ಬ್ರೇಕಿಂಗ್ ನ್ಯೂಸ್
21-06-22 07:43 pm Mangalore Correspondent ಕ್ರೈಂ
ಮಂಗಳೂರು, ಜೂನ್ 21: ಆಡು ಸಾಕಣೆ ಫಾರ್ಮ್ ಮಾಡಿಸಿ ಕೊಡುತ್ತೇನೆ ಎಂದು ಹೇಳಿ ಕೇರಳದ ವ್ಯಕ್ತಿಯೊಬ್ಬ ಹಣ ಪಡೆದು ವಂಚಿಸಿದ ಬಗ್ಗೆ ಮಂಗಳೂರಿನ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಹಂಪನಕಟ್ಟೆಯಲ್ಲಿ ಜ್ಯೂಸ್ ಸ್ಟಾಲ್ ಹೊಂದಿರುವ ಫೆಡ್ರಿಕ್ ಫೆರಾವೋ ಮತ್ತು ವಿಜಯ ಬರ್ಬೋಜ ಎಂಬವರಿಗೆ ಕೇರಳದ ಕೊಚ್ಚಿ ಮೂಲದ ಬೆನ್ನಿಚಾನ್ ಜೋಸೆಫ್ ಎಂಬಾತ ಪರಿಚಯ ಆಗಿದ್ದ. ಜ್ಯೂಸ್ ಅಂಗಡಿಗೆ ಉಪ್ಪಿನಕಾಯಿ, ಮಸಾಲ ಪೌಡರ್ ಮಾರಾಟ ಮಾಡಿಕೊಂಡು ಬಂದಿದ್ದರಿಂದ ಪರಿಚಯ ಆಗಿತ್ತು.
ಈ ವೇಳೆ, ತಾನು ದಾವಣಗೆರೆಯಲ್ಲಿ ಆಡು ಸಾಕಣೆ ಕೇಂದ್ರ ಹೊಂದಿದ್ದು, ಒಳ್ಳೆ ಲಾಭ ಬರುತ್ತಿದೆ ಎಂದು ಹೇಳಿದ್ದಾನೆ. ದಾವಣಗೆರೆಯಲ್ಲಿ ತನ್ನದೇ ಜಮೀನು ಹೊಂದಿದ್ದು, ನಿಮಗೆ ಬೇಕಿದ್ದರೆ ತನ್ನ ಜಮೀನಿನಲ್ಲೇ ಆಡಿನ ಫಾರ್ಮ್ ಒಂದನ್ನು ಮಾಡಿ ಕೊಡುತ್ತೇನೆ ಎಂದು ನಂಬಿಸಿದ್ದ. ಅದಕ್ಕಾಗಿ ಫೆಡ್ರಿಕ್ ಮತ್ತು ವಿಜಯ್ ಸೇರಿಕೊಂಡು ಒಟ್ಟು ಮೂರು ಲಕ್ಷ ರೂಪಾಯಿ ಹಣವನ್ನು ಬೆನ್ನಿಚಾನ್ ಕೈಗೆ ನೀಡಿದ್ದರು. ಆದರೆ ಹಣ ಪಡೆದ ಬಳಿಕ ಬೆನ್ನಿಚಾನ್ ನಾಪತ್ತೆಯಾಗಿದ್ದು, ಇತ್ತ ಹಣವೂ ಇಲ್ಲ, ಆಡಿನ ಫಾರ್ಮ್ ಕೂಡ ಇಲ್ಲ ಎನ್ನುವಂತಾಗಿದೆ. ವಂಚನೆಯ ಬಗ್ಗೆ ಫೆಡ್ರಿಕ್ ಬಂದರು ಠಾಣೆಯಲ್ಲಿ ದೂರು ನೀಡಿದ್ದಾರೆ.
A complaint is filed in Bunder police station here, accusing a man of duping two people on the pretext of setting up a goat farm. According to the details of the complaint filed Fredrick Ferrao and Vijay Barboza, they have a juice stall in Hampankatta. Bennichan Joseph, a resident of Kochi, Kerala, used to supply masala powder and pickle to their shop.
21-02-26 11:27 am
HK News Desk
ಹಾಸನಾಂಬೆ ಉತ್ಸವ ಟೆಂಡರ್ನಲ್ಲಿ ಭಾರೀ ಗೋಲ್ಮಾಲ್ ? ;...
20-02-26 09:20 pm
ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕ ಹಿಂದಕ್ಕೆ ; 26 ತ...
19-02-26 09:29 pm
ಪರಮೇಶ್ವರ್ ಅಥವಾ ಡಿಕೆಶಿ ಯಾರಾಗ್ತಾರೆ ಮುಂದಿನ ಮುಖ್ಯ...
19-02-26 03:11 pm
ವಿಧಾನಸೌಧ ಒಳಗಡೆ ಮಾಧ್ಯಮಗಳಿಗೆ ಲಕ್ಷ್ಮಣ ರೇಖೆ ; ಭದ್...
18-02-26 09:02 pm
22-02-26 06:19 pm
HK News Desk
ಲವ್ ಜಿಹಾದ್’ ತಡೆಗೆ ಗುಜರಾತ್ ನಲ್ಲಿ ವಿವಾಹ ನೋಂದಣಿ...
21-02-26 05:01 pm
ಸುಂಕ ನೀತಿ ಕಾನೂನುಬಾಹಿರ ಎಂದ ಅಮೆರಿಕ ಸುಪ್ರೀಂ ಕೋರ್...
21-02-26 03:07 pm
ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಶರ್ಟ್ ಬಿ...
20-02-26 08:45 pm
ಗಲ್ಫ್ ದೇಶಗಳತ್ತ ಅಮೆರಿಕದ ಯುದ್ಧ ವಿಮಾನಗಳು ; ಇರಾನ್...
19-02-26 11:04 pm
22-02-26 06:55 pm
Mangalore Correspondent
ಸುಜಿತ್ ಮಾಡೂರು ಬಿಜೆಪಿಯಿಂದ ಉಚ್ಚಾಟನೆ ಪ್ರಕರಣ ; ಸಾ...
21-02-26 09:30 pm
ಲೂಡೋ ಆಡುವಾಗ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟು ವರ್...
21-02-26 09:02 pm
Mangalore, SIT, Sridhar: ಶಿಬಾಜೆ ಶ್ರೀಧರ ಮುಗೇರ...
20-02-26 06:05 pm
Kotekar, Mangalore News: ಕೋಟೆಕಾರು ಪ.ಪಂ ಸದಸ್ಯ...
20-02-26 04:18 pm
21-02-26 05:50 pm
HK News Desk
ಬೆಂಗಳೂರಿನಲ್ಲಿ ಭಯೋತ್ಪಾದಕ ಜಾಲ ; ಎನ್ಐಎ ವಾಂಟೆಡ್ ಲ...
21-02-26 04:29 pm
ಕೊಲೆ- ಆತ್ಮಹತ್ಯೆ-ನಾಪತ್ತೆ ಕತೆ ಕಟ್ಟಿದ್ದ ಮಹಿಳೆ ;...
21-02-26 02:22 pm
Mangalore Police, Safwan Hussain Arrest : ನಟೋ...
20-02-26 10:08 pm
ಲಕ್ಕುಂಡಿ ನಿಧಿ ಹೆಸ್ರಲ್ಲಿ ಜನರಿಗೆ ಟೋಪಿ ; ಹಂಡಿಯೊಳ...
20-02-26 09:07 pm