ಬ್ರೇಕಿಂಗ್ ನ್ಯೂಸ್
24-12-20 04:17 pm Source: MYKHEL Madhukara Shetty ಕ್ರೀಡೆ
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಹೀನಾಯ ಸೋಲನ್ನು ಟೀಮ್ ಇಂಡಿಯಾ ಹಿಂದಕ್ಕೆ ಬಿಟ್ಟು ಮುಂದುವರಿಯಬೇಕು ಹಾಗೂ ಹೊಸ ಆರಂಭವನ್ನು ಈ ಮೂಲಕ ಪಡೆದುಕೊಳ್ಳಬೇಕು. ಇದು ಆಟಗಾರರ ಬಲ ಹಾಗೂ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
ಇದೆ ಸಂದರ್ಭದಲ್ಲಿ ವಿವಿಎಸ್ ಲಕ್ಷ್ಮಣ್ ಒಂದು ಕೆಟ್ಟ ಸಂದರ್ಭದ ಪ್ರದರ್ಶನದಿಂದ ಭಾರತದ ಆಟದ ಗುಣಮಟ್ಟವನ್ನು ವ್ಯಾಖ್ಯಾನಿಸಲಾಗದು. ಈಗ ಭಾರತ ತಂಡದಲ್ಲಿ ಹೊಸ ಹೀರೋಗಳು ಹುಟ್ಟಲು ಉತ್ತಮ ಅವಕಾಶವಿದೆ. ಈ ಸಂದರ್ಭವನ್ನು ನೋಡಿಕೊಂಡು ಸಮಯವನ್ನು ಅದ್ಭುತವಾಗಿ ಬಳಸಿಕೊಳ್ಳಬಹುದು ಎಂದಿದ್ದಾರೆ.
"ಈ ಕೆಟ್ಟ ಸಂದರ್ಭ ಆಟಗಾರರ ಗುಣಮಟ್ಟವನ್ನು ವ್ಯಾಖ್ಯಾನಿಸಲಾಗದು. ಅವರೆಲ್ಲಾ ವಿಶ್ವದ ಅನೇಕ ಕಡೆಗಳಲ್ಲಿ ಸಾಕಷ್ಟು ಆಟವನ್ನು ಆಡಿದವರಾಗಿದ್ದಾರೆ. ಮೊದಲ ಟೆಸ್ಟ್ನ ಮೊದಲ ಆರು ಸೆಶನ್ಗಳಲ್ಲಿ ಭಾತರತ ಉತ್ತಮ ಆಟವನ್ನು ಪ್ರದರ್ಶಿಸಿತ್ತು. ಆದರೆ 70 ನಿಮಿಷಗಳ ಕೆಟ್ಟ ಸಂದರ್ಭ ಎಲ್ಲವನ್ನೂ ಹಾಳು ಮಾಡಿತ್ತು" ಎಂದು ವಿವಿಎಸ್ ಲಕ್ಷ್ಮಣ್ ಟೈಮ್ಸ್ ಆಫ್ ಇಂಡಿಯಾಗೆ ಬರೆದ ಅಂಕಣದಲ್ಲಿ ಹೇಳಿದ್ದಾರೆ. "ಈಗ ಟೆಸ್ಟ್ ಸರಣಿಯ ಕಾಲು ಭಾಗ ಮಾತ್ರವೇ ಅಂತ್ಯವಾಗಿದೆ. ಇನ್ನೂ ಮೂರು ಪಂದ್ಯಗಳು ನಡೆಯಬೇಕಾಗಿರುವುದರಿಂದ ಆಡಲು ಎಲ್ಲವೂ ಇದೆ. ಇದು ತಂಡದ ಸಾಮರ್ಥ್ಯ ಹಾಗೂ ಬಲದ ನಿಜವಾದ ಪರೀಕ್ಷೆಯಾಗಿರಲಿದೆ" ಎಮದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
"ತಂಡದಲ್ಲಿ ಹೊಸ ಮ್ಯಾಚ್ವಿನ್ನರ್ಗಳು ಸೃಷ್ಟಿಯಾಗಲು ಇದು ನಿಜಕ್ಕೂ ಅತ್ಯುತ್ತಮವಾದ ಸಂದರ್ಭವಾಗಿದೆ. ಈ ಸಂದರ್ಭವನ್ನು ಬಳಸಿಕೊಂಡು ತಮ್ಮ ಕೇ ಮೇಲೆತ್ತಿ ತಂಡಕ್ಕೆ ಆಸರೆಯಾಗಬಹುದು. ಇದು ಅಡಿಲೇಡ್ ಸೋಲನ್ನು ಹಿಂದಕ್ಕೆ ತಳ್ಳಿ ಹೊಸ ಆರಂಬವನ್ನು ಪಡೆಯಲು ಅತ್ಯುತ್ತಮವಾದ ಸಂದರ್ಭ" ಎಂದು ವಿವಿಎಸ್ ಲಕ್ಷ್ಮಣ್ ತಮ್ಮ ಅಂಕಣದಲ್ಲಿ ಸ್ಪೂರ್ತಿಯ ಮಾತುಗಳನ್ನು ಆಡಿದ್ದಾರೆ.
This News Article is a Copy of MYKHEL
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm