ಬ್ರೇಕಿಂಗ್ ನ್ಯೂಸ್
11-07-24 12:17 pm HK News Desk ಕ್ರೀಡೆ
ಮ್ಯೂನಿಕ್, ಜುಲೈ.11: ಯಂಗ್ ಸೆನ್ಸೇಶನ್ 16ರ ಹರೆಯದ ಲ್ಯಾಮಿನ್ ಯಮಾಳ್ ದಾಖಲಿಸಿದ ಅದ್ಭುತ ಗೋಲು ಹಾಗೂ ಡ್ಯಾನಿ ಒಲ್ಮೊ ಮೊದಲಾರ್ಧದಲ್ಲೇ ಬಾರಿಸಿದ ಗೋಲಿನ ನೆರವಿನಿಂದ ಸ್ಪೇನ್ ತಂಡ 2-1 ಗೋಲಿನ ಅಂತರದಿಂದ ಬಲಿಷ್ಠ ಫ್ರಾನ್ಸ್ ತಂಡವನ್ನು ಸೋಲಿಸಿ ಯುರೋ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪ್ರವೇಶಿಸಿದೆ. ಇನ್ನೊಂದು ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ತಂಡ ನೆದರ್ಲೆಂಡ್ಸ್ ವಿರುದ್ಧ ಗೆಲುವು ಸಾಧಿಸಿ ಫೈನಲ್ ಗೇರಿದೆ.
ಜಿದ್ದಾಜಿದ್ದಿನ ಎರಡನೇ ಸೆಮಿಫೈನಲ್ ನಲ್ಲಿ ಸ್ಪೇನ್ ತಂಡದ ವಿರುದ್ಧ ಫ್ರಾನ್ಸ್ ಗೆ ರ್ಯಾಂಡಲ್ ಕೊಲೊ ಮುವಾನಿ ಆರಂಭದಲ್ಲೇ ಮುನ್ನಡೆ ತಂದಿತ್ತರು. ಎಂಟನೇ ನಿಮಿಷದಲ್ಲಿ ಒಸ್ಮಾನ್ ಡಾಂಬೆಲೆ ನೀಡಿದ ಪಾಸ್ ಅನ್ನು ಕೈಲಿಯಾನ್ ಎಂಬಾಪೆ ಗೋಲ್ ಪೋಸ್ಟ್ ನತ್ತ ಕೊಂಡೊಯ್ದಿದ್ದು ಅದನ್ನು ಮುವಾನಿ ಗೋಲಾಗಿಸಿ ಮುನ್ನಡೆ ತಂದರು. 20ನೇ ನಿಮಿಷದಲ್ಲಿ ಲ್ಯಾಮಿನ್ ಯಮಾಳ್ 25 ಯಾರ್ಡ್ ದೂರದಿಂದ ಒದ್ದ ಚೆಂಡು ಗೋಲು ಪೆಟ್ಟಿಗೆ ಸೇರುವುದರೊಂದಿಗೆ ಸ್ಪೇನ್ ತಂಡ ಸಮಬಲ ಸಾಧಿಸಿತು. ಈ ಮೂಲಕ ಯೂರೋ ಕಪ್ ಇತಿಹಾಸದಲ್ಲಿ ಗೋಲು ಬಾರಿಸಿದ ಅತಿ ಕಿರಿಯ ಆಟಗಾರನೆಂಬ ದಾಖಲೆಯನ್ನು ಯಮಾಳ್ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು. ನಾಲ್ಕೇ ನಿಮಿಷಗಳ ಅಂತರದಲ್ಲಿ ಸ್ಪೇನ್ ತಂಡಕ್ಕೆ ಡ್ಯಾನಿ ಒಲ್ಮೊ ಎರಡನೇ ಗೋಲು ದಾಖಲಿಸಿ ಮುನ್ನಡೆ ಒದಗಿಸಿದರು. ಇದಾದ ಬಳಿಕ ಫ್ರಾನ್ಸ್ ತಂಡ ಸಾಕಷ್ಟು ಪ್ರತಿರೋಧ ತೋರಿದರೂ ಗೋಲು ಸಮಬಲಗೊಳಿಸಲು ಎದುರಾಳಿ ತಂಡ ಅವಕಾಶ ನೀಡಲಿಲ್ಲ. ಇದರಿಂದ ಎಂಬಾಪೆ ಪಡೆ ಯುರೋ ಕಪ್ ಫೈನಲ್ ಗೇರದೆ ನಿರ್ಗಮಿಸುವಂತಾಯಿತು.
ಇನ್ನೊಂದು ಸೆಮಿಫೈನಲ್ ಹೋರಾಟದಲ್ಲಿ ಇಂಗ್ಲೆಂಡ್ ತಂಡ 2-1ರಿಂದ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ಬದಲಿ ಆಟಗಾರ ಒಲೀ ವಾಟ್ಕಿನ್ಸ್ 91ನೇ ನಿಮಿಷದಲ್ಲಿ ದಾಖಲಿಸಿದ ಗೋಲಿನ ನೆರವಿನಿಂದ ಇಂಗ್ಲೆಂಡ್ ಗೆಲುವಿನ ನಗೆ ಬೀರಿತು. ಪಂದ್ಯದ ಏಳನೇ ನಿಮಿಷದಲ್ಲೇ ನೆದರ್ಲೆಂಡ್ಸ್ ಗೆ ಕ್ಸಾವಿ ಸೈಮನ್ಸ್ ಮುನ್ನಡೆ ಒದಗಿಸಿದರು. ಕೆಲವೇ ನಿಮಿಷಗಳಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಇದನ್ನು ಸರಿಗಟ್ಟಿದ್ದರು.
The Euro 2024 final is set and Spain is the favorite heading into Sunday’s meeting with England. The Spaniards emerged as the tournament favorite after beating Germany in a quarterfinal and remain the favorite after getting by France in a semifinal.
02-06-26 10:42 pm
HK News Desk
ಕಾಂಗ್ರೆಸ್ಗೆ ಮತ ಹಾಕುವ ಬದಲು ಕುಕ್ಕರ್ ಅಥವಾ ಎಸ್ಡ...
01-06-26 09:44 pm
ಫೈನಲ್ ಸೋಲಿನ ಬೆನ್ನಲ್ಲೇ ಜಿಟಿಗೆ ಮತ್ತೊಂದು ಶಾಕ್...
01-06-26 11:31 am
ದೇಶದ ಸಿರಿವಂತ ಸಿಎಂ ಆಗಲಿದ್ದಾರೆ 'ಕನಕಪುರ ಬಂಡೆ' ಡಿ...
31-05-26 09:23 pm
ಜೂನ್ 3ರಂದು 24ನೇ ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣ...
30-05-26 06:45 pm
02-06-26 10:40 am
HK News Staffer
ನಟ ವಿಜಯ್ ಹಾದಿಯಲ್ಲೇ ಅಣ್ಣಾಮಲೈ ! ಬಿಜೆಪಿ ಬಿಟ್ಟು ದ...
02-06-26 10:01 am
ಪ್ರಧಾನಿ ಮೋದಿ ಕರೆ ಎಫೆಕ್ಟ್ ; ದೇಶಾದ್ಯಂತ ಚಿನ್ನ ಖರ...
31-05-26 09:25 pm
ಸೌದಿ ಜೈಲಿನಲ್ಲಿ ಎರಡು ದಶಕಗಳ ಅಗ್ನಿಪರೀಕ್ಷೆ; 34 ಕೋ...
29-05-26 06:17 pm
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
02-06-26 04:18 pm
HK News Staffer
Mithun Rai, Dk Shivakumar CM, Mangalore: ಮುಂದ...
02-06-26 01:18 pm
Ut Khader, Mangalore: ಡಿಸಿಎಂ ಆಗೋದು ಮಾಧ್ಯಮದಲ್ಲ...
02-06-26 01:06 pm
Ivan Dsouza, Congress: ಐವಾನ್ ಡಿಸೋಜಗೆ ಸಚಿವ ಸ್ಥ...
01-06-26 07:05 pm
ಬೆಂಗಳೂರು–ಮಂಗಳೂರು ವಂದೇ ಭಾರತ್ ಟ್ರಯಲ್ಗೆ ಬ್ರೇಕ್...
01-06-26 02:22 pm
02-06-26 09:27 pm
HK News Staffer
Mangalore Robbery, Forest Jeep: ಅರಣ್ಯ ಇಲಾಖೆಯ...
02-06-26 02:58 pm
ಶಿರೂರಿನ ಹೊಳೆಯಲ್ಲಿ ಮುಳುಗಿ 16 ವರ್ಷದ ವಿದ್ಯಾರ್ಥಿ...
01-06-26 08:16 pm
ಪಿಲಾತಬೆಟ್ಟು ; ದೈವಕ್ಕೆ ತಂಬಿಲ ಮಾಡ್ತಿದ್ದಾಗಲೇ ಕುಡ...
01-06-26 12:40 pm
ನಾಲ್ಕು ಪುಟಗಳ ಡೆತ್ನೋಟ್ ಬರೆದಿಟ್ಟು ಲಾಡ್ಜ್ನಲ್ಲಿ...
31-05-26 08:25 pm