ಬ್ರೇಕಿಂಗ್ ನ್ಯೂಸ್
26-02-21 12:02 pm Source: MYKHEL ಕ್ರೀಡೆ
ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನ ಕಳೆದ ಎಂಟು ಪಂದ್ಯಗಳಲ್ಲಿ ಸೋಲು ಕಂಡಿರದ ನಾರ್ಥ್ ಈಸ್ಟ್ ಯುನೈಟೆಡ್ ತಂಡ, ಕಠಿಣ ಪಂದ್ಯಗಳಲ್ಲೂ ಜಯ ಗಳಿಸಿ ಅದ್ಭುತ ಪ್ರದರ್ಶನ ತೋರಿದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಡ್ರಾ ಗಳಿಸಿದರೂ ಪ್ಲೇ ಆಫ್ ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಖಾಲೀದ್ ಜಮೀಲ್ ಕೋಚ್ ಜವಾಬ್ದಾರಿ ವಹಿಸಿಕೊಂಡಾಗಿನಿಂದ ನಾರ್ಥ್ ಈಸ್ಟ್ ಉತ್ತಮ ಪ್ರದರ್ಶಶನ ತೋರುತ್ತಿರುವುದು ಗಮನಾರ್ಹ.
ಕೇರಳ ತಂಡ ಕೊನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಆ ತಂಡವನ್ನು ಹಗುರವಾಗಿ ಪರಿಗಣಿಸಬಾರದು ಎಂದು ಜಮೀಲ್ ತಮ್ಮ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. "ಕೇರಳ ಬ್ಲಾಸ್ಟರ್ಸ್ ತಂಡ ಬಲಿಷ್ಠ ಮತ್ತು ಉತ್ತಮ ತಂಡವಾಗಿದೆ. ಅವರಲ್ಲಿ ಪ್ರತಿಭಾವಂತ ಆಟಗಾರಿದ್ದಾರೆ. ನಾವು ಅದಕ್ಕೆ ಸಜ್ಜಾಗಿರಬೇಕು. ನಾವು ಈ ಪಂದ್ವಯವನ್ನು ಹಗುರವಾಗಿ ಪರಿಗಣಿಸಬಾರದು, ನಾವು ಹೋರಾಟ ನೀಡಬೇಕು,' ಎಂದು ಹೇಳಿದ್ದಾರೆ.

ಜಯಕ್ಕಾಗಿಯೇ ಸಿದ್ಧತೆ ನಡೆಸಿದ್ದೇವೆ
ನಾರ್ಥ್ ಈಸ್ಟ್ ಯುನೈಟೆಡ್ ತಂಡಕ್ಕೆ ಕೇವಲ ಒಂದು ಅಂಕ ಬೇಕಾಗಿರಬಹುದು, ಆದರೆ ಕೇವಲ ಅದಕ್ಕೆ ಮಾತ್ರ ಸೀಮಿತವಾಗಿರಬಾರದು ಎಂದು ಜಮೀಲ್ ಹೇಳಿದ್ದಾರೆ, "ಏನಾದರೂ ಆಗಲಿ ಎಂದು ನಾವು ಯೋಚಿಸುವುದಿಲ್ಲ. ನಾವು ಜಯಕ್ಕಾಗಿಯೇ ಸಿದ್ಧತೆ ನಡೆಸಿದ್ದೇವೆ. ಏನಾದರು ಆಗಲಿ ಎಂಬುದಕ್ಕೆ ಈಗ ಅವಕಾಶ ಇಲ್ಲ. ಉತ್ತಮ ರೀತಿಯಲ್ಲಿ ಹೋರಾಟ ನೀಡಿ ಮೂರು ಅಂಕಗಳನ್ನು ಗಳಿಸುವುದು ನಮ್ಮ ಗುರಿ," ಎಂದು ಜಮೀಲ್ ಹೇಳಿದ್ದಾರೆ.

ಅಜೇಯರಾಗಿರುವುದು ಗುರಿಯಲ್ಲ
ಜಮೀಲ್ ಹಿಂದೆಯೂ ಯಶಸ್ಸನ್ನು ಕಂಡ ಕೋಚ್. ಜಯ ಅಥವಾ ಡ್ರಾ ಗಳಿಸಿ ಒಂಬತ್ತು ಪಂದ್ಯಗಳಲ್ಲಿ ಅಜೇಯರಾಗಿರುವುದು ಗುರಿಯಲ್ಲ. ಪ್ಲೇ ಆಫ್ ತಲುಪಿದ ಮೊದಲ ಭಾರತೀಯ ಮ್ಯಾನೇಜರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಬೇಕು. "ಐಎಸ್ ಎಲ್ ದೊಡ್ಟ ಸವಾಲು ಇದ್ದಂತೆ. ಇಲ್ಲಿ ನಾವು ಸಾಮಾನ್ಯವಾಗಿ ಉತ್ತಮ ತಂಡಗಳೊಂದಿಗೆ ಇರುತ್ತೇವೆ. ಅಲ್ಲಿ ಉತ್ತಮ ಆಟಗಾರರು ಮತ್ತು ಕೋಚ್ ಇರುತ್ತಾರೆ, ಆದ್ದರಿಂದ ಇದು ವಿಭಿನ್ನವಾದ ಸವಾಲು," ಎಂದರು.

ಕೇರಳ ಜಯ ಗಳಿಸಿರಲಿಲ್ಲ
ಕಳೆದ ಏಳು ಪಂದ್ಯಗಳಲ್ಲಿ ಕೇರಳ ಜಯ ಗಳಿಸಿರಲಿಲ್ಲ. ತಂಡ ಈಗ ಕೇವಲ ಗೌರವಕ್ಕಾಗಿ ಆಡುತ್ತಿದೆ. ಇಶ್ಫಾಕ್ ಅಹಮ್ಮದ್ ಅವರು ಋತುವನ್ನು ಮುಗಿಸುವ ಉದ್ದೇಶದಿಂದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. " ಪಂದ್ಯಗಳು ಪ್ರತಿಯೊಬ್ಬರಿಗೂ ಸಮಾನವಾಗಿರುತ್ತದೆ. ನಮಗೆ ಪಂದ್ಯ ಗೆಲ್ಲಲೇಬೇಕಾಗಿದೆ. ಅವರಿಗೂ ಗೆಲ್ಲಬೇಕಾಗಿದೆ. ಅವರಿಗೆ ಗೆಲ್ಲಬೇಕಾದ ಒತ್ತಡವಿದೆ. ನಮಗೆ ಗೆದ್ದು ಋತುವನ್ನು ಗೌರವದೊಂದಿಗೆ ಮುಗಿಸಲು ಮತ್ತೊಂದು ಅವಕಾಶ," ಎಂದರು. "ನಾವು ಅವರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಯೋಚಿಸುವುದಿಲ್ಲ, ನಾವು ನಮಗಾಗಿ ಏನು ಮಾಡಬೇಕೆಂಬುದರ ಬಗ್ಗೆ ಯೋಚಿಸುತ್ತೇವೆ," ಎಂದರು.
This News Article is a Copy of MYKHEL
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
13-07-26 09:16 pm
HK News Staffer
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
13-07-26 10:57 pm
HK News Staffer
ಈ ನ್ಯಾಯಾಲಯದಲ್ಲಿ ಜೂಜಾಡಬೇಡಿ! ಸೌಜನ್ಯ ಪ್ರಕರಣ ಬಳಸಿ...
13-07-26 09:48 pm
ಮಂಜನಾಡಿ ಭೂಕುಸಿತ ದುರಂತ ; ಅವೈಜ್ಞಾನಿಕ ರಸ್ತೆ ನಿರ್...
13-07-26 08:31 pm
ಬಿಡದಿ ಟೌನ್ಶಿಪ್ ಜಟಾಪಟಿ ; ಸರ್ವೆಗೆ ಬಂದಿದ್ದ ಅಧಿ...
13-07-26 07:39 pm
ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಪ್ರೀತಿ, ಧರ್ಮಸ್ಥಳ...
13-07-26 02:54 pm