ಬ್ರೇಕಿಂಗ್ ನ್ಯೂಸ್
18-02-23 03:05 pm Source: news18 ಕ್ರೀಡೆ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ದೆಹಲಿಯಲ್ಲಿ ನಡೆಯುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 263 ರನ್ ಗಳಿಗೆ ಆಲೌಟಾಯಿತು. ಆ ಬಳಿಕ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ ಆಸೀಸ್ ವಿರುದ್ಧ ಹಿನ್ನಡೆ ಸಾಧಿಸಿದೆ. ಹೀಗಾಗಿ ಭಾರತ ಈ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಬೌಲರ್ಗಳ ದಾಳಿಗೆ ಕೊಂಚ ತತ್ತರಿಸಿದೆ.
ಆದರೆ ಈ ಟೆಸ್ಟ್ ಸರಣಿಯಲ್ಲಿ ಅಂಪೈರ್ಗಳು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಎರಡನೇ ಟೆಸ್ಟ್ಗೆ ಭಾರತದ ನಿತಿನ್ ಮೆನನ್ ಮತ್ತು ಇಂಗ್ಲೆಂಡ್ನ ಮೈಕೆಲ್ ಗಾಫ್ ಅಂಪೈರ್ಗಳಾಗಿದ್ದಾರೆ. ಮೈಕಲ್ ಗಾಫ್ ಮೊದಲ ದಿನದ ಆಟದಲ್ಲಿ ಎರಡು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರು. ವಾರ್ನರ್ ಎಲ್ಬಿಗೆ ಔಟಾದರು. ಆದರೆ ರಿವ್ಯೂಗೆ ಹೋದ ವಾರ್ನರ್ ಔಟಾಗಿರಲಿಲ್ಲ.


ಭಾರತ ಬ್ಯಾಟಿಂಗ್ ಮಾಡುತ್ತಿರುವಾಗ, ರೋಹಿತ್ ಶರ್ಮಾ ವಿಷಯದಲ್ಲಿ ಮೈಕೆಲ್ ಮತ್ತೊಮ್ಮೆ ತಪ್ಪು ನಿರ್ಧಾರವನ್ನು ಘೋಷಿಸಿದರು. ಬ್ಯಾಟ್ ಗೆ ತಾಗಿ ಪ್ಯಾಡ್ ಗೆ ತಾಗಿದರೂ ಅಂಪೈರ್ ಎಲ್ ಬಿ ಡಿಕ್ಲೇರ್ ಮಾಡಿದರು. ರಿವ್ಯೂಗೆ ಹೋದ ರೋಹಿತ್ ಔಟಾಗಿರಲಿಲ್ಲ. 2ನೇ ದಿನ ನಿತಿನ್ ಮೆನನ್ ಹಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಪೂಜಾರ ನಾಟೌಟ್ ಎಂದು ನೀಡಿದರು. ಆದರೆ ಆಸ್ಟ್ರೇಲಿಯಾ ರಿವ್ಯೂ ತೆಗೆದುಕೊಳ್ಳಲಿಲ್ಲ. ಆದರೆ ಎರಡನೇ ಬಾರಿಯೂ ಪೂಜಾರ ಪ್ರಕರಣದಲ್ಲಿ ಅಂಪೈರ್ ನಾಟೌಟ್ ನೀಡಿದರು. ಆದರೆ ಈ ಬಾರಿ ರಿವ್ಯೂಗೆ ತೆರಳಿದ ಆಸೀಸ್ ಯಶಸ್ವಿಯಾಯಿತು.


ಇದರ ಬಳಿಕ ವಿರಾಟ್ ಕೊಹ್ಲಿಯನ್ನು ಔಟ್ ಎಂದು ಘೋಷಿಸಿದ್ದಕ್ಕಾಗಿ ಆನ್ ಫೀಲ್ಡ್ ಅಂಪೈರ್ ನಿತಿನ್ ಮೆನನ್ ಮತ್ತು ಮೂರನೇ ಅಂಪೈರ್ ವಿರುದ್ಧ ಅಭಿಮಾನಿಗಳು ಕೋಪಗೊಂಡಿದ್ದಾರೆ. ಮ್ಯಾಥ್ಯೂ ಕುನೆಮನ್ ಬೌಲಿಂಗ್ ನಲ್ಲಿ ಕೊಹ್ಲಿ ಡಿಫೆನ್ಸ್ ಆಡಲು ಯತ್ನಿಸಿದರು. ಆದರೆ ಚೆಂಡು ಪ್ಯಾಡ್ಗೆ ಬಡಿಯಿತು. ಎಲ್ಬಿಗೆ ಮನವಿ ಮಾಡಿದರು. ಅಂಪೈರ್ ಔಟ್ ನೀಡಿದರು. ಆದರೆ ಕೊಹ್ಲಿ ರಿವ್ಯೂ ತೆಗೆದುಕೊಂಡರು. ಆಗ ಚೆಂಡು ಪ್ಯಾಡ್ ಮತ್ತು ಬ್ಯಾಟ್ಗೆ ಏಕಕಾಲದಲ್ಲಿ ಬಡಿದಿದ್ದು ಕಂಡುಬಂದಿತು.
ಮೊದಲ ಟೆಸ್ಟ್ನಲ್ಲೂ ಅಂಪೈರ್ಗಳು ಇದೇ ರೀತಿ ತಪ್ಪು ನಿರ್ಧಾರಗಳನ್ನು ನೀಡಿದ್ದರು. ಎರಡೂ ತಂಡಗಳು ಕೂಡ ರಿವ್ಯೂಗೆ ಹೋಗಿ ಯಶಸ್ವಿಯಾಗಿದ್ದವು. ಅಂತರಾಷ್ಟ್ರೀಯ ಪಂದ್ಯವೊಂದರಲ್ಲಿ ಅಂಪೈರ್ಗಳ ನಿರ್ಧಾರಗಳು ಅಚ್ಚರಿ ಮೂಡಿಸಿದೆ.
IND vs AUS 2nd test Virat Kohli Out due to Wrong Decision of umpires.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm