ಬ್ರೇಕಿಂಗ್ ನ್ಯೂಸ್
 
            
                        19-08-22 08:38 pm HK News Desk ಕ್ರೈಂ
 
            ಮುಂಬೈ, ಆಗಸ್ಟ್ 19: 21 ವರ್ಷದ ಯುವತಿಯೊಬ್ಬಳು 11 ವರ್ಷದ ಬಾಲಕಿಯನ್ನು ತನ್ನ ಮೂವರು ಸ್ನೇಹಿತರಿಗೆ ಒಪ್ಪಿಸಿ, ಅತ್ಯಾಚಾರ ಘಟನೆಗೆ ಸಾಕ್ಷಿಯಾದ ಪ್ರಸಂಗ ಮುಂಬೈನಲ್ಲಿ ನಡೆದಿದ್ದು, ಪೊಲೀಸರು ಕೇಸು ದಾಖಲಾಗುತ್ತಿದ್ದಂತೆ ಯುವತಿ ಮತ್ತು ಆಕೆಯ ಇಬ್ಬರು ಸ್ನೇಹಿತರನ್ನು ಬಂಧಿಸಿದ್ದಾರೆ.
ಪಶ್ಚಿಮ ಮುಂಬೈ ನಗರದ ವಿರಾರ್ ಠಾಣೆ ವ್ಯಾಪ್ತಿಯಲ್ಲಿ ಆಗಸ್ಟ್ 17ರಂದು ಘಟನೆ ನಡೆದಿದೆ. ಬಾಲಕಿ ಸಂಜೆ ಹೊತ್ತಿಗೆ ಮೊಬೈಲ್ ಅಂಗಡಿಯೊಂದಕ್ಕೆ ರಿಪೇರಿಗೆಂದು ತೆರಳಿದ್ದು ಈ ವೇಳೆ 21 ವರ್ಷದ ಪರಿಚಯದ ಯುವತಿ ಎದುರಾಗಿದ್ದಳು. ಆಕೆ ಬಾಲಕಿಯನ್ನು ಜೊತೆಗೆ ನಿಗೂಢ ಜಾಗವೊಂದಕ್ಕೆ ಕರೆದೊಯ್ದಿದ್ದು, ಅಲ್ಲಿಗೆ ತನ್ನ ಇಬ್ಬರು ಸ್ನೇಹಿತರನ್ನು ಕರೆದಿದ್ದಾಳೆ.
ಆನಂತರ, ಹುಡುಗರು ಮತ್ತು ಯುವತಿ ಮಧ್ಯರಾತ್ರಿ ವೇಳೆಗೆ ಬಾಲಕಿಯನ್ನು ಗಣೇಶೋತ್ಸವಕ್ಕೆಂದು ಹಾಕಿರುವ ಪೆಂಡಾಲ್ ಬದಿಗೆ ಕೊಂಡೊಯ್ದು ಅಲ್ಲಿ ಅತ್ಯಾಚಾರ ನಡೆಸಿದ್ದಾರೆ. ಇಬ್ಬರು ಯುವಕರು ಸೇರಿ ಅತ್ಯಾಚಾರ ನಡೆಸಿದ್ದು, ಯುವತಿ ಬಾಲಕಿಯನ್ನು ಸೆಕ್ಸ್ ನಡೆಸಲು ಒಪ್ಪಿಸುವಂತೆ ಬಲವಂತ ಪಡಿಸಿದ್ದಾಳೆ. ಇನ್ನೊಬ್ಬ ಯುವಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ರಾತ್ರಿಯಿಡೀ ಕಿರುಕುಳ ನೀಡಿದ ಬಳಿಕ ಮರುದಿನ ಬೆಳಗ್ಗೆ ಬಾಲಕಿಯನ್ನು ಹೊರಗೆ ಬಿಟ್ಟಿದ್ದು, ಆಕೆ ನಡೆದ ಘಟನೆಯನ್ನು ಮನೆಯವರಿಗೆ ತಿಳಿಸಿದ್ದಾಳೆ.
ಮನೆಮಂದಿ ವಿರಾರ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆರೋಪಿ ಯುವತಿ ಸೇರಿದಂತೆ ಮೂವರನ್ನು ದೂರು ದಾಖಲಾದ ಮೂರೇ ಗಂಟೆಯಲ್ಲಿ ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬ ಯುವಕ ಕಾಲೇಜು ವಿದ್ಯಾರ್ಥಿ, ಇನ್ನೊಬ್ಬ ತರಕಾರಿ ವ್ಯಾಪಾರಿಯಾಗಿದ್ದ. ಇನ್ನೊಬ್ಬ ಆರೋಪಿ ಡ್ರಗ್ಸ್ ಡೀಲರ್ ಆಗಿದ್ದು, ಮೂವರೂ ಯುವತಿಯ ಸ್ನೇಹಿತರಾಗಿದ್ದರು. ಸ್ನೇಹಿತರ ಬಯಕೆಯಂತೆ ಯುವತಿಯೇ ಬಾಲಕಿಯನ್ನು ಸೆಕ್ಸ್ ನಡೆಸಲು ಕರೆತಂದಿದ್ದಳು.
 
            
            
            An 11-year-old girl was gang-raped by three men, at the behest of her 21-year-old female friend in Mumbai’s Virar (West) area in the wee hours of Wednesday, August 17. Three of the accused, including the female friend, were arrested within six hours, police said.The incident took place when the victim had gone to a shop near her house to get her cell phone repaired at around 7 pm on Tuesday, August 16. There, she met her 21-year-old female friend, who took her for a stroll.
 
    
            
             31-10-25 08:10 pm
                        
            
                  
                HK News Desk    
            
                    
 
    'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
 
    ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             31-10-25 10:47 pm
                        
            
                  
                Mangalore Correspondent    
            
                    
 
    MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
 
    ಅನಧಿಕೃತ ಪಾರ್ಕಿಂಗ್ ವಿರುದ್ಧ ಮಂಗಳೂರು ಪೊಲೀಸರ ಕಾರ್...
31-10-25 09:00 pm
 
    78 ಶೇ. ಜನರಿಗೆ ಎರಡು ವರ್ಷದಲ್ಲಿ 23 ಸಾವಿರ ಮಕ್ಕಳು,...
31-10-25 03:05 pm
 
    ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
 
    
            
             31-10-25 10:57 pm
                        
            
                  
                Mangalore Correspondent    
            
                    
 
    ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm
 
    ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ ; ಮಂಗಳೂರು- ಉಡುಪಿಯ...
29-10-25 10:43 pm
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm