ಕಾಸರಗೋಡು ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ 30 ಲಕ್ಷ ಹಣ ಪತ್ತೆ, ಮಹಾರಾಷ್ಟ್ರದ ವ್ಯಕ್ತಿಯ ಸೆರೆ, ಹವಾಲಾ ದಂಧೆ ಶಂಕೆ

16-09-22 10:14 pm       HK News Desk   ಕ್ರೈಂ

ದಾಖಲೆ ಪತ್ರಗಳಿಲ್ಲದೆ ಅನಧಿಕೃತವಾಗಿ ಬಸ್ಸಿನಲ್ಲಿ 30 ಲಕ್ಷ ರೂಪಾಯಿ ನಗದು ಹಣವನ್ನು ಸಾಗಿಸುತ್ತಿದ್ದ ಮಹಾರಾಷ್ಟ್ರ ಮೂಲದ ವ್ಯಕ್ತಿಯನ್ನು ಮಂಜೇಶ್ವರ ವಿಭಾಗದ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.

ಕಾಸರಗೋಡು, ಸೆ.16: ದಾಖಲೆ ಪತ್ರಗಳಿಲ್ಲದೆ ಅನಧಿಕೃತವಾಗಿ ಬಸ್ಸಿನಲ್ಲಿ 30 ಲಕ್ಷ ರೂಪಾಯಿ ನಗದು ಹಣವನ್ನು ಸಾಗಿಸುತ್ತಿದ್ದ ಮಹಾರಾಷ್ಟ್ರ ಮೂಲದ ವ್ಯಕ್ತಿಯನ್ನು ಮಂಜೇಶ್ವರ ವಿಭಾಗದ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಶರದ್ ದಬಾಡೆ (22) ಬಂಧಿತ ವ್ಯಕ್ತಿ. ಶುಕ್ರವಾರ ಬೆಳಗ್ಗೆ ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ತಪಾಸಣೆ ನಡೆಸುತ್ತಿದ್ದಾಗ 30 ಲಕ್ಷದ ನಗದು ಹಣ ಪತ್ತೆಯಾಗಿದೆ. ಮಲಪ್ಪುರಂ ಜಿಲ್ಲೆಯ ಮಂಜೇರಿಯ ಜುವೆಲ್ಲರಿ ಒಂದಕ್ಕೆ ಹಣ ತಲುಪಿಸಲು ತೆರಳುತ್ತಿರುವುದಾಗಿ ವ್ಯಕ್ತಿ ಹೇಳಿಕೊಂಡಿದ್ದಾನೆ.

ಬಟ್ಟೆಯಲ್ಲಿ ಸುತ್ತಿದ್ದ ಚೀಲದಲ್ಲಿ ನಗದಿನ ಕಂತೆ ಪತ್ತೆಯಾಗಿದೆ. 21 ಲಕ್ಷ ರೂಪಾಯಿ 500 ಮುಖಬೆಲೆಯ ನೋಟುಗಳು ಮತ್ತು 9 ಲಕ್ಷ ಎರಡು ಸಾವಿರದ ಪಿಂಕ್ ನೋಟುಗಳನ್ನು ಹೊಂದಿತ್ತು. ಆರೋಪಿ ಶರದ್ ದಬಾಡೆಯನ್ನು ಅಬಕಾರಿ ಅಧಿಕಾರಿಗಳು ಮಂಜೇಶ್ವರ ಪೊಲೀಸರಿಗೆ ಒಪ್ಪಿಸಿದ್ದು, ಐಟಿ ಅಧಿಕಾರಿಗಳು ಪ್ರಕರಣದ ಬಗ್ಗೆ ತನಿಖೆ ನಡೆಸುವ ಸಾಧ್ಯತೆಯಿದೆ. ಮುಂಬೈನಿಂದ ಕೇರಳಕ್ಕೆ ಹವಾಲಾ ಹಣ ಸಾಗಿಸುವ ದಂಧೆ ಇದಾಗಿರಬೇಕು ಎನ್ನುವ ಶಂಕೆ ವ್ಯಕ್ತವಾಗಿದೆ.

A person from Maharashtra who was suspiciously carrying Rs 30 lakhs in money was arrested by the excise division sleuths right here on Friday, September 16.Sharad Dabade (22) was reportedly arrested for carrying an enormous amount of money with out essential proof or paperwork of its origin. The seized money is suspected to be hawala cash being transported.