ಬ್ರೇಕಿಂಗ್ ನ್ಯೂಸ್
18-08-22 05:35 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್ 18: ಕಾನೂನು ವಿದ್ಯಾರ್ಥಿನಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದ ವಕೀಲ ಕೆಎಸ್ಎನ್ ರಾಜೇಶ್ ವಿರುದ್ಧ ಮಂಗಳೂರು ದಕ್ಷಿಣ ಉಪ ವಿಭಾಗ ಎಸಿಪಿ ದಿನಕರ ಶೆಟ್ಟಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
2021ರ ಸೆಪ್ಟಂಬರ್ 25ರಂದು ಕರಂಗಲ್ಪಾಡಿಯ ಕಚೇರಿಯಲ್ಲಿದ್ದಾಗ ವಕೀಲ ಕೆಎಸ್ಎನ್ ರಾಜೇಶ್ ತನ್ನ ಮೇಲೆ ಅತ್ಯಾಚಾರ ನಡೆಸುವ ಉದ್ದೇಶದಿಂದ ಲೈಂಗಿಕ ಕಿರುಕುಳ ನೀಡಿದ್ದಾರೆಂದು ವಿದ್ಯಾರ್ಥಿನಿ ಅಕ್ಟೋಬರ್ 18ರಂದು ಉರ್ವಾ ಠಾಣೆಗೆ ದೂರು ನೀಡಿದ್ದರು. ಬಳಿಕ ಪ್ರಕರಣವನ್ನು ಮಹಿಳಾ ಠಾಣೆಗೆ ವರ್ಗಾಯಿಸಿ ಐಪಿಸಿ ಸೆಕ್ಷನ್ 376, 376(2) ಎಫ್, 376(2)ಕೆ, 376(ಸಿ)ಎ, 511, 354(ಎ), 354(ಬಿ), 354(ಸಿ), 354(ಡಿ), 506, 384, 388, 389, 204, 203, 212, 120 ಬಿ, 179, 202 ಜೊತೆಗೆ 149 ಅಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರದಲ್ಲಿ ಮಂಗಳೂರಿನ ಕೆಲವು ವಕೀಲರೇ ಮುತುವರ್ಜಿ ವಹಿಸಿದ್ದರಿಂದ ಕೇಸು ಬಿಗಿಯಾಗಿತ್ತು.

ಅಲ್ಲದೆ, ಅತ್ಯಾಚಾರ ಯತ್ನ ಪ್ರಕರಣ ಮಾಧ್ಯಮದಲ್ಲಿಯೂ ಭಾರೀ ಸುದ್ದಿಯಾಗಿದ್ದರಿಂದ ಆರೋಪಿ ವಕೀಲ ತಲೆಮರೆಸಿಕೊಂಡಿದ್ದರು. ಎರಡು ತಿಂಗಳ ಬಳಿಕ ಮಂಗಳೂರಿನ 3ನೇ ಜೆಎಂಎಫ್ ಕೋರ್ಟಿಗೆ ವಕೀಲ ಶರಣಾಗತಿಯಾಗಿದ್ದು, ಆನಂತರ ಪೊಲೀಸರು ಕಸ್ಟಡಿಗೆ ಪಡೆದು ತನಿಖೆ ನಡೆಸಿದ್ದರು. ಆ ಸಂದರ್ಭದಲ್ಲಿ ತನಿಖೆಯ ಹೊಣೆಯನ್ನು ನಗರ ದಕ್ಷಿಣ ಉಪವಿಭಾಗದ ಎಸಿಪಿಯಾಗಿದ್ದ ರಂಜಿತ್ ಕುಮಾರ್ ಬಂಡಾರು ಅವರಿಗೆ ವಹಿಸಲಾಗಿತ್ತು.
ಪ್ರಕರಣ ಕೈಗೆತ್ತಿಕೊಂಡ ಒಂದೇ ತಿಂಗಳಲ್ಲಿ ರಂಜಿತ್ ಕುಮಾರ್ ವರ್ಗಾವಣೆಯಾಗಿದ್ದು ತೆರವಾದ ಜಾಗಕ್ಕೆ ದಿನಕರ ಶೆಟ್ಟಿ ಬಂದಿದ್ದರು. ದಿನಕರ ಶೆಟ್ಟಿ ತನಿಖೆಯನ್ನು ಪೂರ್ತಿಗೊಳಿಸಿ ಇದೀಗ 3ನೇ ಜೆಎಂಎಫ್ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 1ನೇ ಆರೋಪಿ ಕೆಎಸ್ಎನ್ ರಾಜೇಶ್ ಮತ್ತು ಆರೋಪಿ ಪರಾರಿಯಾಗಲು ಸಹಕರಿಸಿ 2ನೇ ಆರೋಪಿ ಅನಂತ ಭಟ್ ಮತ್ತು 3ನೇ ಆರೋಪಿ ಅಚ್ಚುತ್ತ ಭಟ್ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
Mangalore Charge sheet filed against Lawyer KSN Rajesh over sexual harassment case. Two law student interns have filed complaints in the women's police station here, against special public prosecutor, K S N Rajesh of the Lokayukta division here, accusing him of sexual harassment and threat. A case has been registered against the advocate concerned.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm