ಬ್ರೇಕಿಂಗ್ ನ್ಯೂಸ್
18-02-23 03:05 pm Source: news18 ಕ್ರೀಡೆ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ದೆಹಲಿಯಲ್ಲಿ ನಡೆಯುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 263 ರನ್ ಗಳಿಗೆ ಆಲೌಟಾಯಿತು. ಆ ಬಳಿಕ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ ಆಸೀಸ್ ವಿರುದ್ಧ ಹಿನ್ನಡೆ ಸಾಧಿಸಿದೆ. ಹೀಗಾಗಿ ಭಾರತ ಈ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಬೌಲರ್ಗಳ ದಾಳಿಗೆ ಕೊಂಚ ತತ್ತರಿಸಿದೆ.
ಆದರೆ ಈ ಟೆಸ್ಟ್ ಸರಣಿಯಲ್ಲಿ ಅಂಪೈರ್ಗಳು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಎರಡನೇ ಟೆಸ್ಟ್ಗೆ ಭಾರತದ ನಿತಿನ್ ಮೆನನ್ ಮತ್ತು ಇಂಗ್ಲೆಂಡ್ನ ಮೈಕೆಲ್ ಗಾಫ್ ಅಂಪೈರ್ಗಳಾಗಿದ್ದಾರೆ. ಮೈಕಲ್ ಗಾಫ್ ಮೊದಲ ದಿನದ ಆಟದಲ್ಲಿ ಎರಡು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರು. ವಾರ್ನರ್ ಎಲ್ಬಿಗೆ ಔಟಾದರು. ಆದರೆ ರಿವ್ಯೂಗೆ ಹೋದ ವಾರ್ನರ್ ಔಟಾಗಿರಲಿಲ್ಲ.
ಭಾರತ ಬ್ಯಾಟಿಂಗ್ ಮಾಡುತ್ತಿರುವಾಗ, ರೋಹಿತ್ ಶರ್ಮಾ ವಿಷಯದಲ್ಲಿ ಮೈಕೆಲ್ ಮತ್ತೊಮ್ಮೆ ತಪ್ಪು ನಿರ್ಧಾರವನ್ನು ಘೋಷಿಸಿದರು. ಬ್ಯಾಟ್ ಗೆ ತಾಗಿ ಪ್ಯಾಡ್ ಗೆ ತಾಗಿದರೂ ಅಂಪೈರ್ ಎಲ್ ಬಿ ಡಿಕ್ಲೇರ್ ಮಾಡಿದರು. ರಿವ್ಯೂಗೆ ಹೋದ ರೋಹಿತ್ ಔಟಾಗಿರಲಿಲ್ಲ. 2ನೇ ದಿನ ನಿತಿನ್ ಮೆನನ್ ಹಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಪೂಜಾರ ನಾಟೌಟ್ ಎಂದು ನೀಡಿದರು. ಆದರೆ ಆಸ್ಟ್ರೇಲಿಯಾ ರಿವ್ಯೂ ತೆಗೆದುಕೊಳ್ಳಲಿಲ್ಲ. ಆದರೆ ಎರಡನೇ ಬಾರಿಯೂ ಪೂಜಾರ ಪ್ರಕರಣದಲ್ಲಿ ಅಂಪೈರ್ ನಾಟೌಟ್ ನೀಡಿದರು. ಆದರೆ ಈ ಬಾರಿ ರಿವ್ಯೂಗೆ ತೆರಳಿದ ಆಸೀಸ್ ಯಶಸ್ವಿಯಾಯಿತು.
ಇದರ ಬಳಿಕ ವಿರಾಟ್ ಕೊಹ್ಲಿಯನ್ನು ಔಟ್ ಎಂದು ಘೋಷಿಸಿದ್ದಕ್ಕಾಗಿ ಆನ್ ಫೀಲ್ಡ್ ಅಂಪೈರ್ ನಿತಿನ್ ಮೆನನ್ ಮತ್ತು ಮೂರನೇ ಅಂಪೈರ್ ವಿರುದ್ಧ ಅಭಿಮಾನಿಗಳು ಕೋಪಗೊಂಡಿದ್ದಾರೆ. ಮ್ಯಾಥ್ಯೂ ಕುನೆಮನ್ ಬೌಲಿಂಗ್ ನಲ್ಲಿ ಕೊಹ್ಲಿ ಡಿಫೆನ್ಸ್ ಆಡಲು ಯತ್ನಿಸಿದರು. ಆದರೆ ಚೆಂಡು ಪ್ಯಾಡ್ಗೆ ಬಡಿಯಿತು. ಎಲ್ಬಿಗೆ ಮನವಿ ಮಾಡಿದರು. ಅಂಪೈರ್ ಔಟ್ ನೀಡಿದರು. ಆದರೆ ಕೊಹ್ಲಿ ರಿವ್ಯೂ ತೆಗೆದುಕೊಂಡರು. ಆಗ ಚೆಂಡು ಪ್ಯಾಡ್ ಮತ್ತು ಬ್ಯಾಟ್ಗೆ ಏಕಕಾಲದಲ್ಲಿ ಬಡಿದಿದ್ದು ಕಂಡುಬಂದಿತು.
ಮೊದಲ ಟೆಸ್ಟ್ನಲ್ಲೂ ಅಂಪೈರ್ಗಳು ಇದೇ ರೀತಿ ತಪ್ಪು ನಿರ್ಧಾರಗಳನ್ನು ನೀಡಿದ್ದರು. ಎರಡೂ ತಂಡಗಳು ಕೂಡ ರಿವ್ಯೂಗೆ ಹೋಗಿ ಯಶಸ್ವಿಯಾಗಿದ್ದವು. ಅಂತರಾಷ್ಟ್ರೀಯ ಪಂದ್ಯವೊಂದರಲ್ಲಿ ಅಂಪೈರ್ಗಳ ನಿರ್ಧಾರಗಳು ಅಚ್ಚರಿ ಮೂಡಿಸಿದೆ.
IND vs AUS 2nd test Virat Kohli Out due to Wrong Decision of umpires.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm