ಬ್ರೇಕಿಂಗ್ ನ್ಯೂಸ್
01-08-20 02:07 pm Headline Karnataka News Network ಕ್ರೀಡೆ
ಹೊಸದಿಲ್ಲಿ: ದಾಖಲೆಗಳಿಗೆ ಪರ್ಯಾಯ ಹೆಸರೇ ಸಚಿನ್ ತೆಂಡುಲ್ಕರ್. ಆದರೆ ಅವರಿಗೆ ಒಲಿಯದ ದಾಖಲೆಗಳೂ ಸಾಕಷ್ಟಿವೆ. ಇದರಲ್ಲಿ ಪ್ರಮುಖವಾದುದೆಂದರೆ, ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಅತೀ ಕಿರಿಯ ಆಟಗಾರನೆಂಬ ದಾಖಲೆ ಸ್ವಲ್ಪದರಲ್ಲೇ ಕೈತಪ್ಪಿದ್ದು. ಇದಕ್ಕೆ ತಾನೇ ಕಾರಣ ಎಂದು ನ್ಯೂಜಿಲ್ಯಾಂಡಿನ ಮಾಜಿ ವೇಗಿ ಡ್ಯಾನಿ ಮಾರಿಸನ್ ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ!
ನಾಯಕ ನೀಡಿದ ಎಚ್ಚರಿಕೆ
‘ಆಗಷ್ಟೇ ಪಾಕಿಸ್ಥಾನ ಪ್ರವಾಸ ಮುಗಿಸಿದ ತೆಂಡುಲ್ಕರ್ ನ್ಯೂಜಿಲ್ಯಾಂಡಿಗೆ ಆಗಮಿಸಿದ್ದರು. ಈ ಹುಡುಗನ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಅಭ್ಯಾಸ ತಂಡದ ನಾಯಕ ಕೆನ್ ರುದರ್ಫೋರ್ಡ್ ಎಚ್ಚರಿಸಿದ್ದರು.
ನನಗೂ 16ರ ಹರೆಯದ ಸಚಿನ್ ಬಗ್ಗೆ ಕುತೂಹಲ ಮೂಡಿತ್ತು. ಆವರು ರಿಚರ್ಡ್ ಹ್ಯಾಡ್ಲಿ ಎಸೆತಗಳನ್ನೂ ದಿಟ್ಟ ರೀತಿಯಲ್ಲಿ ನಿಭಾಯಿಸುತ್ತಿದ್ದರು…’ ಎಂದು ಮಾರಿಸನ್ 1990ರ ಘಟನೆಯನ್ನು ಮೆಲುಕು ಹಾಕಿದ್ದಾರೆ.
29 ವರ್ಷಗಳ ದಾಖಲೆ
ಪ್ರಥಮ ಪಂದ್ಯದಲ್ಲಿ ಸೊನ್ನೆ ಮತ್ತು 24 ರನ್ ಮಾಡಿದ ಸಚಿನ್, ನೇಪಿಯರ್ನ ದ್ವಿತೀಯ ಟೆಸ್ಟ್ನಲ್ಲಿ ಶತಕದತ್ತ ದೌಡಾಯಿಸಿದ್ದರು. ಇದನ್ನು ಸಾಧಿಸಿದ್ದೇ ಆದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ವಿಶ್ವದ ಅತೀ ಕಿರಿಯ ಆಟಗಾರನೆಂಬ ವಿಶ್ವ ದಾಖಲೆ ನಿರ್ಮಾಣಗೊಳ್ಳುತ್ತಿತ್ತು. 1961ರಷ್ಟು ಹಿಂದೆ ಪಾಕಿಸ್ಥಾನದ ಮುಷ್ತಾಕ್ ಮೊಹಮ್ಮದ್ 17 ವರ್ಷ, 78ನೇ ದಿನದಲ್ಲಿ ಬಾರಿಸಿದ ಶತಕದ ದಾಖಲೆ ಪತನಗೊಳ್ಳುತ್ತಿತ್ತು.
88ಕ್ಕೆ ಕೊನೆಗೊಂಡ ಆಟ
’88 ರನ್ ಮಾಡಿ ಆಡುತ್ತಿದ್ದ ತೆಂಡುಲ್ಕರ್ಗೆ ನಾನು ಬೌಲಿಂಗ್ ಮಾಡಲಿಳಿದಿದ್ದೆ. ನನಗೆ 3 ಬೌಂಡರಿಗಳ ರುಚಿ ತೋರಿಸಿ ಶತಕ ಪೂರ್ತಿ ಮಾಡುತ್ತಾರೇನೋ ಎಂಬ ಆತಂಕ ಮನೆಮಾಡಿತ್ತು. ಆದರೆ ಅದೇ ಮೊತ್ತಕ್ಕೆ ನಾನು ಅವರ ವಿಕೆಟ್ ಹಾರಿಸಿದೆ. ಮಿಡ್ ಆಫ್ನಲ್ಲಿದ್ದ ಜಾನ್ ರೈಟ್ ಕ್ಯಾಚ್ ಪಡೆದಿದ್ದರು. ನಾನೊಂದು ದೊಡ್ಡ ಸಾಹಸ ಮಾಡಿದ್ದೆ’ ಎಂದು ಮಾರಿಸನ್ ಖುಷಿಯಿಂದ ಹೇಳಿದರು.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm