ಬ್ರೇಕಿಂಗ್ ನ್ಯೂಸ್
28-06-22 01:05 pm HK News Desk ಕ್ರೈಂ
ಮೈಸೂರು, ಜೂನ್ 28 : ಪತ್ನಿಯ ಬಗ್ಗೆ ಅನೈತಿಕ ಸಂಬಂಧ ಶಂಕೆಯಿಂದ ಆಕೆಯ ರುಂಡವನ್ನೇ ಕತ್ತರಿಸಿ ಭೀಕರವಾಗಿ ಕೊಲೆಗೈದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಚೆಟ್ಟನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು ಪುಟ್ಟಮ್ಮ(40) ಎಂಬ ಮಹಿಳೆ ಮೃತ ದುರ್ದೈವಿ. ಕೊಲೆಯ ಬಳಿಕ ಪತಿ ದೇವರಾಜ್ ತಪ್ಪಿಸಿಕೊಂಡಿದ್ದು ಬಂಧನಕ್ಕಾಗಿ ವರುಣಾ ಪೊಲೀಸರು ಬಲೆ ಬೀಸಿದ್ದಾರೆ.
ಈ ಹಿಂದೆ ಮೊದಲ ಹೆಂಡತಿಯನ್ನೂ ಶೀಲ ಶಂಕಿಸಿ ಕೊಲೆಗೆ ಯತ್ನಿಸಿದ್ದ ದೇವರಾಜ್, ಜೈಲು ವಾಸವನ್ನೂ ಅನುಭವಿಸಿದ್ದ. ಬಳಿಕ ಮೊದಲ ಹೆಂಡತಿಯಿಂದ ದೂರವಾಗಿ 21 ವರ್ಷಗಳ ಹಿಂದೆ ಪುಟ್ಟಮ್ಮಳನ್ನ ಎರಡನೇ ವಿವಾಹವಾಗಿದ್ದ. ಎರಡನೇ ಮದುವೆ ಆದರೂ ಆಕೆಯ ಬಗ್ಗೆಯೂ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ.
ಇವರಿಗೆ 20 ವರ್ಷದ ಮಗಳಿದ್ದರೂ ಪತ್ನಿಯ ಮೇಲೆ ಶಂಕೆ ವ್ಯಕ್ತಪಡಿಸುತ್ತಿದ್ದ. ಇದೇ ಶಂಕೆಯಲ್ಲಿ ಕಳೆದ ಒಂದು ತಿಂಗಳಿಂದ ಪುಟ್ಟಮ್ಮಳಿಗೆ ಕಿರುಕುಳವನ್ನೂ ನೀಡುತ್ತಿದ್ದ. ಮಗಳು ಪವಿತ್ರ ಕಾಲೇಜಿಗೆ ಹೋಗುತ್ತಿದ್ದ ವೇಳೆ ಇದೇ ವಿಚಾರಕ್ಕೆ ಮನೆಯಲ್ಲಿ ಕ್ಯಾತೆ ತೆಗೆದು ಜಗಳ ಮಾಡುತ್ತಿದ್ದ ಎನ್ನಲಾಗಿದೆ.
ಇದೀಗ ಮಗಳು ಮನೆಯಲ್ಲಿ ಇಲ್ಲದೇ ಇದ್ದಾಗ ಪತ್ನಿಯನ್ನ ಭೀಕರವಾಗಿ ಕೊಂದಿದ್ದಾನೆ. ರುಂಡ ಮುಂಡವನ್ನ ಬೇರೆ ಆಗುವಂತೆ ಭೀಕರವಾಗಿ ಕೊಲೆ ಮಾಡಿದ್ದು ಈ ಬಗ್ಗೆ ತಂದೆ ದೇವರಾಜ್ ವಿರುದ್ದ ಮಗಳು ಪವಿತ್ರ ದೂರು ನೀಡಿದ್ದಾಳೆ. ವರುಣಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ದೇವರಾಜ್ ಬಂಧನಕ್ಕೆ ಮುಂದಾಗಿದ್ದಾರೆ.
Mysuru husband suspects of extra martial affair beheads wife. The deceased has been identified as Puttamma (40).
19-04-24 07:58 pm
HK News Desk
Hubbali Neha Murder, CM Siddaramaiah: ವೈಯಕ್ತಿ...
19-04-24 04:27 pm
Hubballi Murder Neha, Parameshwar: ಹುಬ್ಬಳ್ಳಿ...
19-04-24 04:08 pm
ಶಿವಮೊಗ್ಗ ಸಂಸದ ರಾಘವೇಂದ್ರ 73 ಕೋಟಿ ಆಸ್ತಿ ; ಪತ್ನಿ...
19-04-24 01:41 pm
Sri Dingaleshwara Swamiji dharwad, Pralad Jo...
19-04-24 10:39 am
17-04-24 08:42 pm
HK News Desk
Gujarat, Road Accident: ನಿಂತಿದ್ದ ಟ್ರಕ್ಗೆ ಗುದ...
17-04-24 07:07 pm
Dubai, Oman Rain, flood; ಧಾರಾಕಾರ ಮಳೆಗೆ ಕೊಚ್ಚಿ...
17-04-24 12:53 pm
29 Naxalites killed in Kanker encounter, Chha...
16-04-24 07:50 pm
ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ ; ಏಳು ಮಂದಿ ದುರ್...
16-04-24 05:09 pm
19-04-24 08:32 pm
Mangalore Correspondent
Kalakul, diploma course: ಕಲಾಕುಲ್ ನಾಟಕ ತಂಡದಿಂದ...
19-04-24 05:18 pm
Congress MP Padmaraj, Bantwal: ಬಂಟ್ವಾಳ ಕ್ಷೇತ್...
19-04-24 02:30 pm
ಮಲ್ಪೆ ಸಮುದ್ರದಲ್ಲಿ ಈಜಾಟ ; ಅಲೆಗಳಲ್ಲಿ ಕೊಚ್ಚಿ ಹೋದ...
18-04-24 11:05 pm
Congress BJP, Mangalore News: ದಕ್ಷಿಣ ಕನ್ನಡ ಕ್...
18-04-24 11:00 pm
19-04-24 03:43 pm
HK News Desk
Gadag Murder news, four killed; ನಗರ ಸಭೆ ಉಪಾಧ್...
19-04-24 09:27 am
Bangalore Double Murder: 'ಕರಿಮಣಿ ಮಾಲೀಕ'ನಿಗೆ ತ...
18-04-24 10:03 pm
Bantwal Stabbing, Mangalore crime: ಬಂಟ್ವಾಳ ;...
15-04-24 04:14 pm
Salman Khan gun shot; ಬಾಲಿವುಡ್ ನಟ ಸಲ್ಮಾನ್ ಖಾನ...
14-04-24 03:47 pm