ಬ್ರೇಕಿಂಗ್ ನ್ಯೂಸ್
06-08-22 01:32 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್ 6: ನಂಬಿಕಸ್ಥರಂತೆ ನಟಿಸಿದ್ದಲ್ಲದೆ, ಮಹಾರಾಷ್ಟ್ರದಲ್ಲಿ ಫಾರ್ಮ್ ಡೈರಿ ಮಾಡುತ್ತಿದ್ದೇವೆಂದು ಹೇಳಿ 1.75 ಕೋಟಿ ಬ್ಯಾಂಕ್ ಸಾಲ ಪಡೆದು ಅದಕ್ಕೆ ಜಾಮೀನು ನಿಲ್ಲಿಸಿ ಮೋಸಗೈದ ಬಗ್ಗೆ ವ್ಯಕ್ತಿಯೊಬ್ಬರು ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಧ್ವರಾಯ ಭಟ್ ಎಂಬವರು ಮೋಸ ಹೋದವರಾಗಿದ್ದು, ಮೂವರ ವಿರುದ್ಧ ಕೇಸು ದಾಖಲಿಸಿದ್ದಾರೆ. ರಕ್ಷಾ ಬಾಳಿಗ, ನಿಧಿ ವಾಸುದೇವ ಕಾಮತ್ ಮತ್ತು ವಾಸುದೇವ ಕಾಮತ್ ಎಂಬ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ವಾಸುದೇವ ಕಾಮತ್ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆಗಿದ್ದು, ಮಧ್ವರಾಯ ಭಟ್ ಅವರಿಗೆ ಪರಿಚಿತರೇ ಆಗಿದ್ದರು. ಹೀಗಾಗಿ ಮಹಾರಾಷ್ಟ್ರದಲ್ಲಿ ಡೈರಿ ಫಾರ್ಮ್ ಮಾಡುತ್ತಿದ್ದೇವೆಂದು ಹೇಳಿ ನಂಬಿಸಿದ್ದಲ್ಲದೆ, ಮಂಗಳೂರಿನ ಭಾರತ್ ಕೋ ಆಪರೇಟಿವ್ ಬ್ಯಾಂಕಿನಲ್ಲಿ 1.75 ಕೋಟಿ ರುಪಾಯಿ ಸಾಲ ಪಡೆದಿದ್ದಾರೆ.
ಸಾಲದ ಮೊತ್ತಕ್ಕೆ ಮಧ್ವರಾಯ ಭಟ್ ಅವರನ್ನು ಜಾಮೀನು ನಿಲ್ಲುವಂತೆ ಪುಸಲಾಯಿಸಿದ್ದು ಭಟ್ ಅವರಿಗೆ ಸೇರಿದ 2.5 ಕೋಟಿ ಮೌಲ್ಯದ ಆಸ್ತಿಯ ದಾಖಲೆಯನ್ನು ಭದ್ರತೆಯಾಗಿ ಇರಿಸಿದ್ದರು. ಆರು ತಿಂಗಳಿಗಷ್ಟೇ ನಿಮ್ಮ ಭದ್ರತೆ ಸಾಕು, ಆಮೇಲೆ ನಾವು ಜಾಮೀನಿಗೆ ಬೇರೆ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು. ಅದರಂತೆ, ವಿಶ್ವಾಸದಲ್ಲಿ ನಂಬಿದ್ದ ಮಧ್ವರಾಯ ಭಟ್ ಭದ್ರತೆ ನಿಲ್ಲುವುದಕ್ಕೆ ಒಪ್ಪಿದ್ದರು. ಆದರೆ, ವಾಸುದೇವ ಕಾಮತ್ ಮತ್ತು ಇತರರು ಬ್ಯಾಂಕಿಗೆ ಸಾಲ ಪಾವತಿ ಮಾಡದೆ ಮೋಸ ಮಾಡಿದ್ದಾರೆ. ಬ್ಯಾಂಕಿನಿಂದ ಮಧ್ವರಾಯ ಭಟ್ ಗೆ ನೋಟೀಸ್ ಬಂದಿದ್ದು, ಈ ಬಗ್ಗೆ ಆ ಮೂವರ ಗಮನಕ್ಕೆ ತಂದಾಗ ಬೆದರಿಸಿದ್ದಾರೆ. ಜೀವ ಬೆದರಿಕೆ ಒಡ್ಡಿದ್ದಲ್ಲದೆ, ನಾಪತ್ತೆಯಾಗಿದ್ದಾರೆ.
ನಂಬಿಕಸ್ಧರಂತೆ ನಟಿಸಿ ಮೋಸಗೈದ ಮೂವರು ಆರೋಪಿಗಳ ವಿರುದ್ಧ ಮಧ್ವರಾಯ ಭಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ, ಬ್ಯಾಂಕಿನಿಂದ ಸಾಲ ತೆಗೆದುಕೊಂಡವರು ನಾಪತ್ತೆಯಾಗಿದ್ದರಿಂದ ಭಟ್ ಅವರಿಗೆ ನೋಟೀಸ್ ಬಂದಿದ್ದು ನೀವೇ ಸಾಲ ಪಾವತಿ ಮಾಡುವಂತೆ ಸೂಚಿಸಿದೆ. ಹೀಗಾಗಿ ಮಧ್ವರಾಯ ಭಟ್ ಕಂಗಾಲಾಗಿದ್ದಾರೆ.
A man filed complaint over three people of cheating his faith in them in posing as a guarantor for their bank loan by pledging his property worth Rs 2.5 crore. Madhwaraya Bhat is the person who is taken for ride by Raksha Baliga, Nidhi Vasudeva Kamath and Vasudeva Kamath.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm