ಮಣಪ್ಪುರಂ ಸಂಸ್ಥೆಯಲ್ಲಿ ನಕಲಿ ಚಿನ್ನ ಇಟ್ಟು ಮೋಸ ; ಸಂಸ್ಥೆಯಿಂದಲೇ ವಂಚನೆಯೆಂದು ಪ್ರತಿ ದೂರು

07-09-22 10:45 pm       Mangalore Correspondent   ಕ್ರೈಂ

ಬೋಳಾರದ ಮಣಪ್ಪುರಂ ಫೈನಾನ್ಸ್ ಕಂಪನಿಯಲ್ಲಿ ನಕಲಿ ಚಿನ್ನ ಇಟ್ಟು 13 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಿದ ಬಗ್ಗೆ ಮೂವರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು, ಸೆ.7 : ಬೋಳಾರದ ಮಣಪ್ಪುರಂ ಫೈನಾನ್ಸ್ ಕಂಪನಿಯಲ್ಲಿ ನಕಲಿ ಚಿನ್ನ ಇಟ್ಟು 13 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಿದ ಬಗ್ಗೆ ಮೂವರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2020ರ ಸೆ.12ರಿಂದ 2021ರ ಫೆ.18ರ ನಡುವೆ ರಮ್ ಸೀನಾ, ಅಕ್ತರೀ ಖಾನ್ ಮತ್ತು ಫಿರೋಜ್ ಖಾನ್ ಎಂಬ ಮೂವರು ಸೇರಿ ವಿವಿಧ ಸಂದರ್ಭಗಳಲ್ಲಿ ಒಟ್ಟು 401 ಗ್ರಾಮ್ ಚಿನ್ನಾಭರಣವನ್ನು ಇಟ್ಟು ಹಣ ಸಾಲ ಪಡೆದಿದ್ದಾರೆ. ಅಡಮಾನ ಇಡುವ ಸಂದರ್ಭದಲ್ಲಿ ಚಿನ್ನ 22 ಕ್ಯಾರೆಟ್ ಮೌಲ್ಯದ್ದು ಎಂದು ಹೇಳಿದ್ದರು. ಆನಂತರ 2021ರ ಮಾರ್ಚ್ 4ರಂದು ಮಣಪ್ಪುರಂ ಫೈನಾನ್ಸ್ ಕಂಪನಿಯ ವಿಜಿಲೆನ್ಸ್ ವಿಭಾಗವು ಪರಿಶೀಲನೆ ನಡೆಸಿದಾಗ, ಚಿನ್ನ 22 ಕ್ಯಾರೆಟ್ ಮೌಲ್ಯದ್ದು ಅಲ್ಲ. ನಕಲಿ ಚಿನ್ನ ಎನ್ನುವುದು ಕಂಡುಬಂದಿದೆ.

ಆಬಳಿಕ ಸಾಲ ತೆಗೆದುಕೊಂಡಿದ್ದ ಮೂವರಿಗೆ ನೋಟೀಸ್ ಮಾಡಿದರೂ, ಸಾಲ ಪಾವತಿ ಮಾಡಿರುವುದಿಲ್ಲ. ಈ ಬಗ್ಗೆ ನಕಲಿ ಚಿನ್ನ ಇಟ್ಟು ಮೋಸ ಮಾಡಿದ್ದಾಗಿ ಮಣಪ್ಪುರಂ ಸಂಸ್ಥೆಯ ಏರಿಯಾ ಹೆಡ್ ಬಂಡಿ ಜನಾರ್ದನ ರೆಡ್ಡಿ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಕೇಳಿದರೆ, ಎರಡೂ ಕಡೆಯಿಂದ ದೂರು ಬಂದಿದೆ ಎಂದಿದ್ದಾರೆ. ಇದಕ್ಕೂ ಮೊದಲೇ ಫಿರೋಜ್ ಖಾನ್ ಕಡೆಯವರು ದೂರು ನೀಡಿದ್ದು, ತಮ್ಮ ಚಿನ್ನವನ್ನು ಸಂಸ್ಥೆಯವರೇ ನಕಲಿ ಮಾಡಿದ್ದಾರೆಂದು ದೂರಿದ್ದಾರೆ. ಈ ಬಗ್ಗೆ ಕೋರ್ಟಿನಲ್ಲಿ ದಾವೆ ಹೂಡಿದ್ದು ಈಗ ಸಂಸ್ಥೆಯವರು ಕೂಡ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

Mangalore Fraud by pledging fake gold in Manappuram, case filed.