ಬ್ರೇಕಿಂಗ್ ನ್ಯೂಸ್
26-02-21 12:02 pm Source: MYKHEL ಕ್ರೀಡೆ
ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನ ಕಳೆದ ಎಂಟು ಪಂದ್ಯಗಳಲ್ಲಿ ಸೋಲು ಕಂಡಿರದ ನಾರ್ಥ್ ಈಸ್ಟ್ ಯುನೈಟೆಡ್ ತಂಡ, ಕಠಿಣ ಪಂದ್ಯಗಳಲ್ಲೂ ಜಯ ಗಳಿಸಿ ಅದ್ಭುತ ಪ್ರದರ್ಶನ ತೋರಿದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಡ್ರಾ ಗಳಿಸಿದರೂ ಪ್ಲೇ ಆಫ್ ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಖಾಲೀದ್ ಜಮೀಲ್ ಕೋಚ್ ಜವಾಬ್ದಾರಿ ವಹಿಸಿಕೊಂಡಾಗಿನಿಂದ ನಾರ್ಥ್ ಈಸ್ಟ್ ಉತ್ತಮ ಪ್ರದರ್ಶಶನ ತೋರುತ್ತಿರುವುದು ಗಮನಾರ್ಹ.
ಕೇರಳ ತಂಡ ಕೊನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಆ ತಂಡವನ್ನು ಹಗುರವಾಗಿ ಪರಿಗಣಿಸಬಾರದು ಎಂದು ಜಮೀಲ್ ತಮ್ಮ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. "ಕೇರಳ ಬ್ಲಾಸ್ಟರ್ಸ್ ತಂಡ ಬಲಿಷ್ಠ ಮತ್ತು ಉತ್ತಮ ತಂಡವಾಗಿದೆ. ಅವರಲ್ಲಿ ಪ್ರತಿಭಾವಂತ ಆಟಗಾರಿದ್ದಾರೆ. ನಾವು ಅದಕ್ಕೆ ಸಜ್ಜಾಗಿರಬೇಕು. ನಾವು ಈ ಪಂದ್ವಯವನ್ನು ಹಗುರವಾಗಿ ಪರಿಗಣಿಸಬಾರದು, ನಾವು ಹೋರಾಟ ನೀಡಬೇಕು,' ಎಂದು ಹೇಳಿದ್ದಾರೆ.
ಜಯಕ್ಕಾಗಿಯೇ ಸಿದ್ಧತೆ ನಡೆಸಿದ್ದೇವೆ
ನಾರ್ಥ್ ಈಸ್ಟ್ ಯುನೈಟೆಡ್ ತಂಡಕ್ಕೆ ಕೇವಲ ಒಂದು ಅಂಕ ಬೇಕಾಗಿರಬಹುದು, ಆದರೆ ಕೇವಲ ಅದಕ್ಕೆ ಮಾತ್ರ ಸೀಮಿತವಾಗಿರಬಾರದು ಎಂದು ಜಮೀಲ್ ಹೇಳಿದ್ದಾರೆ, "ಏನಾದರೂ ಆಗಲಿ ಎಂದು ನಾವು ಯೋಚಿಸುವುದಿಲ್ಲ. ನಾವು ಜಯಕ್ಕಾಗಿಯೇ ಸಿದ್ಧತೆ ನಡೆಸಿದ್ದೇವೆ. ಏನಾದರು ಆಗಲಿ ಎಂಬುದಕ್ಕೆ ಈಗ ಅವಕಾಶ ಇಲ್ಲ. ಉತ್ತಮ ರೀತಿಯಲ್ಲಿ ಹೋರಾಟ ನೀಡಿ ಮೂರು ಅಂಕಗಳನ್ನು ಗಳಿಸುವುದು ನಮ್ಮ ಗುರಿ," ಎಂದು ಜಮೀಲ್ ಹೇಳಿದ್ದಾರೆ.
ಅಜೇಯರಾಗಿರುವುದು ಗುರಿಯಲ್ಲ
ಜಮೀಲ್ ಹಿಂದೆಯೂ ಯಶಸ್ಸನ್ನು ಕಂಡ ಕೋಚ್. ಜಯ ಅಥವಾ ಡ್ರಾ ಗಳಿಸಿ ಒಂಬತ್ತು ಪಂದ್ಯಗಳಲ್ಲಿ ಅಜೇಯರಾಗಿರುವುದು ಗುರಿಯಲ್ಲ. ಪ್ಲೇ ಆಫ್ ತಲುಪಿದ ಮೊದಲ ಭಾರತೀಯ ಮ್ಯಾನೇಜರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಬೇಕು. "ಐಎಸ್ ಎಲ್ ದೊಡ್ಟ ಸವಾಲು ಇದ್ದಂತೆ. ಇಲ್ಲಿ ನಾವು ಸಾಮಾನ್ಯವಾಗಿ ಉತ್ತಮ ತಂಡಗಳೊಂದಿಗೆ ಇರುತ್ತೇವೆ. ಅಲ್ಲಿ ಉತ್ತಮ ಆಟಗಾರರು ಮತ್ತು ಕೋಚ್ ಇರುತ್ತಾರೆ, ಆದ್ದರಿಂದ ಇದು ವಿಭಿನ್ನವಾದ ಸವಾಲು," ಎಂದರು.
ಕೇರಳ ಜಯ ಗಳಿಸಿರಲಿಲ್ಲ
ಕಳೆದ ಏಳು ಪಂದ್ಯಗಳಲ್ಲಿ ಕೇರಳ ಜಯ ಗಳಿಸಿರಲಿಲ್ಲ. ತಂಡ ಈಗ ಕೇವಲ ಗೌರವಕ್ಕಾಗಿ ಆಡುತ್ತಿದೆ. ಇಶ್ಫಾಕ್ ಅಹಮ್ಮದ್ ಅವರು ಋತುವನ್ನು ಮುಗಿಸುವ ಉದ್ದೇಶದಿಂದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. " ಪಂದ್ಯಗಳು ಪ್ರತಿಯೊಬ್ಬರಿಗೂ ಸಮಾನವಾಗಿರುತ್ತದೆ. ನಮಗೆ ಪಂದ್ಯ ಗೆಲ್ಲಲೇಬೇಕಾಗಿದೆ. ಅವರಿಗೂ ಗೆಲ್ಲಬೇಕಾಗಿದೆ. ಅವರಿಗೆ ಗೆಲ್ಲಬೇಕಾದ ಒತ್ತಡವಿದೆ. ನಮಗೆ ಗೆದ್ದು ಋತುವನ್ನು ಗೌರವದೊಂದಿಗೆ ಮುಗಿಸಲು ಮತ್ತೊಂದು ಅವಕಾಶ," ಎಂದರು. "ನಾವು ಅವರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಯೋಚಿಸುವುದಿಲ್ಲ, ನಾವು ನಮಗಾಗಿ ಏನು ಮಾಡಬೇಕೆಂಬುದರ ಬಗ್ಗೆ ಯೋಚಿಸುತ್ತೇವೆ," ಎಂದರು.
This News Article is a Copy of MYKHEL
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am