ಸುರತ್ಕಲ್ ಪೇಟೆಯಲ್ಲಿ ಮತ್ತೊಬ್ಬ ಯುವಕನ ಕಗ್ಗೊಲೆ ; ಬಟ್ಟೆ ಮಳಿಗೆಗೆ ನುಗ್ಗಿ ತಲವಾರು ದಾಳಿ 

28-07-22 09:12 pm       Mangalore Correspondent   ಕ್ರೈಂ

ಸುರತ್ಕಲ್ ಪೇಟೆಯಲ್ಲಿ ಮತ್ತೊಬ್ಬ ಯುವಕನ ಮೇಲೆ ತಲವಾರು ದಾಳಿ ನಡೆದಿದೆ. ಬಟ್ಟೆ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಯುವಕನನ್ನು ಭೀಕರವಾಗಿ ಕಡಿದು ಹಾಕಿದ್ದಾರೆ. ಯುವಕ ಸ್ಥಳದಲ್ಲೇ ಸಾವು ಕಂಡಿದ್ದಾನೆ ಎನ್ನುವ ಮಾಹಿತಿಗಳಿವೆ.  

ಮಂಗಳೂರು, ಜುಲೈ 28 : ಸುರತ್ಕಲ್ ಪೇಟೆಯಲ್ಲಿ ಮತ್ತೊಬ್ಬ ಯುವಕನ ಮೇಲೆ ತಲವಾರು ದಾಳಿ ನಡೆದಿದೆ. ಬಟ್ಟೆ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಯುವಕನನ್ನು ಭೀಕರವಾಗಿ ಕಡಿದು ಹಾಕಿದ್ದಾರೆ. ಯುವಕ ಸ್ಥಳದಲ್ಲೇ ಸಾವು ಕಂಡಿದ್ದಾನೆ ಎನ್ನುವ ಮಾಹಿತಿಗಳಿವೆ.  

ಕಾಟಿಪಳ್ಳ ಮಂಗಳಪೇಟೆ ನಿವಾಸಿ ಫಾಜಿಲ್ (26) ಮೃತ ಯುವಕ. ರಾತ್ರಿ ಎಂಟು ಗಂಟೆ ಸುಮಾರಿಗೆ ಘಟನೆ ನಡೆದಿದೆ.‌ ಹಳೆ ದ್ವೇಷಕ್ಕೆ ಕೃತ್ಯ ನಡೆದಿದೆಯೋ, ವೈಯಕ್ತಿಕ ದ್ವೇಷದಿಂದ ನಡೆದಿದೆಯೋ ಗೊತ್ತಿಲ್ಲ. ಮಾರಣಾಂತಿಕ ದಾಳಿ ನಡೆದ ಕೂಡಲೇ ಎಜೆ ಆಸ್ಪತ್ರೆಗೆ ತರಲಾಗಿತ್ತು. 

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸದ್ದು ಮಾಡುತ್ತಿರುವಾಗಲೇ ಮಂಗಳೂರು ಹೊರವಲಯದ ಸುರತ್ಕಲ್ ಪೇಟೆಯಲ್ಲಿ ಹತ್ಯೆ ನಡೆದಿರುವುದು ಆತಂಕ ಮೂಡಿಸಿದೆ. ಹಿಂದಿನ ಚುನಾವಣೆ ಸಂದರ್ಭದಲ್ಲಿ ಮೂಡಿದ್ದ ದ್ವೇಷದ ವಾತಾವರಣ ಮತ್ತೆ ಮರುಕಳಿಸುತ್ತಾ ಎನ್ನುವ ಆತಂಕ ಮೂಡಿದೆ.

Four miscreants barged inside a textile shop in Surathkal and brutally stabbed a man in a bid to murder him on Thursday, July 28 evening. The victim Fazil, a resident of Surathkal's Mangalpete is said to be critically injured.