ಸರಪಾಡಿ ಪಂಚಾಯತ್ ಪಿಡಿಓ ಮನೆಗೆ ಕನ್ನ ; ಕಿಟಕಿ ಮುರಿದು ಚಿನ್ನಾಭರಣ ಕಳವು

15-10-22 12:39 pm       Mangalore Correspondent   ಕ್ರೈಂ

ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಕುಕ್ಕಳ ಗ್ರಾಮದ ಒಳಬೈಲು ಎಂಬಲ್ಲಿ ನಡೆದಿದೆ. 

ಬಂಟ್ವಾಳ, ಅ.15: ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಕುಕ್ಕಳ ಗ್ರಾಮದ ಒಳಬೈಲು ಎಂಬಲ್ಲಿ ನಡೆದಿದೆ. 

ಸರಪಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಿಲ್ವಿಯಾ ಫೆರ್ನಾಂಡಿಸ್ ಅವರ ಮನೆಯಲ್ಲಿ ಕಳವು ನಡೆದಿದೆ. 25 ಗ್ರಾಮ್ ಚಿನ್ನದ ಆಭರಣ ಕಳವಾಗಿರುವುದಾಗಿ ಪುಂಜಾಲಕಟ್ಟೆ ಠಾಣೆಯಲ್ಲಿ ಪೊಲೀಸ್ ದೂರು ನೀಡಲಾಗಿದೆ. 

ಸಿಲ್ವಿಯಾ ಅವರು ಪುತ್ರಿಯ ಮನೆಗೆ ತೆರಳಿದ್ದು ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ತಿಳಿದು ಕಳ್ಳರು ನುಗ್ಗಿದ್ದಾರೆ. ಕಿಟಕಿಯ ಸರಳನ್ನು ಕಟ್ಟರ್ ಮೂಲಕ ತುಂಡರಿಸಿ ಕಳ್ಳರು ಒಳನುಗ್ಗಿದ್ದರು. ಮನೆಯಲ್ಲಿ ಕಪಾಟು, ಗೋಡ್ರೆಜ್ ತಡಕಾಡಿ ಕೊನೆಗೆ 1.2 ಲಕ್ಷ ಮೌಲ್ಯದ ಎರಡು ರಿಂಗ್ ಮತ್ತು ಕಿವಿಯೋಲೆಯನ್ನು ಕಳವು ಮಾಡಿದ್ದಾರೆ. ಪುಂಜಾಲಕಟ್ಟೆ ಠಾಣೆ ಎಸ್ಐ ಸುತೇಶ್ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಶ್ವಾನದಳವನ್ನೂ ಸ್ಥಳಕ್ಕೆ ಕರೆಸಿ ತಪಾಸಣೆ ನಡೆಸಿದ್ದಾರೆ.‌ ಫಿಂಗರ್ ಪ್ರಿಂಟ್ ಸಂಗ್ರಹಿಸಿ ಫಾರೆನ್ಸಿಕ್ ವಿಭಾಗಕ್ಕೆ ಕಳಿಸಿ ಕೊಡಲಾಗಿದೆ.

An official's house was burgled and gold ornaments valued at lakhs of rupees were stolen in Olabailu of Kukkala village. A case of theft has been registered in Punjalkatte police station.