ಬ್ರೇಕಿಂಗ್ ನ್ಯೂಸ್
12-09-22 01:15 pm HK News Desk ಕ್ರೈಂ
ಲಕ್ನೋ, ಸೆ.12: ಹಿಂದುಳಿದ ವರ್ಗದ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ 19 ವರ್ಷದ ತನ್ನ ಮಗಳನ್ನು ತಂದೆಯೇ ಮರ್ಯಾದಾ ಹತ್ಯೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಪೈಶಾಚಿಕ ಘಟನೆ ನಡೆದಿದೆ.
ಆರೋಪಿ ತಂದೆ ಪ್ರಮೋದ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಮಗಳನ್ನು ಕತ್ತು ಹಿಸುಕಿ ಕೊಂದು ಆಕೆಯ ಮೃತದೇಹಕ್ಕೆ ಬೆಂಕಿ ಹಚ್ಚಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಮೋದ್ ಕುಮಾರ್ ಮೇಲ್ಜಾತಿಯ ವ್ಯಕ್ತಿಯಾಗಿದ್ದು ಆತನ ಮಗಳು 19 ವರ್ಷದ ಕಾಜಲ್, ಅದೇ ಊರಿನ ಹಿಂದುಳಿದ ಜಾತಿಯ ಯುವಕ ಅಜಯ್ ಕಶ್ಯಪ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ತಂದೆ ಬೈದು ಬುದ್ಧಿ ಹೇಳಿದರೂ, ಸಂಬಂಧ ಕಡಿದುಕೊಳ್ಳಲು ನಿರಾಕರಿಸಿದ್ದಳು. ಅಲ್ಲದೆ, ಅಜಯ್ ಕಶ್ಯಪ್ ಜೊತೆಗೆ ಕಾಜಲ್ ತನ್ನ ಮನೆಯವರಿಗೆ ತಿಳಿಸದೆ ಮನೆಯಿಂದ ಹೊರಟು ಹೋಗಿದ್ದಳು. ಇದರಿಂದ ಬೇಸತ್ತ ತಂದೆ ಪ್ರಮೋದ್ ಕುಮಾರ್ ತನ್ನ ಮರ್ಯಾದೆ ಹೋಗುತ್ತೆ ಎಂದು ಹೇಳಿ ಮಗಳನ್ನೇ ಕುತ್ತಿಗೆ ಹಿಸುಕಿ ಕೊಂದಿದ್ದಾನೆ. ಅಲ್ಲದೆ, ಶವವನ್ನು ಹಸುವಿನ ಸೆಗಣಿಯ ಗೊಬ್ಬರದ ಮಧ್ಯೆ ಹೂತು ಬೆಂಕಿ ಹಚ್ಚಿದ್ದಾನೆ.
ಸೆಪ್ಟೆಂಬರ್ 9 ರಂದು ರಾತ್ರಿ ಪಕ್ಕದ ಹೊಲದಲ್ಲಿ ಏನೋ ಕೆಲಸ ಇದೆಯೆಂದು ಹೇಳಿ ಮಗಳನ್ನು ಕರೆದೊಯ್ದು ಕೃತ್ಯ ಎಸಗಿದ್ದಾನೆ. ಮನೆಗೆ ಮರಳಿದ ನಂತರ, ಮಗಳನ್ನು ಪಾಣಿಪತ್ನಲ್ಲಿ ತನ್ನ ಸಹೋದರನಲ್ಲಿ ಬಿಟ್ಟು ಬಂದಿರುವುದಾಗಿ ಪ್ರಮೋದ್ ಮನೆಯಲ್ಲಿ ತಿಳಿಸಿದ್ದ. ಆದರೆ, ಶುಕ್ರವಾರ ರಾತ್ರಿ ಹೊಲದಲ್ಲಿ ಶವ ಸುಟ್ಟು ಹಾಕಿರುವ ಬಗ್ಗೆ ಸ್ಥಳೀಯರು ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಸ್ಥಳದಲ್ಲಿದ್ದ ಮೂಳೆಗಳನ್ನು ಸಂಗ್ರಹಿಸಿದ್ದು ಪ್ರಮೋದ್ ಕುಮಾರ್ ಬಗ್ಗೆ ಸಂಶಯ ಉಂಟಾಗಿ ವಶಕ್ಕೆ ಪಡೆದು ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
In a case of honour killing, a 57-year-old man has been arrested for allegedly strangling his 19-year-old daughter to death over an inter-caste relationship.
25-04-24 10:57 pm
HK News Desk
Shivaraj Tangadagi, Janardhana Reddy: ಶಿವರಾಜ...
25-04-24 09:57 pm
CID team, Neha house Hubballi: ಹುಬ್ಬಳ್ಳಿ ನೇಹಾ...
25-04-24 02:19 pm
Mallikarjun Kharge speech at Kalaburgi: ಮತ ಹಾ...
24-04-24 11:14 pm
ಸಾವಿನ ಮನೆಯಲ್ಲಿ ರಾಜಕಾರಣ ಮಾಡೋದು ಸರಿಯಲ್ಲ ; ಆರೋಪಿ...
24-04-24 07:10 pm
25-04-24 03:49 pm
HK News Desk
Groom electrocuted in Rajasthan: ರೆಸಾರ್ಟ್ ನಲ್...
24-04-24 05:01 pm
Pm Modi, Muslims: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ...
22-04-24 10:37 pm
ಮದುವೆ ಮುಗಿಸಿ ವಾಪಾಸ್ ಆಗುವ ವೇಳೆ ಭೀಕರ ಅಪಘಾತ ; ಓ...
21-04-24 03:23 pm
Surya Tilak, Ram Lallas forehead in Ayodhya:...
17-04-24 08:42 pm
25-04-24 10:01 pm
Mangalore Correspondent
Mangalore Loksabha elections: ದಕ್ಷಿಣ ಕನ್ನಡ ಲೋ...
25-04-24 09:50 pm
Blood donation, KMC manipal: ಲೋಕಸಭಾ ಚುನಾವಣೆಯ...
25-04-24 08:45 pm
Banta Brigade, Mangalore, Brijesh Chowta: ಬಂಟ...
25-04-24 02:42 pm
Vishwa Hindu Parishad, Vhp, Mangalore: ರಾಜ್ಯದ...
25-04-24 12:59 pm
25-04-24 10:18 pm
Mangalore Correspondent
Bangalore crime, Dacoity gang, 40 lakhs, robb...
25-04-24 03:33 pm
Gang raped in Bengaluru: ಬೆಂಗಳೂರಿನಲ್ಲಿ ಯುವತಿ...
25-04-24 12:19 pm
Glide touist bus, Mangalore, crime: ಬೆಂಗಳೂರು...
24-04-24 10:48 pm
ಗಿಫ್ಟ್ ವಿಚಾರದಲ್ಲಿ ಕಿರಿಕ್ ; ಅಣ್ಣ ತಂಗಿಯ ಮದುವೆಗೆ...
24-04-24 05:39 pm