ಬ್ರೇಕಿಂಗ್ ನ್ಯೂಸ್
24-08-22 05:31 pm HK News Desk ಕ್ರೈಂ
ಹೈದರಾಬಾದ್, ಆಗಸ್ಟ್ 24: ಸೈಬರ್ ಕಳ್ಳರು ವಂಚನೆಗೆ ಯಾವೆಲ್ಲ ಟ್ರಿಕ್ಸ್ ಬಳಸುತ್ತಾರೆ ಅನ್ನೋದನ್ನು ಊಹಿಸೋದಕ್ಕೂ ಆಗಲ್ಲ. ಆಂಧ್ರಪ್ರದೇಶದಲ್ಲಿ ಒಬ್ಬರು ಮಹಿಳೆ ಕೇವಲ ವಾಟ್ಸಪ್ ಲಿಂಕ್ ಒತ್ತಿದ ಮಾತ್ರಕ್ಕೆ ಬ್ಯಾಂಕಲ್ಲಿದ್ದ ಖಾತೆಯ ಹಣವನ್ನೆಲ್ಲ ಕಳಕೊಂಡಿದ್ದಾರೆ ಅನ್ನುವ ಸುದ್ದಿ ಬಂದಿದೆ.
ಮದನಪಲ್ಲಿ ನಗರದ ರೆಡ್ಡೆಪ್ಪನಾಯ್ಡು ಕಾಲನಿಯ ನಿವಾಸಿ ವರಲಕ್ಷ್ಮಿ ಹಣ ಕಳಕೊಂಡವರು. ತನ್ನ ಮೊಬೈಲಿಗೆ ಬಂದಿದ್ದ ವಾಟ್ಸಪ್ ಲಿಂಕನ್ನು ಒತ್ತಿದ್ದರು. ಅಪರಿಚಿತ ನಂಬರಿಂದ ಬಂದಿದ್ದ ಮೆಸೇಜ್ ಲಿಂಕನ್ನು ಒತ್ತಿದ ಕೆಲವೇ ಹೊತ್ತಿನಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ 21 ಲಕ್ಷ ರೂಪಾಯಿ ಹೋಗಿದೆ ಎಂದು ಸೈಬರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ನಿವೃತ್ತ ಶಿಕ್ಷಕಿಯೂ ಆಗಿರುವ ವರಲಕ್ಷ್ಮಿ ತನ್ನ ಖಾತೆಯಿಂದ ಹಣ ಹೋಗಿರುವ ಬಗ್ಗೆ ಮೆಸೇಜ್ ಬಂದಾಗಲೇ ಸಂಶಯ ಬಂದಿತ್ತು. ಕೂಡಲೇ ಬ್ಯಾಂಕ್ ಸಿಬಂದಿಗೆ ಮಾಹಿತಿ ನೀಡಿದ್ದಾರೆ. ಖಾತೆಯಲ್ಲಿದ್ದ ಹಣ ಖಾಲಿಯಾಗಿತ್ತು. ಆನಂತರ, ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ಪ್ರಕಾರ, ಸೈಬರ್ ಕಳ್ಳರು ವೈರಸ್ ಇರುವ ಲಿಂಕನ್ನು ವಾಟ್ಸಪ್ ಗೆ ಕಳಿಸುತ್ತಾರೆ. ಅದರಲ್ಲಿರುವ ವೈರಸ್ ಮೊಬೈಲನ್ನು ಹ್ಯಾಕ್ ಮಾಡಿ, ಅದರಲ್ಲಿ ಇರುವ ಎಲ್ಲ ಮಾಹಿತಿಗಳನ್ನೂ ಕದಿಯುತ್ತದೆ. ಬ್ಯಾಂಕ್ ಖಾತೆಗಳು ಹೆಚ್ಚಿನವು ಮೊಬೈಲ್ ಲಿಂಕ್ ಆಗಿರುವುದರಿಂದ ಅದರಿಂದ ಹಣ ಕಳವು ಮಾಡಿದ್ದಾರೆ ಎನ್ನಲಾಗುತ್ತಿದೆ. ವಾಟ್ಸಪ್ ಲಿಂಕ್ ಜಾಲದ ಮೂಲಕ ಹಣ ಕಳವು ಮಾಡುತ್ತಿರುವುದು ಈಗ ಹೆಚ್ಚುತ್ತಿದೆಯಂತೆ.

ಅಧಿಕೃತ ಅಲ್ಲದ ವಾಟ್ಸಪ್ ಲಿಂಕ್ ಒತ್ತಬೇಡಿ
ವಾಟ್ಸಪ್ ಲಿಂಕ್ ಮೂಲಕ ಸೈಬರ್ ಹ್ಯಾಕರ್ ಕನ್ನ ಹಾಕಿದರೆ, ಅದನ್ನು ಪತ್ತೆ ಮಾಡುವುದು ತುಂಬ ಕಷ್ಟ ಎನ್ನುತ್ತಿದ್ದಾರೆ, ಹೈದರಾಬಾದ್ ಪೊಲೀಸರು. ಈ ಬಗ್ಗೆ ಜನರೇ ಜಾಗ್ರತೆ ವಹಿಸಬೇಕು ಎನ್ನುತ್ತಿದ್ದಾರೆ. ಅದಕ್ಕಾಗಿ ಅಪರಿಚಿತರ ಕಡೆಯಿಂದ ಬರುವ ಯಾವುದೇ ಮೆಸೇಜ್ ಲಿಂಕ್ ಗಳನ್ನು ಒತ್ತಬಾರದು. ಅದರಲ್ಲೂ ಡಾಟ್ ಕಾಮ್ ಅಥವಾ ಡಾಟ್ ಇನ್ ನಿಂದ ಕೊನೆಯಾಗುವ ಲಿಂಕ್ ಅಲ್ಲದೇ ಇದ್ದರೆ ಅಂಥವನ್ನು ಮುಟ್ಟಲೇಬಾರದು ಎನ್ನುತ್ತಾರೆ. ಅಧಿಕೃತ ಅಲ್ಲದ ವೆಬ್ ಸೈಟ್ ಲಿಂಕ್ ಒತ್ತಬಾರದು. ಹಣಕಾಸು ವ್ಯವಹಾರದ ಲಿಂಕ್ ಇದ್ದರೂ, ಅವನ್ನು ಒತ್ತಬಾರದು. ಅದಕ್ಕಾಗಿ ಅಪರಿಚಿತರು ಕಳುಹಿಸುವ ವಾಟ್ಸಪ್ ಲಿಂಕ್ ಒತ್ತೋಕೂ ಮುನ್ನ ಎರಡೆರಡು ಬಾರಿ ಯೋಚನೆ ಮಾಡಬೇಕು ಎಂದು ಪೊಲೀಸರು ಸಲಹೆ ನೀಡುತ್ತಾರೆ.
Another day, and here's yet another WhatsApp scam. Online fraud cases have seen significant growth in the last few years, especially due to the pandemic when people were dependent on the Internet for almost everything. Most scammers use WhatsApp, used by millions of users, to trick users and steal their hard-earned money. The latest online fraud incident comes from Andhra Pradesh, where a retired teacher was tricked and hackers managed to steal lakhs of money. And this happened through WhatsApp.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm