ಬ್ರೇಕಿಂಗ್ ನ್ಯೂಸ್
09-01-21 03:58 pm Source: MYKHEL ಕ್ರೀಡೆ
ಗೋವಾ: ತನ್ನ ಶ್ರೇಷ್ಠ ಲಯ ಕಂಡುಕೊಂಡಂತ್ತಿರುವ ಹೈದರಾಬಾದ್ ಎಫ್ಸಿ ತಂಡ ಇಲ್ಲಿ ನಡೆಯುತ್ತಿರುವ ಪ್ರಸಕ್ತ ಸಾಲಿನ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ 51ನೇ ಲೀಗ್ ಪಂದ್ಯದಲ್ಲಿ ಅಪಾಯಕಾರಿ ನಾರ್ತ್ಈಸ್ಟ್ ಯುನೈಟೆಡ್ ಎಫ್ಸಿ ತಂಡವನ್ನು ಬಗ್ಗುಬಡಿದಿದೆ. ಇಲ್ಲಿನ ತಿಲಕ್ ಮೈದಾನ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಹೈದರಾಬಾದ್ ಎಫ್ಸಿ ತಂಡ ಒತ್ತಡ ಮೆಟ್ಟಿನಿಂತು 4-2 ಗೋಲ್ಗಳಿಂದ ನಾರ್ತ್ಈಸ್ಟ್ ಯುನೈಟೆಡ್ ಎಫ್ಸಿ ತಂಡವನ್ನು ಮಣಿಸಿ ಸಂಪೂರ್ಣ 3 ಅಂಕಗಳನ್ನು ತನ್ನದಾಗಿಸಿಕೊಂಡಿತು.
ಈ ಅಮೋಘ ಜಯದೊಂದಿಗೆ ಹೈದರಾಬಾದ್ ತಂಡ ಇದೀಗ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಆಡಿದ ಒಟ್ಟು 10 ಪಂದ್ಯಗಳಿಂದ ಹೈದರಾಬಾದ್ ತಂಡ 15 ಅಂಕಗಳನ್ನು ಕಲೆಹಾಕುವಲ್ಲಿ ಸಫಲವಾಗಿದ್ದು, 6ನೇ ಸ್ಥಾನದಿಂದ 3ನೇ ಸ್ಥಾನಕ್ಕೇರಿದೆ. ಮತ್ತೊಂದೆಡೆ ಈ ಪಂದ್ಯಕ್ಕೂ ಮುನ್ನ 7ನೇ ಸ್ಥಾನದಲ್ಲಿದ್ದ ನಾರ್ತ್ಈಸ್ಟ್ ಯುನೈಟೆಡ್ ಎಫ್ಸಿ ತಂಡ 10 ಪಂದ್ಯಗಳಿಂದ 11 ಅಂಕಗಳಿಗೆ ತೃಪ್ತಿಪಟ್ಟಿದ್ದು, ತನ್ನ ಸ್ಥಾನದಿಂದ ಅಲುಗಾಡದಂತೆ ಉಳಿದುಕೊಂಡಿದೆ.

ಗೋಲ್ಗಳಿಗೆ ಸಾಕ್ಷಿಯಾದ ರೋಚಕ ಪಂದ್ಯ
ಇನ್ನು ಒಟ್ಟಾರೆ 5 ಗೋಲ್ಗಳಿಗೆ ಸಾಕ್ಷಿಯಾದ ರೋಚಕ ಪಂದ್ಯದಲ್ಲಿ ಹೈದರಾಬಾದ್ ಎಫ್ಸಿ ತಂಡದ ಪರ ಸ್ಟ್ರೈಕರ್ ಲಿಸ್ಟನ್ ಕೊಲಾಕೊ (85ನೇ ನಿ. ಮತ್ತು 90+4ನೇ ನಿಮಿಷ) ಡಬಲ್ ಗೋಲ್ ಬಾರಿಸುವ ಮೂಲಕ ಭರ್ಜರಿ ಗೆಲುವಿನ ರೂವಾರಿ ಎನಿಸಿದರೆ, ಇದಕ್ಕೂ ಮುನ್ನ ಪಂದ್ಯದ ಪ್ರಥಮಾರ್ಧದಲ್ಲೇ ಸ್ಟ್ರೈಕರ್ ಅರಿದಾನೆ ಸ್ಯಾಂಟಾನ (3ನೇ ನಿಮಿಷ) ಮತ್ತು ಮಿಡ್ಫೀಲ್ಡರ್ ಜೊಯೆಲ್ ಚಿಯಾನಿಸ್ (36) ಮೇಲುಗೈ ಒದಗಿಸಿದ್ದರು.

ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದ ನಾರ್ತ್ಈಸ್ಟ್
ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದ ನಾರ್ತ್ಈಸ್ಟ್ ಯುನೈಟೆಡ್ ಎಫ್ಸಿ ತಂಡದ ಪರ ಪ್ರಥಮಾರ್ಧದ ಅಂತ್ಯದ ಹೊತ್ತಿಗೆ ಮಿಡ್ಫೀಲ್ಡರ್ ಫೆಡೆರಿಕೊ ಗಲೇಗೊ (45ನೇ ನಿ.) ಪೆನಾಲ್ಟಿ ಸ್ಪಾಟ್ ಕಿಕ್ ಮೂಲಕ ಮೊದಲ ಗೋಲ್ ತಂದುಕೊಟ್ಟರೆ, ಹೆಚ್ಚುವರಿ ಸಮಯದಲ್ಲಿ ಡಿಫೆಂಡರ್ಬೆನ್ಜಮಿನ್ ಲಾಂಬೊಟ್ (45+2ನೇ ನಿ.) ಎರಡನೇ ಗೋಲ್ ತಂದುಕೊಟ್ಟರು. ಆದರೆ, 2ನೇ ಅವಧಿಯಲ್ಲಿ ಬಿಟ್ಟುಕೊಟ್ಟ 2 ಗೋಲ್ ಪರಿಣಾಮ ನಾರ್ತ್ಈಸ್ಟ್ ತಂಡ ಸೋಲಿನ ಕಡಲಲ್ಲಿ ಮುಳುಗುವಂತ್ತಾಯಿತು.

17 ಬಾರಿ ಗೋಲ್ ಗಳಿಕೆಯ ಅವಕಾಶ
ಪಂದ್ಯದಲ್ಲಿ ಆಕ್ರಮಣಕಾರಿ ಆಟವಾಡಿ 17 ಬಾರಿ ಗೋಲ್ ಗಳಿಕೆಯ ಅವಕಾಶ ಸೃಷ್ಟಿಸಿದ್ದ ನಾರ್ತ್ಈಸ್ಟ್ ತಂಡ 8 ಬಾರಿ ಚೆಂಡನ್ನು ಗುರಿಯತ್ತ ಕಳುಹಿಸಿತ್ತು. ಆದರೆ, ಯಶಸ್ಸು ಲಭ್ಯವಾಗಿದ್ದು 2 ಬಾರಿ ಮಾತ್ರ. ಮತ್ತೊಂದೆಡೆ ಹೈದರಾಬಾದ್ ತಂಡ 13 ಅವಕಾಶಗಳಲ್ಲಿ 5 ಬಾರಿ ಚೆಂಡನ್ನು ಗುರಿಯತ್ತ ಕಳುಹಿಸಿ 4 ಗೋಲ್ಗನ್ನು ದಕ್ಕಿಸಿಕೊಳ್ಳುವಲ್ಲಿ ಸಫಲವಾಗಿ ಗೆಲುವಿನ ನಗೆ ಬೀರಿತು.
This News Article is a Copy of MYKHEL
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm