ಉಳ್ಳಾಲ ; ಹಳೇ ದ್ವೇಷ ತೀರಿಸಲು ರೌಡಿಗೆ ಇರಿದು ಕೊಲೆಯತ್ನ, ನಾಲ್ವರು ದುಷ್ಕರ್ಮಿಗಳಿಂದ ಕುಕೃತ್ಯ 

24-05-22 11:49 am       Mangalore Correspondent   ಕ್ರೈಂ

ಹಳೆ ದ್ವೇಷಕ್ಕಾಗಿ ರೌಡಿಶೀಟರ್ ಒಬ್ಬನಿಗೆ ನಾಲ್ವರ ತಂಡವು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಉಚ್ಚಿಲ ಸೇತುವೆ ಬಳಿ ನಡೆದಿದೆ. 

ಉಳ್ಳಾಲ, ಮೇ 24: ಹಳೆ ದ್ವೇಷಕ್ಕಾಗಿ ರೌಡಿಶೀಟರ್ ಒಬ್ಬನಿಗೆ ನಾಲ್ವರ ತಂಡವು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಉಚ್ಚಿಲ ಸೇತುವೆ ಬಳಿ ನಡೆದಿದೆ. 

ತಲಪಾಡಿ ಸಮೀಪದ ಅಜ್ಜಿನಡ್ಕ, ಮುಳ್ಳುಗುಡ್ಡೆ ನಿವಾಸಿ ಆರೀಫ್ (34) ಚೂರಿ ಇರಿತಕ್ಕೊಳಗಾದ ರೌಡಿಶೀಟರ್. ಆರೀಫ್ ಮಂಗಳೂರು ಮೀನಿನ‌ ಧಕ್ಕೆಗೆ ತನ್ನ ಬೈಕಲ್ಲಿ ಕೆಲಸಕ್ಕೆ ತೆರಳಿ ಮನೆಗೆ ವಾಪಸಾಗುತ್ತಿದ್ದ ವೇಳೆ ಉಚ್ಚಿಲ ಸೇತುವೆ ಬಳಿ ನಸುಕಿನ ಜಾವದಲ್ಲಿ ಘಟನೆ ನಡೆದಿದೆ.  

ಹಳೇ ದ್ವೇಷ ತೀರಿಸಲು ನಾಲ್ವರ ತಂಡ ವಾಹನದಲ್ಲಿ ಬಂದು ಈ ಕೃತ್ಯ ಎಸಗಿದೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಆರೀಫ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಆರೀಫ್ ಮೂಲತಃ ಕುದ್ರೋಳಿ ನಿವಾಸಿಯಾಗಿದ್ದು ಇತ್ತೀಚೆಗೆ ಕುಟುಂಬ ಸಮೇತ ಅಜ್ಜಿನಡ್ಕ , ಮುಳ್ಳುಗುಡ್ಡೆ ಎಂಬಲ್ಲಿ ಮನೆ ಮಾಡಿ ವಾಸವಿದ್ದ. ಆರೀಫ್ ಮಂಗಳೂರಿನ‌ ಬಂದರು ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. 

ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

Mangalore Old revenge, rowdy stabbed by four miscreants, one arrested by Police at ullal.