ಬ್ರೇಕಿಂಗ್ ನ್ಯೂಸ್
11-07-22 03:40 pm HK News Desk ಕ್ರೈಂ
ಕಾಸರಗೋಡು, ಜುಲೈ 11: ಬೇಕಲ ಕೋಟೆ ಬಳಿಯಿರುವ ರೆಸಾರ್ಟ್ ನಲ್ಲಿ ಕಳವು ನಡೆದ ಪ್ರಕರಣಕ್ಕೆ ಸಂಬಂಧಿಸಿ ಚಿತ್ರದುರ್ಗ ಮೂಲದ ಗಂಡ- ಹೆಂಡತಿಯನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ.
ಪ್ರದೀಪ್ (26) ಮತ್ತು ಆತನ ಪತ್ನಿ ನಿವೇದಿತಾ (25) ಬಂಧಿತರು. ಬೇಕಲದ ಕಾಫಿಲ್ ಬೀಚ್ ನಲ್ಲಿರುವ ಹೋಮ್ ಸ್ಟೇ ರೆಸಾರ್ಟ್ ನಲ್ಲಿ ಕೆಲಸಕ್ಕಿದ್ದ ದಂಪತಿ, ಅಲ್ಲಿಂದಲೇ 6 ಲಕ್ಷ ನಗದು ಕದ್ದಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. ಕಪ್ ಬೋರ್ಡ್ ಒಳಗಡೆ ಇಟ್ಟಿದ್ದ 6 ಲಕ್ಷ ನಗದು ಕಳವಾದ ಬಗ್ಗೆ ರೆಸಾರ್ಟ್ ಮಾಲೀಕ ಪ್ರದೀಪ್ ಬೇಕಲ ಠಾಣೆಗೆ ದೂರು ನೀಡಿದ್ದರು. ತಮ್ಮಲ್ಲಿಯೇ ಕೆಲಸ ಮಾಡುತ್ತಿದ್ದ ಇಬ್ಬರು ನಾಪತ್ತೆಯಾಗಿದ್ದು, ಅವರ ಬಗ್ಗೆ ಶಂಕೆ ಇದೆ ಎಂದು ತಿಳಿಸಿದ್ದರು.
ಅದರಂತೆ, ಬೇಕಲ ಪೊಲೀಸರು ಇಬ್ಬರ ಮೊಬೈಲ್ ನೆಟ್ವರ್ಕ್ ಟ್ರೇಮ್ ಮಾಡಿದಾಗ, ಚಿತ್ರದುರ್ಗದಲ್ಲಿ ತೋರಿಸಿತ್ತು. ದಂಪತಿ ಚಿತ್ರದುರ್ಗ ಮೂಲದವರಾಗಿದ್ದು, ಬೇಕಲ ರೆಸಾರ್ಟಿನಲ್ಲಿ ಕೆಲಸ ಮಾಡುತ್ತಿದ್ದರು. ಬೇಕಲ ಎಸ್ಐ ರಜನೀಶ್ ನೇತೃತ್ವದ ತಂಡ ಚಿತ್ರದುರ್ಗಕ್ಕೆ ತೆರಳಿ, ದಂಪತಿಯನ್ನು ಬಂಧಿಸಿ ಕರೆತಂದಿದ್ದಾರೆ.
ಕಳವುಗೈದ ಹಣದಲ್ಲಿ ದಂಪತಿ 2.10 ಲಕ್ಷ ರೂ. ಕೊಟ್ಟು ಹೊಸತಾಗಿ ಬೈಕ್ ಖರೀದಿಸಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಲ್ಲದೆ, ಎರಡು ಹೊಸ ಮೊಬೈಲ್ ಖರೀದಿಸಿದ್ದರು. ಇವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ಇರಿಸಿದ್ದಾರೆ. ದಂಪತಿಯನ್ನು ಬೇಕಲ ಠಾಣೆಗೆ ಕರೆತಂದಿದ್ದು ವಿಚಾರಣೆ ನಡೆಸುತ್ತಿದ್ದಾರೆ.
The Bekal police arrested a Chitradurga native couple, who were working with Bekal Resort on the accusation of stealing Rs 6 lac from there.Pradeep (26) and his wife Nivedita (25) are the accused who are in police custody. They had allegedly stolen cash from Bekal Home Stay resort on Kafil beach road.The cash which was kept in the cupboard of the resort went missing a few days ago. Owner Pradeep had complained to the police and suspected his staff behind the act. Further, the couple had also absconded from the resort.
24-06-25 01:53 pm
Bangalore Correspondent
Kodi Sri ; ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ವ...
22-06-25 07:52 pm
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
24-06-25 12:03 pm
HK News Desk
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
Rapper Tommy Genesis, Controversy: ಹಿಂದು ದೇವತ...
23-06-25 04:37 pm
VP Jagdeep Dhankhar; ಜೂನ್ 25 ಸಂವಿಧಾನ ಹತ್ಯೆಗೈದ...
22-06-25 07:48 pm
24-06-25 01:36 pm
Mangalore Correspondent
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
Zakariya Jokatte, Mangalore: ಮಂಗಳೂರಿನಲ್ಲಿ ಸ್ಕ...
23-06-25 11:01 pm
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
Journalist Vijay Kotian, Brand Mangalore Awar...
23-06-25 09:48 pm
23-06-25 08:51 pm
HK News Desk
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm