ಬ್ರೇಕಿಂಗ್ ನ್ಯೂಸ್
09-06-22 02:15 pm HK News Desk ಕ್ರೈಂ
ಹೈದರಾಬಾದ್, ಜೂನ್ 9: 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಗೈದ ಶಾಸಕನ ಮಗ ಸೇರಿದಂತೆ ಪ್ರಭಾವಿ ರಾಜಕೀಯ ನಾಯಕರ ಆರು ಮಂದಿ ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ಪೈಕಿ ನಾಲ್ವರು 18 ವರ್ಷದ ಒಳಗಿನವರಾಗಿದ್ದು ಆರೋಪಿಗಳು ಅಪ್ರಾಪ್ತರು ಅನ್ನುವ ಕಾರಣಕ್ಕೆ ಕಾನೂನು ಕುಣಿಕೆಯಿಂದ ಬಚಾವ್ ಆಗದಂತೆ ನೋಡಿಕೊಳ್ಳಲು ಪೊಲೀಸರು ಜುವೆನಿಲ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಆರೋಪಿಗಳ ಬಗ್ಗೆ ಕರುಣೆ ತೋರಬಾರದು, 18ರ ಆಸುಪಾಸಿನಲ್ಲಿರುವ ಯುವಕರನ್ನು ಕಾನೂನಿನ ಶಿಕ್ಷೆಗೆ ಒಳಪಡಿಸಬೇಕು ಎಂದು ಕೋರಿದ್ದಾರೆ.
ಓಮರ್ ಖಾನ್ ಮತ್ತು ಅಸಾದುದ್ದೀನ್ ಮಲಿಕ್ ಇಬ್ಬರು ಪ್ರಬುದ್ಧರಾಗಿದ್ದು, ಇಬ್ಬರು ಕೂಡ ಪ್ರಭಾವಿ ರಾಜಕೀಯ ಸಂಪರ್ಕ ಇದ್ದವರು. ಅಪ್ರಾಪ್ತರೆಂದು ಗುರುತಿಸಲ್ಪಟ್ಟ ನಾಲ್ವರಲ್ಲಿ ಒಬ್ಬಾತ ಟಿಆರ್ ಎಸ್ ಪಕ್ಷದ ರಾಜಕಾರಣಿಯ ಮಗ. ಇನ್ನೊಬ್ಬ ಹೈದ್ರಾಬಾದ್ ನಗರ ಪಾಲಿಕೆಯ ಕಾರ್ಪೋರೇಟರ್ ಪುತ್ರ, ಮತ್ತೊಬ್ಬ ಸಂಗಾರೆಡ್ಡಿಯ ಕಾರ್ಪೊರೇಟರ್ ಮಗ. ಇನ್ನೊಬ್ಬ ಎಐಎಂಐಎಂ ಪಕ್ಷದ ಶಾಸಕನ ಮಗನಾಗಿದ್ದು, ಆತನಿಗೆ ಆಧಾರ್ ಕಾರ್ಡ್ ಪ್ರಕಾರ ಜುಲೈ 7ಕ್ಕೆ 18 ತುಂಬುತ್ತದೆ. ಎಲ್ಲರನ್ನೂ ಬಂಧಿಸಿ ಸದ್ಯ ರಿಮ್ಯಾಂಡ್ ಹೋಮಲ್ಲಿ ಇರಿಸಲಾಗಿದೆ. ಹುಡುಗಿಯನ್ನು ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿರುವ ಇವರದ್ದು ಗಂಭೀರ ಅಪರಾಧವಾಗಿದ್ದು, ಆರೋಪಿಗಳಿಗೆ ಅಪ್ರಾಪ್ತರು ಅನ್ನುವ ಕಾರಣಕ್ಕೆ ದಯೆ ನೀಡಬಾರದು ಎಂದು ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಮೇ 28ರಂದು 17 ವರ್ಷದ ಯುವತಿ ಪಬ್ ಒಂದಕ್ಕೆ ಪಾರ್ಟಿಗೆ ಹೋಗಿದ್ದು, ಅಲ್ಲಿ ಪರಿಚಿತರಾಗಿದ್ದ ಯುವಕರು ಕಾರಿನಲ್ಲಿ ಮನೆಗೆ ಬಿಡುತ್ತೇವೆಂದು ಹೇಳಿ ಸಂಜೆ 6 ಗಂಟೆಗೆ ಕರೆದೊಯ್ದಿದ್ದರು. ಆನಂತರ, ಬೇರೆ ದಾರಿ ಮೂಲಕ ಕರೆದೊಯ್ದು ಅಲ್ಲಿಂದ ಬಂಜಾರ ಹಿಲ್ಸ್ ಪ್ರದೇಶಕ್ಕೆ ಒಯ್ದು ಕಾರ್ ಪಾರ್ಕ್ ಮಾಡಿ ಅತ್ಯಾಚಾರ ಎಸಗಿದ್ದರು. ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರು ಸರಕಾರಿ ನೋಂದಣಿ ಹೊಂದಿದ್ದು, ವಕ್ಫ್ ಬೋರ್ಡ್ ಆಡಳಿತಕ್ಕೆ ಸೇರಿದ್ದಾಗಿತ್ತು. ಇನ್ನೊಂದು ಮರ್ಸಿಡಿಸ್ ಬೆಂಜ್ ಕಾರು ಶಾಸಕರ ಹೆಸರಲ್ಲಿ ನೋಂದಣಿಯಾಗಿತ್ತು. ಪಬ್ ಪಾರ್ಟಿಯಿಂದ ಬೆಂಜ್ ಕಾರಿನಲ್ಲಿ ಕರೆದೊಯ್ದು ಬಳಿಕ ಇತರೇ ಯುವಕರು ಇನ್ನೋವಾ ಕಾರಿನಲ್ಲಿ ಹಿಂಬಾಲಿಸಿದ್ದರು. ಕೃತ್ಯ ನಡೆಸಿದ ಬಳಿಕ ಯುವತಿಯನ್ನು ಪಬ್ ನಡೆಯುತ್ತಿದ್ದ ಜಾಗಕ್ಕೇ ಕರೆದೊಯ್ದು ಬಿಟ್ಟಿದ್ದರು.
Hyderabad police on Thursday began questioning the only major accused in Jubilee Hills gang rape case after taking him into custody.A day after a city court granted police custody of Saduddin Malik, Jubilee Hills police took him into their custody from Chanchalguda Central Prison.Though police sought custody of the accused for seven days, the court on Wednesday granted three-day custody.The 18-year-old was being grilled at an undisclosed location. The investigators are looking to gather more information in the sensational case, which has triggered national outrage.
03-08-25 10:52 am
HK News Desk
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
03-08-25 04:25 pm
HK News Desk
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm