ಬ್ರೇಕಿಂಗ್ ನ್ಯೂಸ್
07-09-22 10:45 pm Mangalore Correspondent ಕ್ರೈಂ
ಮಂಗಳೂರು, ಸೆ.7 : ಬೋಳಾರದ ಮಣಪ್ಪುರಂ ಫೈನಾನ್ಸ್ ಕಂಪನಿಯಲ್ಲಿ ನಕಲಿ ಚಿನ್ನ ಇಟ್ಟು 13 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಿದ ಬಗ್ಗೆ ಮೂವರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2020ರ ಸೆ.12ರಿಂದ 2021ರ ಫೆ.18ರ ನಡುವೆ ರಮ್ ಸೀನಾ, ಅಕ್ತರೀ ಖಾನ್ ಮತ್ತು ಫಿರೋಜ್ ಖಾನ್ ಎಂಬ ಮೂವರು ಸೇರಿ ವಿವಿಧ ಸಂದರ್ಭಗಳಲ್ಲಿ ಒಟ್ಟು 401 ಗ್ರಾಮ್ ಚಿನ್ನಾಭರಣವನ್ನು ಇಟ್ಟು ಹಣ ಸಾಲ ಪಡೆದಿದ್ದಾರೆ. ಅಡಮಾನ ಇಡುವ ಸಂದರ್ಭದಲ್ಲಿ ಚಿನ್ನ 22 ಕ್ಯಾರೆಟ್ ಮೌಲ್ಯದ್ದು ಎಂದು ಹೇಳಿದ್ದರು. ಆನಂತರ 2021ರ ಮಾರ್ಚ್ 4ರಂದು ಮಣಪ್ಪುರಂ ಫೈನಾನ್ಸ್ ಕಂಪನಿಯ ವಿಜಿಲೆನ್ಸ್ ವಿಭಾಗವು ಪರಿಶೀಲನೆ ನಡೆಸಿದಾಗ, ಚಿನ್ನ 22 ಕ್ಯಾರೆಟ್ ಮೌಲ್ಯದ್ದು ಅಲ್ಲ. ನಕಲಿ ಚಿನ್ನ ಎನ್ನುವುದು ಕಂಡುಬಂದಿದೆ.
ಆಬಳಿಕ ಸಾಲ ತೆಗೆದುಕೊಂಡಿದ್ದ ಮೂವರಿಗೆ ನೋಟೀಸ್ ಮಾಡಿದರೂ, ಸಾಲ ಪಾವತಿ ಮಾಡಿರುವುದಿಲ್ಲ. ಈ ಬಗ್ಗೆ ನಕಲಿ ಚಿನ್ನ ಇಟ್ಟು ಮೋಸ ಮಾಡಿದ್ದಾಗಿ ಮಣಪ್ಪುರಂ ಸಂಸ್ಥೆಯ ಏರಿಯಾ ಹೆಡ್ ಬಂಡಿ ಜನಾರ್ದನ ರೆಡ್ಡಿ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಕೇಳಿದರೆ, ಎರಡೂ ಕಡೆಯಿಂದ ದೂರು ಬಂದಿದೆ ಎಂದಿದ್ದಾರೆ. ಇದಕ್ಕೂ ಮೊದಲೇ ಫಿರೋಜ್ ಖಾನ್ ಕಡೆಯವರು ದೂರು ನೀಡಿದ್ದು, ತಮ್ಮ ಚಿನ್ನವನ್ನು ಸಂಸ್ಥೆಯವರೇ ನಕಲಿ ಮಾಡಿದ್ದಾರೆಂದು ದೂರಿದ್ದಾರೆ. ಈ ಬಗ್ಗೆ ಕೋರ್ಟಿನಲ್ಲಿ ದಾವೆ ಹೂಡಿದ್ದು ಈಗ ಸಂಸ್ಥೆಯವರು ಕೂಡ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
Mangalore Fraud by pledging fake gold in Manappuram, case filed.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
13-11-25 01:44 pm
HK Staffer
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm