ರಸ್ತೆ ಮಧ್ಯೆ ಕುಡಿದು ತೂರಾಡುತ್ತಿದ್ದ ಗುಂಪು ; ಪ್ರಶ್ನಿಸಿದ ಪೊಲೀಸ್ ಸಿಬಂದಿಗೆ ಯುವಕರಿಂದ ಹಲ್ಲೆ, ಮೂವರ ಬಂಧನ

21-06-22 02:58 pm       Mangalore Correspondent   ಕ್ರೈಂ

ರಸ್ತೆ ಮಧ್ಯೆ ಕುಡಿದು ತೂರಾಡುತ್ತಿದ್ದ ಯುವಕರ ಗುಂಪನ್ನು ಪ್ರಶ್ನಿಸಿದ ಪೊಲೀಸ್ ಸಿಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಉರ್ವಾ ಠಾಣೆ ವ್ಯಾಪ್ತಿಯ ಚಿಲಿಂಬಿ ಗುಡ್ಡದಲ್ಲಿ ನಡೆದಿದ್ದು, ಘಟನೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಮಂಗಳೂರು, ಜೂನ್ 21: ರಸ್ತೆ ಮಧ್ಯೆ ಕುಡಿದು ತೂರಾಡುತ್ತಿದ್ದ ಯುವಕರ ಗುಂಪನ್ನು ಪ್ರಶ್ನಿಸಿದ ಪೊಲೀಸ್ ಸಿಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಉರ್ವಾ ಠಾಣೆ ವ್ಯಾಪ್ತಿಯ ಚಿಲಿಂಬಿ ಗುಡ್ಡದಲ್ಲಿ ನಡೆದಿದ್ದು, ಘಟನೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಭಾನುವಾರ ರಾತ್ರಿ ಉರ್ವಾ ಪೊಲೀಸರು ಗಸ್ತಿನಲ್ಲಿದ್ದಾಗ, ತಡರಾತ್ರಿ 1.30ರ ಸುಮಾರಿಗೆ ಚಿಲಿಂಬಿ ಗುಡ್ಡದಲ್ಲಿ 8-10 ಯುವಕರು ಸಾರ್ವಜನಿಕ ಜಾಗದಲ್ಲಿ ಮದ್ಯ ಸೇವನೆ ಮಾಡುತ್ತಿದ್ದರು. ಪೊಲೀಸರು ಯುವಕರನ್ನು ಪ್ರಶ್ನಿಸಿದ ವೇಳೆ ದುರ್ನಡತೆ ತೋರಿದ್ದಾರೆ. ಅಲ್ಲದೆ, ಪೊಲೀಸ್ ಸಿಬಂದಿ ಜೊತೆ ಜಗಳ ಕಾಯ್ದು ಹಲ್ಲೆಗೆ ಯತ್ನಿಸಿದ್ದಾರೆ. ಒಬ್ಬರು ಪೊಲೀಸ್ ಸಿಬಂದಿಗೆ ಕಾಲು ಮತ್ತು ಕೈಗೆ ಗಾಯವಾಗಿದೆ.

ಈ ಬಗ್ಗೆ ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪ್ರಜ್ವಿತ್, ದುರ್ಗೇಶ್, ರಕ್ಷಿತ್ ಎಂದು ಗುರುತಿಸಲಾಗಿದೆ.

A group of boys who were drinking in a public place in Chilimbi Gudda in Urwa attacked the beat police on duty in the wee hours of Sunday, June 20. The three accused who were arrested for attacking poli ce personnel, were produced in the court. The court remanded them to judicial custody till July 4.