ಬ್ರೇಕಿಂಗ್ ನ್ಯೂಸ್
15-09-22 08:30 pm HK News Desk ಕ್ರೈಂ
ಮಲಪ್ಪುರಂ, ಸೆ.15 : ಮಲಪ್ಪುರಂ ಜಿಲ್ಲೆಯ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ವಿದೇಶಗಳಿಂದ ಅಕ್ರಮವಾಗಿ ತಂದಿದ್ದ ಚಿನ್ನವನ್ನು ನಿಲ್ದಾಣದಿಂದ ಹೊರಗೆ ಒಯ್ಯಲು ಪ್ರಯತ್ನಿಸುತ್ತಿದ್ದ ಇಂಡಿಗೋ ಏರ್ಲೈನ್ಸ್ ಸಂಸ್ಥೆಯ ಇಬ್ಬರು ಉದ್ಯೋಗಿಗಳನ್ನು ಬಂಧಿಸಲಾಗಿದೆ.
ಸಂಸ್ಥೆಯ ಹಿರಿಯ ಕಾರ್ಯ ನಿರ್ವಾಹಕ ಅಧಿಕಾರಿ ಸಾಜಿದ್ ರೆಹಮಾನ್ ಮತ್ತು ಗ್ರಾಹಕ ಸೇವಾ ಏಜೆಂಟ್ ಮೊಹಮ್ಮದ್ ಸಾಮಿಲ್ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ 4.9 ಕೆಜಿ ಚಿನ್ನದ ಮಿಶ್ರಣವನ್ನು ವಶಪಡಿಸಿಕೊಳ್ಳಲಾಗಿದೆ.
ದುಬೈನಿಂದ ಬಂದಿದ್ದ ವಯನಾಡು ಮೂಲದ ಅಸ್ಕರಾಲಿ ಎಂಬ ಪ್ರಯಾಣಿಕ ತಂದಿದ್ದ ಚಿನ್ನದ ಪೆಟ್ಟಿಗೆಯನ್ನು ಹೊರತರಲು ಯತ್ನಿಸುತ್ತಿದ್ದಾಗ ಸಾಜಿದ್ ರೆಹಮಾನ್ ಸಿಕ್ಕಿಬಿದ್ದಿದ್ದಾರೆ. ಏರ್ಲೈನ್ಸ್ ಉದ್ಯೋಗಿಗಳ ಸಹಕಾರದಿಂದ ಚಿನ್ನ ಕಳ್ಳಸಾಗಣೆ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ಕಸ್ಟಮ್ಸ್ ಅಧಿಕಾರಿಗಳು ನೌಕರರ ಮೇಲೆ ನಿಗಾ ಇರಿಸಿದ್ದರು. ಸಾಜಿದ್ ರೆಹಮಾನ್ ಅವರನ್ನು ಅನುಮಾನಾಸ್ಪದ ಸ್ಥಿತಿಯಲ್ಲಿ ನೋಡಿದ್ದು ಪರಿಶೀಲನೆ ನಡೆಸಿದಾಗ ಸಿಕ್ಕಿಬಿದ್ದಿದ್ದಾರೆ.
ಪ್ರಯಾಣಿಕರು ತಂದಿದ್ದ ಪೆಟ್ಟಿಗೆಯನ್ನು ಸಾಜಿದ್ ತೆಗೆದುಕೊಳ್ಳಲು ಮುಂದಾಗಿದ್ದನ್ನು ಅಧಿಕಾರಿಗಳು ಸಿಸಿಟಿವಿ ಮೂಲಕ ಗಮನಿಸುತ್ತಿದ್ದರು. ಕಸ್ಟಮ್ಸ್ ಸ್ಕ್ಯಾನರ್ ವೇಳೆ ಬಾಕ್ಸ್ನಲ್ಲಿ ಚಿನ್ನದ ಅಂಶ ಪತ್ತೆಯಾಗಿದ್ದು, ಕಳ್ಳಸಾಗಣೆಗೆ ಸಹಕರಿಸಿದ ಸಾಜಿದ್ ಮತ್ತು ಗ್ರಾಹಕ ಸೇವಾ ಏಜೆಂಟ್ ಮೊಹಮ್ಮದ್ ಸಾಮಿಲ್ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
Two IndiGo employees were arrested in connection with a huge gold hunt at Karipur airport. Indigo Airline senior executive Sajid Rahman and customer service agent Mohammad Samil were arrested. Gold worth crores was seized from them.The incident happened last night. The two were caught by the customs while trying to bring out the gold brought to the airport from abroad. The bag containing gold was in the name of Askar Ali, a native of Wayanad. But he left the bag at the airport and ran away. The police have intensified their search for him.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 03:26 pm
Bangalore Correspondent
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm