಿ ವಿಶ್ವಾದ್ಯಂತ ಇರುವ ತುಳುವರು ಅಲ್ಲಿನ ವಿಡಿಯೋಗಿಂತಲೂ ಸ್ಟಾರ್ ಸ್ಪೋರ್ಟ್ಸ್ ಟ್ವೀಟ್ ಬಗ್ಗೆಯೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶೇ.. ಎಂಚಿನ ಫೀಲ್ಡಿಂಗ್ ಮಾರ್ರೆ…! 😳😳😳 #RRvKXIP https://t.co/2dJ6C5VIQU
— Star Sports Kannada (@StarSportsKan) September 27, 2020
23-10-25 03:42 pm
HK News Desk
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅರ್ಹ ವ್ಯಕ್ತಿ ;...
22-10-25 08:12 pm
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
23-10-25 03:39 pm
HK News Desk
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
23-10-25 10:52 pm
Mangalore Correspondent
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾ...
23-10-25 07:35 pm
ಜಾನುವಾರು ಸಾಗಾಟಕ್ಕೆ ಪೊಲೀಸರ ತಡೆ ; ಲಾರಿಯಿಂದ ಹಗ್ಗ...
22-10-25 09:55 pm
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
23-10-25 06:53 pm
Mangalore Correspondent
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm