ಬ್ರೇಕಿಂಗ್ ನ್ಯೂಸ್
01-09-23 02:11 pm Source: News18 Kannada ಕ್ರೀಡೆ
ನಾಳೆ ಹೈವೋಲ್ಟೇಜ್ ಡೇ ಎಂದರೆ ತಪ್ಪಾಗಲ್ಲ. ಯಾಕೆಂದ್ರೆ ಏಷ್ಯಾ ಕಪ್ನಲ್ಲಿ ಟೀಂ ಇಂಡಿಯಾ ವರ್ಸಸ್ ಪಾಕ್ ಪಂದ್ಯ ಇದೆ. . ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಾಸಿಮ್ ಶಾ ಪಾಕಿಸ್ತಾನದ ಪಾಕಿಸ್ತಾನ ತಂಡದ ಮುಖ್ಯ ಅಸ್ತ್ರ ಅಂದ್ರೆ ತಪ್ಪಾಗಲ್ಲ. ಸದ್ಯ ಈ ಮೂವರು ಬೌಲರ್ಗಳು ಕೂಡ ಸೂಪರ್ ಫಾರ್ಮ್ನಲ್ಲಿದ್ದಾರೆ. ಗಂಟೆಗೆ 140 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಾ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ.
ಏಷ್ಯಾ ಕಪ್ 2023 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಸೆಪ್ಟೆಂಬರ್ 2 ರಂದು ನಡೆಯಲಿದೆ. ಭಾರತವನ್ನು ಅಲುಗಾಡಿಸಲು ಸಿದ್ಧ ಎಂದು ಪಾಕಿಸ್ತಾನದ ವೇಗಿ ಮೂವರು ಹೇಳದೆ ಹೇಳಿದ್ದಾರೆ. ನೇಪಾಳ ವಿರುದ್ಧದ ಪಂದ್ಯದಲ್ಲಿ ಮೊದಲ ಓವರ್ ಬೌಲ್ ಮಾಡಿದ ಶಾಹೀನ್ ಅಫ್ರಿದಿ ಎರಡು ವಿಕೆಟ್ ಕಬಳಿಸಿದರು. ಆರಂಭದಲ್ಲೇ ಅಫ್ರಿದಿ ಹಾಗೂ ನಸೀಮ್ ಶಾ ವಿಕೆಟ್ ಕಬಳಿಸುವಲ್ಲಿ ಬಲಿಷ್ಠರಾಗಿದ್ದರು.



ನಾಳೆ ಭಾರತವು ರೋಹಿತ್ ಶರ್ಮಾ ಜೊತೆ ಇಶಾನ್ ಕಿಶನ್ ಅವರನ್ನು ಓಪನರ್ ಆಗಿ ಕಳುಹಿಸಬೇಕಾಗುತ್ತದೆ. ಶುಭಮನ್ ಗಿಲ್ಗೆ ಹೋಲಿಸಿದರೆ, ಇಶಾನ್ ಕಿಶನ್ ಆರಂಭದಿಂದಲೇ ಬ್ಯಾಟಿಂಗ್ ಮಾಡಬಲ್ಲರು. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಇಶಾನ್ ಕಿಶನ್ ಹ್ಯಾಟ್ರಿಕ್ ಅರ್ಧಶತಕಗಳ ಮೂಲಕ ಮಿಂಚಿದ್ದು ಗೊತ್ತೇ ಇದೆ. ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟವಾಡುವ ಇಶಾನ್ ಕಿಶನ್ ಅವರನ್ನು ಓಪನರ್ ಆಗಿ ಕಳುಹಿಸಿದರೆ ಪಾಕ್ ಬೌಲರ್ ಗಳಿಗೆ ಬೆವರಿಳಿಸೋದು ಪಕ್ಕಾ.



ಪಾಕಿಸ್ತಾನದ ಬೌಲರ್ಗಳ ಆತ್ಮವಿಶ್ವಾಸಕ್ಕೆ ಧಕ್ಕೆ ತರಬೇಕಾದರೆ ಆರಂಭದಿಂದಲೇ ಪ್ರತಿದಾಳಿ ನಡೆಸಬೇಕು. ಅದು ಆಗದಿದ್ದರೆ ಪಾಕಿಸ್ತಾನದ ವೇಗಿಗಳು ಭಾರತದ ಮೇಲೆ ಒತ್ತಡ ಹೇರುವ ಅಪಾಯವಿದೆ. ಎಡಗೈ ವೇಗಿಗಳ ಎದುರು ರೋಹಿತ್ ಶರ್ಮಾ ಹಲವು ಬಾರಿ ಎಡವಿದ್ದಾರೆ. ಇಂತಹ ಸಮಯದಲ್ಲಿ ರೋಹಿತ್ ಜೊತೆಗೆ ಇಶಾನ್ ಕಿಶನ್ ಓಪನರ್ ಆಗಿ ಕಣಕ್ಕೆ ಇಳಿದರೆ ಉತ್ತಮ. ಆಗ ರೋಹಿತ್ ಕ್ರೀಸ್ ನಲ್ಲಿ ಉಳಿಯಲು ನಿಧಾನವಾಗಿ ಆಡಿದರೂ, ಈ ಕಡೆ ಇಶಾನ್ ಕಿಶನ್ ಜೋರಾಗಿ ಆಡುವುದರಿಂದ ಸ್ಕೋರ್ ಬೋರ್ಡ್ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಶುಭಮನ್ ಗಿಲ್ ಅವರನ್ನು ಮೂರನೇ ಸ್ಥಾನದಲ್ಲಿ ಆಡಸಿಬೇಕು, ವಿರಾಟ್ ಕೊಹ್ಲಿಯನ್ನು ನಾಲ್ಕನೇ ಸ್ಥಾನಕ್ಕೆ ಕಳುಹಿಸಬೇಕು. ಆ ನಂತರ ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ ಮತ್ತು ಜಡೇಜಾ ಬ್ಯಾಟಿಂಗ್ ಮಾಡಿದರೆ ಉತ್ತಮ.
India vs Pakistan Asia Cup 2023 Live Cricket Ishan Kishan Should Play as Opener.
07-11-25 09:59 pm
HK News Desk
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm