ಇಂಜಿನಿಯರ್ ಹುಡುಗನಿಗಾಗಿ ಬಂದಾಕೆಯ ಮೊಬೈಲ್, ಪರ್ಸ್ ಕಳವು ; ಅಸಹಾಯಕಳಾದ ಹುಡುಗಿಗೆ ಸ್ಥಳೀಯರ ಆಸರೆ 

21-10-22 10:55 pm       Mangalore Correspondent   ಕ್ರೈಂ

ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ ಎಂಜಿನಿಯರ್‌ ವಿದ್ಯಾರ್ಥಿಗಾಗಿ ಚೆನ್ನೈನಲ್ಲಿ ಎಂಬಿಬಿಎಸ್‌ ಓದುತ್ತಿದ್ದ ವಿದ್ಯಾರ್ಥಿನಿಯೋರ್ವಳು ಸುರತ್ಕಲ್ ಗೆ ಬಂದು ಪರ್ಸ್, ಮೊಬೈಲ್ ಕಳವುಗೀಡಾಗಿ ಅಸಹಾಯಕ ಸ್ಥಿತಿಗೆ ತಲುಪಿದ ಪ್ರಸಂಗ ನಡೆದಿದೆ. 

ಮಂಗಳೂರು, ಅ.21 : ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ ಎಂಜಿನಿಯರ್‌ ವಿದ್ಯಾರ್ಥಿಗಾಗಿ ಚೆನ್ನೈನಲ್ಲಿ ಎಂಬಿಬಿಎಸ್‌ ಓದುತ್ತಿದ್ದ ವಿದ್ಯಾರ್ಥಿನಿಯೋರ್ವಳು ಸುರತ್ಕಲ್ ಗೆ ಬಂದು ಪರ್ಸ್, ಮೊಬೈಲ್ ಕಳವುಗೀಡಾಗಿ ಅಸಹಾಯಕ ಸ್ಥಿತಿಗೆ ತಲುಪಿದ ಪ್ರಸಂಗ ನಡೆದಿದೆ. 

ರಾಜಸ್ಥಾನ ಮೂಲದ ರೇಶು ಎಂಬಾಕೆ ಚೆನ್ನೈನಲ್ಲಿ ಎಂಬಿಬಿಎಸ್‌ ಓದುತ್ತಿದ್ದು ಸುರತ್ಕಲ್‌ಗೆ ಬಂದಿದ್ದಳು. ಇಲ್ಲಿನ ಕಾಲೇಜೊಂದರ ಹುಡುಗನಿಗಾಗಿ ಅರಸಿ ಬಂದಿದ್ದಳು ಎನ್ನಲಾಗಿದೆ. ಆದರೆ ಇಲ್ಲಿಗೆ ತಲುಪುವ ಮೊದಲೇ ಬ್ಯಾಗ್‌, ಮೊಬೈಲ್‌ ಒಳಗಾಗಿದ್ದು ಕೊನೆಗೆ ಏನೂ ತೋಚದಾಗಿದ್ದಳು. ಕೊನೆಗೆ ಸುರತ್ಕಲ್‌ನ ಕಾಂತೇರಿ ದೈವಸ್ಥಾನದ ಬಳಿ ಕೈಯ್ಯಲ್ಲಿ ದುಡ್ಡಿಲ್ಲದೆ ತನ್ನಲ್ಲಿದ್ದ ಚಿನ್ನ ಮಾರಲು ಮುಂದಾಗಿದ್ದಳು. 

ಈ ಬಗ್ಗೆ ಸ್ಥಳೀಯರಲ್ಲಿ ಚಿನ್ನದ ಅಂಗಡಿ ಕುರಿತು ಪ್ರಶ್ನೆ ಮಾಡಿದ್ದಳು. ಯುವತಿಯ ಬಗ್ಗೆ ಸಂಶಯ ಮೂಡಿದಾಗ ಸ್ಥಳೀಯ ಸಮಾಜ ಸೇವಾ ಸಂಸ್ಥೆಯ ಉಮೇಶ್‌ ದೇವಾಡಿಗ ಇಡ್ಯಾ ಹಾಗೂ ಸ್ಥಳೀಯರಾದ ಕೃಷ್ಣಪ್ಪ, ಕೇಶವ, ನಾಗೇಶ್‌ ಕಾನಾ ಅವರು ವಿಚಾರಿಸಿದ್ದಾರೆ. ಆಗಿರುವ ಸಂಗತಿ ಬಗ್ಗೆ ವಿದ್ಯಾರ್ಥಿನಿ ವಿವರಿಸಿದ್ದಾಳೆ. ಬಳಿಕ ಸ್ಥಳೀಯರು ಆಕೆಯನ್ನು ಸುರತ್ಕಲ್‌ ಪೊಲೀಸ್‌ ಠಾಣೆಗೆ ಕರೆತಂದಿದ್ದು ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಲು ನೆರವಾಗಿದ್ದಾರೆ.

Boy cheats girl on social media girl comes to mangalore loses Money.