ಬ್ರೇಕಿಂಗ್ ನ್ಯೂಸ್
05-07-22 10:32 am Mangalore Correspondent ಕ್ರೈಂ
ಬಂಟ್ವಾಳ, ಜುಲೈ 5: ಕ್ಷುಲ್ಲಕ ಕಾರಣಕ್ಕೆ ದ್ವೇಷ ಕಟ್ಟಿಕೊಂಡು ಜಗಳವಾಡಿ ಯುವಕನನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ಬಿ.ಸಿ. ರೋಡ್ ಬಳಿಯ ಶಾಂತಿಯಂಗಡಿ ಬಳಿ ನಡೆದಿದೆ.
ಶಾಂತಿಯಂಗಡಿ ಬಿ ಮೂಡ ಗ್ರಾಮದ ನಿವಾಸಿ ಆಸಿಫ್ (27) ಮೃತ ಯುವಕ. ಸೋಮವಾರ ರಾತ್ರಿ 10.30ರ ಸುಮಾರಿಗೆ ಆಸಿಫ್, ಶಾಂತಿಯಂಗಡಿ ಸ್ಟೋರ್ ಬಳಿ ಇದ್ದೇನೆ. ಕೂಡಲೇ ಬನ್ನಿ. ಇಲ್ಲಿ ಮಾರಿಪಳ್ಳ ಮಹಮ್ಮದ್ ನೌಫಾಲ್ ಮತ್ತು ಮಹಮ್ಮದ್ ನೌಸೀರ್ ಸ್ಕೂಟರ್ ತಡೆದು ಧಮ್ಕಿ ಹಾಕುತ್ತಿದ್ದಾರೆಂದು ಹೇಳಿ, ಕೂಡಲೇ ಬರುವಂತೆ ತನ್ನ ಗೆಳೆಯರಿಗೆ ಫೋನಾಯಿಸಿದ್ದ. ಗೆಳೆಯರಾದ ಮಹಮ್ಮದ್, ಅನ್ಸಾರ್, ಕೌಶಿಕ್, ನಿಜಾಮುದ್ದೀನ್ ಸೇರಿಕೊಂಡು ಸ್ಥಳಕ್ಕೆ ತೆರಳಿದ್ದರು.
ಈ ವೇಳೆ, ಪೊನ್ನೋಡಿಯ ಲಗೂನ್ ಕೊಕೊನಟ್ ಹೊಟೇಲ್ ಬಳಿಗೆ ತೆರಳಿದ್ದು ಅಲ್ಲಿ ಮಾತಿಗೆ ಮಾತು ಬೆಳೆದು ಘರ್ಷಣೆ ಆಗಿದೆ. ಆಸಿಫ್ ಜೊತೆಗೆ ಬಂದಿದ್ದ ಮಹಮ್ಮದ್ ನೌಫಾಲ್ ಮೇಲೆ ಆರೋಪಿಗಳು ಮರದ ಸೋಂಟೆಯಲ್ಲಿ ಹಲ್ಲೆ ನಡೆಸಿದ್ದಾರೆ. ಎರಡೂ ತಂಡಗಳ ಮಧ್ಯೆ ಹೊಡೆದಾಟ ನಡೆದಿದ್ದು ಈ ವೇಳೆ ಅರೋಪಿ ನೌಫಾಲ್ ತನ್ನ ಕೈಲಿದ್ದ ಚೂರಿಯನ್ನು ತೆಗೆದು ಆಸಿಫ್ ಹೊಟ್ಟೆಯ ಬಲಬದಿಗೆ ತಿವಿದಿದ್ದಾನೆ. ಆಸಿಫ್ ಬೊಬ್ಬೆ ಹೊಡೆದು ನೆಲಕ್ಕೆ ಬಿದ್ದಿದ್ದು ಕೂಡಲೇ ಇತರ ಗೆಳೆಯರು ಸೇರಿ ಆತನನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಒಯ್ದಿದ್ದಾರೆ. ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಒಯ್ದಾಗ ಆಸಿಫ್ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ.
ಈ ಬಗ್ಗೆ ಆಸಿಫ್ ಸ್ನೇಹಿತ ಮಹಮ್ಮದ್ ನೌಫಾಲ್ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದು ಪ್ರತಿ ದಿನ ಆಸಿಫ್ ಲಗೂನ್ ಹೊಟೇಲ್ ಬಳಿಯಿಂದ ತೆರಳುವಾಗ ಆರೋಪಿತ ಮಾರಿಪಳ್ಳದ ಮಹಮ್ಮದ್ ನೌಫಾಲ್, ನೌಸೀರ್ ಅವರನ್ನು ನೋಡಿ ಸುಖಾಸುಮ್ಮನೆ ಹಾರ್ನ್ ಮಾಡುತ್ತಾನೆಂದು ದ್ವೇಷ ಕಟ್ಟಿಕೊಂಡು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಲ್ಲದೆ, ವಿಚಾರಿಸಲು ಹೋದಾಗ ಚೂರಿಯಿಂದ ತಿವಿದು ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
A youth was murdered by two others over the issue of honking and staring while passing by. A complaint in this regard is filed in city police station by friend of the deceased Mohammed Naufal (28), a resident of Shantiangadi. The victim of stabbing incident is Mohammed Asif, a resident of Shantiangadi of B Mooda village. The accused are Mohammed Naufal and Mohammed Nasir, residents of Maripalla.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 03:51 pm
Mangaluru Correspondent
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
Forensic Expert Dr Mahabala Shetty, Dharmasth...
01-08-25 10:02 pm
02-08-25 04:43 pm
Mangaluru Correspondent
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm