ಬ್ರೇಕಿಂಗ್ ನ್ಯೂಸ್
20-08-22 01:38 pm Bangalore Correspondent ಕ್ರೈಂ
ಬೆಂಗಳೂರು, ಆಗಸ್ಟ್ 20: ಆಸ್ತಿಗಾಗಿ ಸ್ವಂತ ತಾತನನ್ನೇ ಹೊಡೆದು ಕೊಂದಿದ್ದ ಆರೋಪಿ ಮೊಮ್ಮಗನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಮೊಮ್ಮಗ ಜಯಂತ್ (20) ಮತ್ತು ಕೊಲೆಗೆ ಸಹಕರಿಸಿದ ಯಾಸೀನ್ (22) ಬಂಧಿತ ಆರೋಪಿಗಳು. ಜಯಂತ್, ಸ್ನೇಹಿತನ ಜೊತೆ ಸೇರಿ ತಾತ ಪುಟ್ಟಯ್ಯ ಎಂಬವರನ್ನ ಕೊಂದಿದ್ದ. ಆಗಸ್ಟ್ 17ರಂದು ಕೊಲೆ ಮಾಡಿದ್ದು ಯಲಹಂಕ ಸಮೀಪದ ಸುರಭಿ ಲೇಔಟ್ ನಲ್ಲಿ ಘಟನೆ ನಡೆದಿತ್ತು. ಆಸ್ತಿ ವಿಚಾರದಲ್ಲಿ ತಾತನ ಜೊತೆ ಜಗಳವಾಡ್ತಿದ್ದ. ಅಲ್ಲದೆ, ವ್ಯವಹಾರಕ್ಕಾಗಿ ಆಸ್ತಿ ಮೇಲೆ ಲೋನ್ ಕೊಡಿಸುವಂತೆ ಪೀಡಿಸ್ತಿದ್ದ. ಆದ್ರೆ ಮೊಮ್ಮಗ ಹಠಕ್ಕೆ ಆಗಲ್ಲ ಎಂದಿದ್ದ ಪುಟ್ಟಯ್ಯರನ್ನು ಮೊಮ್ಮಗನೇ ಕೊಲೆ ಮಾಡಲು ಸಂಚು ರೂಪಿಸಿದ್ದ.

ಕೊಲೆ ಮಾಡಿಯಾದರೂ ಆಸ್ತಿ ಪಾಲು ಪಡೆದುಕೊಂಡರಾಯ್ತು ಎಂದು ಯೋಜನೆ ಹಾಕಿದ್ದ ಆರೋಪಿ, ಗೆಳೆಯ ಯಾಸೀನ್ಗೆ ಕರೆ ಮಾಡಿ ಕರೆಸಿಕೊಂಡು 17ರಂದು ಮನೆಗೆ ನುಗ್ಗಿ ಪುಟ್ಟಯ್ಯನನ್ನ ಕೊಲೆ ಮಾಡಿದ್ದಾರೆ. ಕೊಲೆಗೈದು ತಾತನ ಮೈಮೇಲಿದ್ದ ಚಿನ್ನಾಭರಣ ದೋಚಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಆದರೆ ಕುಟುಂಬಸ್ಥರ ಮೂಲಕ ಮೊಮ್ಮಗ ಜಯಂತ್, ಜಗಳ ಮಾಡಿಕೊಂಡಿದ್ದ ವಿಚಾರ ಪೊಲೀಸರಿಗೆ ಲಭಿಸಿತ್ತು. ವಿಚಾರಣೆಗೆ ಯತ್ನಿಸಿದಾಗ ಆರೋಪಿ ಪರಾರಿಯಾಗಿದ್ದು ತಿಳಿದು ಸಂಶಯ ಪಕ್ಕಾ ಆಗಿತ್ತು. ಸದ್ಯ ಇಬ್ಬರೂ ಆರೋಪಿಗಳನ್ನ ಯಲಹಂಕ ಪೊಲೀಸರು ಬಂಧಿಸಿದ್ದು ಬೇರೆ ಯಾರಾದ್ರೂ ಕೊಲೆಗೆ ಸಹಕಾರ ನೀಡಿದ್ದರೇ ಅನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Grandfather murdered by grandson and his close friend for the sake of property in Bangalore. The arrested are identified as Jayanth grand son and friend Yasin.
07-02-26 05:09 pm
HK News Desk
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
Sanjana Bus Fire Accident, Nelamangala: ಮತ್ತೊ...
06-02-26 12:30 pm
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
08-02-26 10:18 pm
HK News Desk
25 ವರ್ಷಗಳ ಬಳಿಕ ಮುಂಬೈ ಪಾಲಿಕೆ ಬಿಜೆಪಿ ತೆಕ್ಕೆಗೆ ;...
07-02-26 10:53 pm
ಕಣ್ಣೆದುರೇ ನಡೆದ ಅಚ್ಚರಿ ; 1 ಲಕ್ಷ ರೂ. ಮೌಲ್ಯದ ಚಿನ...
06-02-26 10:58 pm
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
08-02-26 11:17 pm
HK News Desk
ಜಾಗತಿಕ ಪ್ರವಾಸಿ ತಾಣಗಳ ಅಭಿವೃದ್ಧಿ ; ಕೋಡಿ- ಕನ್ಯಾನ...
08-02-26 10:10 pm
ಬೈಂದೂರು ಕ್ಷೇತ್ರದ ಮಾಜಿ ಶಾಸಕ, ಜನತಾ ಪರಿವಾರದ ಹಿರಿ...
07-02-26 12:55 pm
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
ಬಿಜೆಪಿಯವರು ತಿಪ್ಪರಲಾಗ ಹೊಡೆದ್ರೂ ಅಧಿಕಾರಕ್ಕೆ ಬರಲ್...
06-02-26 10:56 pm
09-02-26 11:26 am
Mangalore Correspondent
Mangalore Jail Raid: ಮಂಗಳೂರು ಜೈಲಿನಲ್ಲಿ ಬರ್ಕೆ...
08-02-26 02:07 pm
MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಪೊಲೀಸ್ ದಾ...
08-02-26 12:59 pm
Mangalore Robbery, Crime: ಕಳವಾರಿಗೆ ಮೆಹಂದಿ ಹೋಗ...
08-02-26 12:37 pm
ಫ್ರೀ ಫೈರ್ ಗೇಮ್ ಚಟ ; ಅಕ್ಕನ ಮಗನ ಕೊಂದಿದ್ದ ಮಾವ, ಪ...
07-02-26 10:48 pm