ಚರ್ಚ್ ಬಾಗಿಲು ಮುಚ್ಚಲು ಹೋಗಿದ್ದ ಮಹಿಳೆಯ ಅತ್ಯಾಚಾರ ಯತ್ನ ; ತಿಂಗಳ ಬಳಿಕ ಆರೋಪಿ ಬಂಧನ 

19-10-22 05:32 pm       Bangalore Correspondent   ಕ್ರೈಂ

ಚರ್ಚ್ ಬಾಗಿಲು ಮುಚ್ಚಲು ಹೋಗಿದ್ದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು ಘಟನೆ ನಡೆದ ಒಂದು ತಿಂಗಳ ಬಳಿಕ ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, ಅ.19 : ಚರ್ಚ್ ಬಾಗಿಲು ಮುಚ್ಚಲು ಹೋಗಿದ್ದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು ಘಟನೆ ನಡೆದ ಒಂದು ತಿಂಗಳ ಬಳಿಕ ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.

ವಿಲಿಯಂ ಪ್ರಕಾಶ್ ಬಂಧಿತ ಆರೋಪಿ. ಕಳೆದ ಸೆಪ್ಟೆಂಬರ್ 16 ರಂದು ಸೈಂಟ್ ಚಾಪೆಲ್ ಚರ್ಚ್​ನಲ್ಲಿ ಬಾಗಿಲು ಮುಚ್ಚಲು ಹೋಗಿದ್ದ ಗೃಹಿಣಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಘಟನೆ ನಡೆದಿತ್ತು. ಸಂತ್ರಸ್ತ ಮಹಿಳೆಯ ಪತಿ ಚರ್ಚ್​ನಲ್ಲಿ ಕೆಲಸ ಮಾಡ್ತಿದ್ದು, ಪತಿಯ‌ ಸೂಚನೆಯಂತೆ ಮಹಿಳೆ ಚರ್ಚ್ ಬಾಗಿಲು ಮುಚ್ಚಲು ರಾತ್ರಿ ವೇಳೆ ಹೋಗಿದ್ದರು. 

ಇದೇ ವೇಳೆ ಆಕೆಯನ್ನು ಹಿಂಬಾಲಿಸಿದ್ದ ಆರೋಪಿ ವಿಲಿಯಂ ಪ್ರಕಾಶ್, ಮಹಿಳೆಗೆ ಚಾಕುವಿಂದ ಬೆದರಿಸಿ ಅತ್ಯಾಚಾರಕ್ಕೆ ಮುಂದಾಗಿದ್ದ. ಈ ವೇಳೆ ಸಹಾಯಕ್ಕೆ ಕೂಗಾಡಿದ್ದ ಮಹಿಳೆ, ಆರೋಪಿಯನ್ನು ತಳ್ಳಿ ತಪ್ಪಿಸಿಕೊಂಡಿದ್ದರು. ಕಿರುಚಿದ್ದರಿಂದ ಜನ ಬರುತ್ತಾರೆ ಎಂಬ ಭಯದಿಂದ ವಿಲಿಯಂ ಪ್ರಕಾಶ್ ಕೂಡ ಸ್ಥಳದಿಂದ ಕಾಲ್ಕಿತ್ತಿದ್ದ. 

ಬಳಿಕ ಪರಿಸರದಲ್ಲಿ ಗಣೇಶ ಮೆರವಣಿಗೆ ಬರುತ್ತಿದ್ದಾಗ ಮೆರವಣಿಗೆಯಲ್ಲಿ ಸೇರಿಕೊಂಡು ಆರೋಪಿ ತಲೆಮರೆಸಿಕೊಂಡಿದ್ದ. ಘಟನೆ ಸಂಬಂಧ ಪ್ರಕರಣ ದಾಖಲಿಸಿದ್ದ ಅಶೋಕನಗರ ಪೊಲೀಸರು, ತಿಂಗಳ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ.

Bangalore Man rapes woman while closing catholic church door, accused has been arrested after a month. The arrested has been identified as Willam Prakash.