ಬ್ರೇಕಿಂಗ್ ನ್ಯೂಸ್
10-08-22 09:27 pm HK News Desk ಕ್ರೈಂ
ಮೂಡುಬಿದ್ರೆ, ಆಗಸ್ಟ್ 10: ಮೂರು ಹಸುಗಳನ್ನು ಟೆಂಪೋದಲ್ಲಿ ಅಕ್ರಮವಾಗಿ ಒಯ್ಯುತ್ತಿದ್ದ ಇಬ್ಬರನ್ನು ಮೂಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ. ಸಂದೇಶ್ ಶೆಟ್ಟಿ ಮತ್ತು ಪ್ರಣೀತ್ ಎಂಬ ಇಬ್ಬರು ಬಂಧಿತರು.
ವಿದ್ಯಾಗಿರಿಯಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಮಧ್ಯಾಹ್ನ ಹೊತ್ತಿಗೆ ಮೂರು ಹಸುಗಳನ್ನು ಟೆಂಪೋದಲ್ಲಿ ಸಾಗಿಸುತ್ತಿದ್ದರು. ಈಗಿನ ಗೋಹತ್ಯೆ ನಿಷೇಧ ಕಾಯ್ದೆ ಪ್ರಕಾರ ಹಸುವನ್ನು ಸಾಗಿಸುವುದಕ್ಕೂ ಪರ್ಮಿಟ್ ಪಡೆದಿರಬೇಕು. ಇವರು ಯಾವುದೇ ಪರ್ಮಿಟ್ ಹೊಂದಿಲ್ಲದೆ ಹಸುವನ್ನು ಸಾಗಿಸುತ್ತಿದ್ದರು. ಎಲ್ಲಿ ತಗೊಂಡು ಹೋಗ್ತಾ ಇದ್ದೀರಿ ಅನ್ನುವ ಪ್ರಶ್ನೆಗೆ ಸರಿಯಾದ ಉತ್ತರ ನೀಡಿಲ್ಲ. ಹಾಗಾಗಿ ಟೆಂಪೋದಲ್ಲಿದ್ದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಸಂದೇಶ್ ಮತ್ತು ಪ್ರಣೀತ್ ಇಬ್ಬರು ಕೂಡ ಮೂಡುಬಿದ್ರೆ ನಗರ ವ್ಯಾಪ್ತಿಯ ಲಾಡಿ ನಿವಾಸಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ತನಿಖೆ ನಡೆಸಿದ ವೇಳೆ, ಹಸುಗಳನ್ನು ಬೇರೆಯವರಿಗೆ ಮಾರುವುದಕ್ಕೆ ಒಯ್ಯುತ್ತಿದ್ದರು ಅನ್ನುವ ಮಾಹಿತಿಯನ್ನು ಯುವಕರು ನೀಡಿದ್ದಾರೆ. ಯಾರಿಗೆ ಮಾರುವುದಕ್ಕೆ ಎಂದು ಕೇಳಿದ್ದಕ್ಕೆ ಸರಿಯಾಗಿ ಉತ್ತರ ನೀಡಿಲ್ಲ. ಮೇಲ್ನೋಟಕ್ಕೆ ಗೋಮಾಂಸ ಮಾಡುವ ಮಂದಿಗೆ ಇವರೇ ಹಸುಗಳನ್ನು ಸಾಗಿಸುತ್ತಿದ್ದರು ಎನ್ನಲಾಗುತ್ತಿದೆ. ಆಲಂಗಾರಿನ ನವೀನ್ ಎಂಬವರಿಂದ ಮೂರು ಹಸುಗಳನ್ನು ಖರೀದಿಸಿ ತಂದಿದ್ದು, ಗೋ ಹಂತಕರಿಗೆ ಇವರೇ ಸರಬರಾಜು ಮಾಡುತ್ತಿದ್ದರು ಅನ್ನುವ ಅನುಮಾನ ಪೊಲೀಸರದ್ದು. ಬಂಧಿತ ಯುವಕರು ಯಾವುದೇ ಸಂಘಟನೆಯಲ್ಲಿ ಗುರುತಿಸಿಕೊಂಡವರಲ್ಲ ಎಂದು ಪೊಲೀಸರು ಹೇಳುತ್ತಾರೆ.
ಸಾಮಾನ್ಯವಾಗಿ ಗೋವನ್ನು ಹತ್ಯೆ ಮಾಡುವುದಕ್ಕೆ ಹಿಂದು ಸಂಘಟನೆಗಳ ಪ್ರಬಲ ವಿರೋಧ ಇದೆ. ಇಲ್ಲಿ ಹಿಂದು ಯುವಕರೇ ಗೋವನ್ನು ಕಸಾಯಿಗಳಿಗೆ ಮಾರಾಟಕ್ಕೆ ಒಯ್ಯುತ್ತಿದ್ದರು ಅನ್ನೋದು ಕಂಡುಬಂದಿದೆ. ಹಗಲಿನಲ್ಲಿ ಸಾಗಿಸಿದರೆ ಯಾರು ಕೂಡ ಸಂಶಯ ಪಡಲ್ಲ ಎಂದು ಗೋವನ್ನು ರಾಜಾರೋಷವಾಗಿಯೇ ಸಾಗಿಸುತ್ತಿದ್ದರು. ಆದರೆ ಈಗಿನ ನಿಯಮದ ಪ್ರಕಾರ, ಪೊಲೀಸರು ಚೆಕ್ ಪೋಸ್ಟ್ ಹಾಕಿ ತಪಾಸಣೆ ನಡೆಸಿದಾಗ, ಅಸಲಿ ವಿಷಯ ಬೆಳಕಿಗೆ ಬಂದಿದೆ.
A police team comprising SI Siddappa, ASI Kumar and others seized a pickup van near the Vidyagiri Junction at Moodbidri on Tuesday August 9 and found them to be illegally transporting three cows on conducting a search of the vehicle. On police interrogation, it was also found that the accused had reportedly bought the cows at a low price from Alangar Naveen's farm to convert it into beef and were in the process of handing it over to someone at Kaikamba.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm