ಬ್ರೇಕಿಂಗ್ ನ್ಯೂಸ್
27-06-24 11:15 am HK News Desk ಕ್ರೀಡೆ
ಗಯಾನ, (ವೆಸ್ಟ್ ಇಂಡೀಸ್) ಜೂನ್ 27: 1992ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಯ ಯಾವುದೇ ಪ್ರಕಾರದ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ತಲುಪಲು ವಿಫಲವಾಗುತ್ತಲೇ ಚೋಕರ್ಸ್ ಎಂಬ ಹಣೆಪಟ್ಟಿ ಹೊತ್ತಿದ್ದ ದಕ್ಷಿಣ ಆಫ್ರಿಕಾ ತನಗಂಟಿದ್ದ ಅಪವಾದದಿಂದ ಹೊರಬಂದಿದ್ದು ಟಿ 20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ಪ್ರವೇಶ ಮಾಡಿದೆ. ಗುರುವಾರ ನಡೆದ ಮೊದಲ ಸೆಮಿಫೈನಲ್ ನಲ್ಲಿ ಆಫ್ರಿಕನ್ನರು ಅಫ್ಘಾನಿಸ್ತಾನ ತಂಡವನ್ನು ಒಂಬತ್ತು ವಿಕೆಟ್ ಅಂತರದಿಂದ ನಿರಾಯಾಸವಾಗಿ ಸೋಲಿಸಿ ಶಾಪ ವಿಮೋಚನೆ ಮಾಡಿಕೊಂಡಿದ್ದಾರೆ.
ಕಠಿಣ ಪಿಚ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಯಾವ ಹಂತದಲ್ಲೂ ಹರಿಣಗಳ ಬೌಲಿಂಗ್ ದಾಳಿಗೆ ಪ್ರತ್ಯುತ್ತರ ನೀಡುವಲ್ಲಿ ವಿಫಲವಾಯಿತು. ಮೊದಲ ಓವರ್ನಲ್ಲೇ ರಹಮಾನುಲ್ಲಾ ಗುರ್ಬಾಜ್ (0) ಖಾತೆ ತೆರೆಯದೆ ನಿರ್ಗಮನ ಕಂಡ ನಂತರ ಯಾವ ಬ್ಯಾಟರ್ ಗಳೂ ಹರಿಣಗಳ ಬೌಲಿಂಗ್ ದಾಳಿಯನ್ನು ಮೆಟ್ಟಿ ನಿಲ್ಲಲಿಲ್ಲ. ಇಡೀ ಅಫ್ಘನ್ ತಂಡದಲ್ಲಿ ಅಜ್ಮತುಲ್ಲಾ ಒಮರ್ಜಾಯಿ(10) ಒಬ್ಬರಷ್ಟೇ ಎರಡಂಕೆ ತಲುಪಿದರು. ದಕ್ಷಿಣ ಆಫ್ರಿಕಾ ಇತರೆ ರೂಪದಲ್ಲಿ ನೀಡಿದ 13 ರನ್ ಗಳೇ ಅಫ್ಘನ್ ಪಾಲಿನ ಗರಿಷ್ಠ ಮೊತ್ತವಾಗಿತ್ತು. ಆಫ್ರಿಕಾ ಪರ ತಬ್ರೈಜ್ ಶಮ್ಸಿ(6/3), ಮಾರ್ಕೋ ಜಾನೆಸನ್(16/3), ಆನ್ರಿಕ್ ನೋಕಿಯ(7/2), ಕಾಗಿಸೊ ರಬಾಡ(14/2) ಬಿಗು ಬೌಲಿಂಗ್ ದಾಳಿಯ ಮೂಲಕ ಎದುರಾಳಿ ತಂಡದ ಬ್ಯಾಟಿಂಗ್ ಪಡೆಯನ್ನು ಬುಡಮೇಲು ಮಾಡಿದರು. ಪರಿಣಾಮ ಅಫ್ಘಾನಿಸ್ತಾನ ತಂಡ 11.5 ಓವರ್ಗಳಲ್ಲಿ 56 ರನ್ ಗೆ ಆಲೌಟಾಯಿತು. ಇದು ಟಿ 20 ವಿಶ್ವಕಪ್ ನಾಕೌಟ್ ಹಂತದಲ್ಲಿ ದಾಖಲಾದ ಅತ್ಯಂತ ಕಡಿಮೆ ಮೊತ್ತ ಎನಿಸಿತು.
ಸುಲಭ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿಕಾಕ್(5)ರನ್ನು ಬೇಗನೆ ಕಳೆದುಕೊಂಡರೂ ರೀಜಾ ಹೆಂಡ್ರಿಕ್ಸ್ ಮತ್ತು ನಾಯಕ ಐಡನ್ ಮಾರ್ಕ್ರಂ ಹೆಚ್ಚಿನ ಆಘಾತವಾಗದಂತೆ ಗೆಲುವಿನ ಓಟ ಪೂರೈಸಿದರು. 8.5 ಓವರ್ನಲ್ಲೇ ಒಂದು ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿ ಫೈನಲ್ ಪ್ರವೇಶಿಸಿತು.
ಸಂಕ್ಷಿಪ್ತ ಸ್ಕೋರ್ಅ ಫ್ಘಾನಿಸ್ತಾನ 11.5 ಓವರ್ಗಳಲ್ಲಿ 56(ಇತರೆ ಸ್ಕೋರ್ 13, ಒಮರ್ಜಾಯಿ 10, ಶಮ್ಸಿ 6/3, ಜಾನೆಸನ್ 16/3)
ದಕ್ಷಿಣ ಆಫ್ರಿಕಾ 8.5 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 60(ಹೆಂಡ್ರಿಕ್ಸ್ 29*, ಮಾರ್ಕ್ರಂ 23*, ಫರೂಕಿ 11/1)
A long, tortuous World Cup title drought is closer than ever to ending for South Africa after a nine-wicket win over first-time semifinalist Afghanistan at the global Twenty20 cricket tournament on Wednesday.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm