ಬ್ರೇಕಿಂಗ್ ನ್ಯೂಸ್
10-08-22 09:27 pm HK News Desk ಕ್ರೈಂ
ಮೂಡುಬಿದ್ರೆ, ಆಗಸ್ಟ್ 10: ಮೂರು ಹಸುಗಳನ್ನು ಟೆಂಪೋದಲ್ಲಿ ಅಕ್ರಮವಾಗಿ ಒಯ್ಯುತ್ತಿದ್ದ ಇಬ್ಬರನ್ನು ಮೂಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ. ಸಂದೇಶ್ ಶೆಟ್ಟಿ ಮತ್ತು ಪ್ರಣೀತ್ ಎಂಬ ಇಬ್ಬರು ಬಂಧಿತರು.
ವಿದ್ಯಾಗಿರಿಯಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಮಧ್ಯಾಹ್ನ ಹೊತ್ತಿಗೆ ಮೂರು ಹಸುಗಳನ್ನು ಟೆಂಪೋದಲ್ಲಿ ಸಾಗಿಸುತ್ತಿದ್ದರು. ಈಗಿನ ಗೋಹತ್ಯೆ ನಿಷೇಧ ಕಾಯ್ದೆ ಪ್ರಕಾರ ಹಸುವನ್ನು ಸಾಗಿಸುವುದಕ್ಕೂ ಪರ್ಮಿಟ್ ಪಡೆದಿರಬೇಕು. ಇವರು ಯಾವುದೇ ಪರ್ಮಿಟ್ ಹೊಂದಿಲ್ಲದೆ ಹಸುವನ್ನು ಸಾಗಿಸುತ್ತಿದ್ದರು. ಎಲ್ಲಿ ತಗೊಂಡು ಹೋಗ್ತಾ ಇದ್ದೀರಿ ಅನ್ನುವ ಪ್ರಶ್ನೆಗೆ ಸರಿಯಾದ ಉತ್ತರ ನೀಡಿಲ್ಲ. ಹಾಗಾಗಿ ಟೆಂಪೋದಲ್ಲಿದ್ದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಸಂದೇಶ್ ಮತ್ತು ಪ್ರಣೀತ್ ಇಬ್ಬರು ಕೂಡ ಮೂಡುಬಿದ್ರೆ ನಗರ ವ್ಯಾಪ್ತಿಯ ಲಾಡಿ ನಿವಾಸಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ತನಿಖೆ ನಡೆಸಿದ ವೇಳೆ, ಹಸುಗಳನ್ನು ಬೇರೆಯವರಿಗೆ ಮಾರುವುದಕ್ಕೆ ಒಯ್ಯುತ್ತಿದ್ದರು ಅನ್ನುವ ಮಾಹಿತಿಯನ್ನು ಯುವಕರು ನೀಡಿದ್ದಾರೆ. ಯಾರಿಗೆ ಮಾರುವುದಕ್ಕೆ ಎಂದು ಕೇಳಿದ್ದಕ್ಕೆ ಸರಿಯಾಗಿ ಉತ್ತರ ನೀಡಿಲ್ಲ. ಮೇಲ್ನೋಟಕ್ಕೆ ಗೋಮಾಂಸ ಮಾಡುವ ಮಂದಿಗೆ ಇವರೇ ಹಸುಗಳನ್ನು ಸಾಗಿಸುತ್ತಿದ್ದರು ಎನ್ನಲಾಗುತ್ತಿದೆ. ಆಲಂಗಾರಿನ ನವೀನ್ ಎಂಬವರಿಂದ ಮೂರು ಹಸುಗಳನ್ನು ಖರೀದಿಸಿ ತಂದಿದ್ದು, ಗೋ ಹಂತಕರಿಗೆ ಇವರೇ ಸರಬರಾಜು ಮಾಡುತ್ತಿದ್ದರು ಅನ್ನುವ ಅನುಮಾನ ಪೊಲೀಸರದ್ದು. ಬಂಧಿತ ಯುವಕರು ಯಾವುದೇ ಸಂಘಟನೆಯಲ್ಲಿ ಗುರುತಿಸಿಕೊಂಡವರಲ್ಲ ಎಂದು ಪೊಲೀಸರು ಹೇಳುತ್ತಾರೆ.
ಸಾಮಾನ್ಯವಾಗಿ ಗೋವನ್ನು ಹತ್ಯೆ ಮಾಡುವುದಕ್ಕೆ ಹಿಂದು ಸಂಘಟನೆಗಳ ಪ್ರಬಲ ವಿರೋಧ ಇದೆ. ಇಲ್ಲಿ ಹಿಂದು ಯುವಕರೇ ಗೋವನ್ನು ಕಸಾಯಿಗಳಿಗೆ ಮಾರಾಟಕ್ಕೆ ಒಯ್ಯುತ್ತಿದ್ದರು ಅನ್ನೋದು ಕಂಡುಬಂದಿದೆ. ಹಗಲಿನಲ್ಲಿ ಸಾಗಿಸಿದರೆ ಯಾರು ಕೂಡ ಸಂಶಯ ಪಡಲ್ಲ ಎಂದು ಗೋವನ್ನು ರಾಜಾರೋಷವಾಗಿಯೇ ಸಾಗಿಸುತ್ತಿದ್ದರು. ಆದರೆ ಈಗಿನ ನಿಯಮದ ಪ್ರಕಾರ, ಪೊಲೀಸರು ಚೆಕ್ ಪೋಸ್ಟ್ ಹಾಕಿ ತಪಾಸಣೆ ನಡೆಸಿದಾಗ, ಅಸಲಿ ವಿಷಯ ಬೆಳಕಿಗೆ ಬಂದಿದೆ.
A police team comprising SI Siddappa, ASI Kumar and others seized a pickup van near the Vidyagiri Junction at Moodbidri on Tuesday August 9 and found them to be illegally transporting three cows on conducting a search of the vehicle. On police interrogation, it was also found that the accused had reportedly bought the cows at a low price from Alangar Naveen's farm to convert it into beef and were in the process of handing it over to someone at Kaikamba.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm