ಬ್ರೇಕಿಂಗ್ ನ್ಯೂಸ್
13-08-22 04:37 pm Udupi Correspondent ಕ್ರೈಂ
ಪಡುಬಿದ್ರಿ, ಆಗಸ್ಟ್ 13 : ಮಹಿಳೆಯರಿದ್ದ ಮನೆಗೆ ಬಂದಿದ್ದ ಯುವಕನೊಬ್ಬ ಅವರಲ್ಲಿ ಒಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ಅವರು ಧರಿಸಿದ್ದ ಆಭರಣಗಳನ್ನೇ ಉಪಾಯದಿಂದ ಹೊತ್ತೊಯ್ದ ಘಟನೆ ಪಲಿಮಾರಿನಲ್ಲಿ ನಡೆದಿದ್ದು, ಈ ಬಗ್ಗೆ ಅಕ್ಕ-ತಂಗಿ ಪಡುಬಿದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದ ಮೇ ತಿಂಗಳ ಮೊದಲ ವಾರದಲ್ಲಿ ತನ್ನನ್ನು ಹರೀಶ್ ಪುತ್ತೂರು ಎಂದು ಪರಿಚಯಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ ಆ ಮನೆಗೆ ಬಂದಿದ್ದ. ವಿಶ್ವಕರ್ಮ ಸಮುದಾಯದ ವ್ಯಕ್ತಿಯೆಂದು ಹೇಳಿಕೊಂಡಿದ್ದಲ್ಲದೆ, ತನಗೆ ಕುಂದಾಪುರದಲ್ಲಿ 80 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಇದೆಯೆಂದು ಹೇಳಿಕೊಂಡಿದ್ದ. ಅದನ್ನು ಮಾರಾಟ ಮಾಡಲು ನೋಡುತ್ತಿದ್ದೇನೆ. ಆದರೆ, ಆಸ್ತಿ ದಾಖಲೆ ಪತ್ರಗಳು ಬ್ಯಾಂಕಿನಲ್ಲಿದ್ದು, ಅದನ್ನು ಮರಳಿ ಪಡೆಯಲು ಒಂದಷ್ಟು ಹಣ ಬೇಕಾಗಿದೆ ಎಂದು ಹೇಳಿದ್ದಾನೆ.
ಮನೆಯಲ್ಲಿದ್ದ ಶೋಭಾ ಮತ್ತು ಆಕೆಯ ಅಕ್ಕ ಶ್ಯಾಮಲಾ ತಮ್ಮಲ್ಲಿ ಹಣ ಇಲ್ಲವೆಂದು ಹೇಳಿದ್ದಾರೆ. ಆನಂತರ, ಯುವಕ ಅಕ್ಕ-ತಂಗಿಯರನ್ನು ನಂಬಿಸಿದ್ದು, ನೀವು ಏನಾದ್ರೂ ಮಾಡಿ ಹಣ ಕೊಟ್ಟರೆ ಅದಕ್ಕೆ ಒಂದಷ್ಟು ಬಡ್ಡಿ ಸೇರಿಸಿ ಮರಳಿ ಕೊಡುತ್ತೇನೆ, ಎರಡೇ ದಿನದಲ್ಲಿ ಹಣ ಹಿಂತಿರುಗಿಸುತ್ತೇನೆ ಎಂದು ನಂಬಿಸಿದ್ದಾನೆ. ನಮ್ಮಲ್ಲಿ ಹಣ ಇಲ್ಲವೆಂದು ಹೇಳಿದಾಗ, ಒಮ್ಮೆಗೆ ಬಂಗಾರ ಇದ್ದರೂ ಆಗಬಹುದು ಎಂದು ಹೇಳಿದ್ದಾನೆ. ಕೊನೆಗೆ ಯುವಕನ ಬಣ್ಣನೆ ಮಾತುಗಳನ್ನು ನಂಬಿದ ಅಕ್ಕ-ತಂಗಿಯರು ತಮ್ಮಲ್ಲಿದ್ದ ಉಂಗುರ, ಕಿವಿಯೋಲೆ, ಎರಡೂವರೆ ಪವನ್ ತೂಕದ ಚಿನ್ನದ ಸರ ತೆಗೆದು ಕೊಟ್ಟಿದ್ದಾರೆ. ಒಟ್ಟು 1.65 ಲಕ್ಷ ಮೌಲ್ಯದ ಚಿನ್ನದ ಒಡವೆಗಳನ್ನು ಆತನಿಗೆ ಕೊಟ್ಟಿದ್ದಾರೆ.
ಅಲ್ಲಿಂದ ಹಿಂತಿರುಗುವ ಸಂದರ್ಭದಲ್ಲಿ ಎರಡೇ ದಿನದಲ್ಲಿ ಹಿಂತಿರುಗಿ ಕೊಡುತ್ತೇನೆ. ತನ್ನ ಜಾಗ ಸೇಲ್ ಆಗಲಿದ್ದು, ಮೇ 16ರಂದು ಖಂಡಿತ ಬರುತ್ತೇನೆ ಎಂದು ಭರವಸೆ ಕೊಟ್ಟು ಹೋಗಿದ್ದ. ಆದರೆ ಚಿನ್ನಾಭರಣ ತೆಗೆದುಕೊಂಡು ಹೋದವನು ಮತ್ತೆ ಬಂದಿಲ್ಲ. ಅಂದು ಮನೆಯಲ್ಲಿ ಎರಡು ದಿನಗಳ ಕಾಲ ಉಳಿದುಕೊಂಡು ನಂಬಿಕೆ ಹುಟ್ಟಿಸಿದ್ದ. ಮುಂದೆ ಮದುವೆ ಆಗೋದಾಗಿಯೂ ಭರವಸೆ ನೀಡಿದ್ದ. ಮೋಸ ಮಾಡುವ ಉದ್ದೇಶದಿಂದಲೇ ಚಿನ್ನ ತೆಗೆದುಕೊಂಡು ಹೋಗಿದ್ದಾನೆ ಎಂದು ಪಡುಬಿದ್ರಿ ಠಾಣೆಗೆ ನೀಡಿರುವ ದೂರಿನಲ್ಲಿ ಶೋಭಾ ತಿಳಿಸಿದ್ದಾರೆ.
A case is filed at Padubidri police station in which it is accused that a stranger, who introduced himself as Harish Puttur and belonging to Vishwakarma community, came to the house of Shobha, resident of Palimaru on May 6 and took Rs 1.65 lac worth golden ornaments and cheater her.The accused stranger said to complainant Shobha that his property at Kundapur is sold for Rs 80 lac and the documents are in bank and he needs money to get the documents.
31-07-25 11:20 pm
Bangalore Correspondent
Kolar woman blood group: ಕೋಲಾರದ ಮಹಿಳೆಯಲ್ಲಿ ವಿ...
31-07-25 10:20 am
Pranab Mohanty, SIT, Dharmasthala; ಎಡಿಜಿಪಿ ಪ್...
30-07-25 06:28 pm
Dharmasthala Burial Site, Atm, Pan Card Found...
30-07-25 05:42 pm
Al Qaeda Arrest, Bangalore: ಕರ್ನಾಟಕ ರಾಜಧಾನಿಗೂ...
30-07-25 11:40 am
31-07-25 10:08 pm
HK News Desk
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
31-07-25 11:16 pm
Mangalore Correspondent
MCC Bank to Inaugurate 20th Branch in Byndoor...
31-07-25 10:14 pm
KMC Hospital Attavar Trains Armed Forces Doct...
31-07-25 09:14 pm
Mangalore KMC Attavar, Workshop: ಅತ್ತಾವರ ಕೆಎಂ...
31-07-25 09:05 pm
Human Skull, Multiple Bones, Dharmasthala, SI...
31-07-25 08:45 pm
31-07-25 06:04 pm
Mangalore Correspondent
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm
Mangalore Crime, Arrest: ಉದ್ಯಮಿಗಳಿಗೆ ನಕಲಿ ಆಸ್...
30-07-25 08:48 pm
Mysuru Drugs, Crime, Mumbai Police: ಮೈಸೂರಿನಲ್...
30-07-25 11:37 am
ಮಕ್ಕಳಾಗಿಲ್ಲ ಅಂತ ಗಂಡನ ಮೇಲೆ ಸಿಟ್ಟು ; ಪ್ರಿಯಕರನಿಂ...
29-07-25 08:54 pm