ಬ್ರೇಕಿಂಗ್ ನ್ಯೂಸ್
02-01-21 11:41 am Source: MYKHEL Madhukara Shetty ಕ್ರೀಡೆ
ರಾಂಚಿ, ಜ.2: ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಫ್ರಿನ್ಸ್ ಆಫ್ ರಾಂಚಿ ಎಂದೇ ಖ್ಯಾತರಾಗಿರುವ ಮಹೇಂದ್ರ ಸಿಂಗ್ ಧೋನಿ ಅವರ ವಿಭಿನ್ನ ಅಭಿರುಚಿಗಳು ಕ್ರಿಕೆಟ್ ಪ್ರೇಮಿಗಳಿಗೆ ತಿಳಿದೇ ಇದೆ. ಕ್ರಿಕೆಟ್ ಹೊರತುಪಡಿಸಿ ಕೃಷಿ ಚಟುವಟಿಕೆಗಳ ಬಗ್ಗೆಯೂ ಧೋನಿ ಬಹಳ ಆಸಕ್ತಿ ಹೊಂದಿದವರಾಗಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ರಾಂಚಿಯಲ್ಲಿರುವ ಧೋನಿ ಫಾರ್ಮ್ ಹೌಸ್ನಲ್ಲಿ ತರಕಾರಿಗಳು ಬೆಳೆದು ಕಟಾವಿನ ಹಂತದಲ್ಲಿದೆ.
ಎಂಎಸ್ ಧೋನಿ ಫಾರ್ಮ್ ಹೌಸ್ನಲ್ಲಿ ಬೆಳೆದ ತರಕಾರಿಗಳನ್ನು ವಿದೇಶಕ್ಕೆ ರಫ್ತು ಮಾಡಲು ಸಿದ್ಧತೆಗಳು ನಡೆಯುತ್ತಿದೆ. ಇಲ್ಲಿ ಬೆಳೆದ ತರಕಾರಿಗಳನ್ನು ದುಬೈಗೆ ರವಾನಿಸಲಾಗುತ್ತಿದ್ದು ಅದಕ್ಕೆ ಪೂರಕವಾದ ಅಂತಿಮ ಹಂತದ ಸಿದ್ಧತೆಗಳು ಈಗ ಧೋನಿಯ ಫಾರ್ಮ್ ಹೌಸ್ನಲ್ಲಿ ನಡೆಯುತ್ತಿದೆ.
ಧೋನಿ ಫಾರ್ಮ್ ಹೌಸ್ನಲ್ಲಿ ಬೆಳೆದ ತರಕಾರಿಗಳ ಮಾರಾಟಕ್ಕೆ ಸಂಬಂಧಪಟ್ಟ ಮಾತುಕತೆಗಳು ಅಂತಿಮ ಹಂತದಲ್ಲಿದ್ದು ತರಕಾರಿಗಳನ್ನು ದುಬೈಗೆ ಕಳುಹಿಸಲು ಏಜೇನ್ಸಿಗಳನ್ನು ಕೂಡ ಆಯ್ಕೆ ಮಾಡಿಕೊಳ್ಳಲಾಗಿದೆ. ಝಾರ್ಖಂಡ್ನ ಕೃಷಿ ಇಲಾಕೆ ಎಂಎಸ್ ಧೋನಿ ತೋಟದಲ್ಲಿ ಬೆಳೆದ ತರಕಾರಿಗಳನ್ನು ವಿದೇಶಕ್ಕೆ ರವಾನಿಸುವ ಹೊಣೆಹೊತ್ತುಕೊಂಡಿದೆ.
ಝಾರ್ಖಂಡ್ನ ಸೆಂಬೋ ಗ್ರಾಮದ ರಿಂಗ್ರೋಡ್ಗೆ ಸಮೀಪದಲ್ಲಿ ಎಂಎಸ್ ಧೋನಿಯ ಪಾರ್ಮ್ ಹೌಸ್ ಇದೆ. ಇಲ್ಲಿ ಸ್ಟ್ರಾಬೆರ್ರಿ, ಕ್ಯಾಬೇಜ್, ಟೊಮ್ಯಾಟೋ, ಕೋಸುಗಡ್ಡೆ, ಬಟಾಣಿ ಪಪ್ಪಾಯ ಸೇರಿದಂತೆ ಸಾಕಷ್ಟು ತರಕಾರಿ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. 43 ಎಕ್ರೆಯಲ್ಲಿರುವ ಪಾರ್ಮ್ ಹೌಸ್ನಲ್ಲಿ 10 ಎಕ್ರೆ ಸ್ಥಳವನ್ನು ಇವುಗಳಿಗಾಗಿಯೇ ಧೋನಿ ಮೀಸಲಿಟ್ಟಿದ್ದಾರೆ.
ಧೋನಿ ತೋಟದಲ್ಲಿ ಬೇಳೆಯಲಾಗುತ್ತಿರುವ ಕ್ಯಾಬೇಜ್, ಟೊಮ್ಯಾಟೋ ಹಾಗೂ ಬಟಾಣಿ ಕಾಳುಗಳಿಗೆ ರಾಂಚಿಯ ಮಾರುಕಟ್ಟೆಯಲ್ಲಿ ಅಪಾರವಾದ ಬೇಡಿಕೆಯಿದೆ. ಈಗ ರಾಂಚಿಯಿಂದ ನೇರವಾಗಿ ದುಬೈಗೆ ಹಾರುವ ಮೂಲಕ ಝಾರ್ಖಂಡ್ ರೈತರಿಗೆ ದುಬೈನಲ್ಲಿ ಮಾರುಕಟ್ಟೆಗೆ ವೇದಿಕೆ ಒದಗಿಸಲು ಈ ಮೂಲಕ ಧೋನಿ ಕೈಜೋಡಿಸಿದ್ದಾರೆ.
This News Article is a Copy of MYKHEL
19-04-24 11:17 pm
HK NEWS
Actress Priya Savadi, Hubballi Neha Murder: ಅ...
19-04-24 07:58 pm
Hubbali Neha Murder, CM Siddaramaiah: ವೈಯಕ್ತಿ...
19-04-24 04:27 pm
Hubballi Murder Neha, Parameshwar: ಹುಬ್ಬಳ್ಳಿ...
19-04-24 04:08 pm
ಶಿವಮೊಗ್ಗ ಸಂಸದ ರಾಘವೇಂದ್ರ 73 ಕೋಟಿ ಆಸ್ತಿ ; ಪತ್ನಿ...
19-04-24 01:41 pm
17-04-24 08:42 pm
HK News Desk
Gujarat, Road Accident: ನಿಂತಿದ್ದ ಟ್ರಕ್ಗೆ ಗುದ...
17-04-24 07:07 pm
Dubai, Oman Rain, flood; ಧಾರಾಕಾರ ಮಳೆಗೆ ಕೊಚ್ಚಿ...
17-04-24 12:53 pm
29 Naxalites killed in Kanker encounter, Chha...
16-04-24 07:50 pm
ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ ; ಏಳು ಮಂದಿ ದುರ್...
16-04-24 05:09 pm
19-04-24 10:11 pm
Mangalore Correspondent
Mangalore accident, Kulur: ಕೋಡಿಕಲ್ ಕ್ರಾಸ್ ನಲ್...
19-04-24 09:55 pm
Mangalore election, 144 section: ಲೋಕಸಭೆ ಚುನಾವ...
19-04-24 08:32 pm
Kalakul, diploma course: ಕಲಾಕುಲ್ ನಾಟಕ ತಂಡದಿಂದ...
19-04-24 05:18 pm
Congress MP Padmaraj, Bantwal: ಬಂಟ್ವಾಳ ಕ್ಷೇತ್...
19-04-24 02:30 pm
19-04-24 10:25 pm
Mangalore Correspondent
Mangalore Acid Attack, EXAM: ಆ್ಯಸಿಡ್ ದಾಳಿಗೀಡಾ...
19-04-24 09:25 pm
Hubballi student Neha murder: ಹುಬ್ಬಳ್ಳಿ ಕಾಲೇ...
19-04-24 03:43 pm
Gadag Murder news, four killed; ನಗರ ಸಭೆ ಉಪಾಧ್...
19-04-24 09:27 am
Bangalore Double Murder: 'ಕರಿಮಣಿ ಮಾಲೀಕ'ನಿಗೆ ತ...
18-04-24 10:03 pm