ಬ್ರೇಕಿಂಗ್ ನ್ಯೂಸ್
22-10-22 11:28 am Mangalore Correspondent ಕ್ರೈಂ
ಪುತ್ತೂರು, ಅ.21: ಬೆಡ್ ಶೀಟ್ ಮಾರಾಟದ ನೆಪದಲ್ಲಿ ಮನೆಗೆ ಬಂದಿದ್ದ ಇಬ್ಬರು ಯುವಕರು ಮಹಿಳೆಯ ಜೊತೆ ಸಲುಗೆ ಮಾತನಾಡಿದ್ದಲ್ಲದೆ, ಜೊತೆಗೆ ಮಲಗಲು ಅವಕಾಶ ನೀಡಿದರೆ ಪುಕ್ಕಟೆಯಾಗಿ ಬೆಡ್ ಶೀಟ್ ಕೊಡುತ್ತೇವೆಂದು ಹೇಳಿ, ಮಾನಭಂಗಕ್ಕೆ ಯತ್ನಿಸಿದ ಘಟನೆ ಕಡಬ ತಾಲೂಕಿನ ದೋಲ್ಪಾಡಿ ಗ್ರಾಮದ ಕಾಯರ್ ಮನೆ ಎಂಬಲ್ಲಿ ನಡೆದಿದೆ.
ನೀಲಿ ಬಣ್ಣದ ಕಾರಿನಲ್ಲಿ ಬಂದಿದ್ದ ರಫೀಕ್ ಮತ್ತು ರಮಿಯುದ್ದೀನ್ ಎಂಬ ಯುವಕರು ಈ ಕೃತ್ಯ ಎಸಗಿದ್ದಾರೆ ಎಂದು ಮಹಿಳೆ ಕಡಬ ಠಾಣೆಯಲ್ಲಿ ದೂರು ನೀಡಿದ್ದಾರೆ. ಬೆಡ್ ಶೀಟ್ ರೇಟ್ ಹೇಳುವಂತೆ ಹೇಳಿದ ಮಹಿಳೆಯರಿಗೆ, ಬೆಡ್ ಶೀಟ್ ನಿಮಗೆ ಕಡಿಮೆ ದರಕ್ಕೆ ಕೊಡುತ್ತೇವೆ ಎನ್ನುತ್ತಾ ಮನೆಯೊಳಗೆ ಬಂದಿದ್ದಾರೆ. ಬೆಡ್ ಶೀಟ್ ರೇಟ್ ಹೇಳದೆ, ನಿಮ್ಮಲ್ಲಿ ಹಣ ಇಲ್ಲದಿದ್ದರೆ ಪರ್ವಾಗಿಲ್ಲ. ನಮ್ಮ ಜೊತೆ ಮಲಗಲು ಅವಕಾಶ ನೀಡಿದರೆ ಬೆಟ್ ಶೀಟ್ ಫ್ರೀ ಕೊಡುತ್ತೇವೆ. ಜೊತೆಗೆ ಒಂದಷ್ಟು ಹಣವನ್ನೂ ಕೊಡುತ್ತೇವೆ ಎಂದು ಪುಸಲಾಯಿಸಿದ್ದಾರೆ. ನೀವು ಮನೆಯಿಂದ ಹೋಗಿ ಎಂದು ಮಹಿಳೆಯರು ಬೈದಾಗ, ಕೈಯನ್ನು ಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ್ದಾರೆಂದು ದೂರಲಾಗಿದೆ. ಬಳಿಕ ಮಹಿಳೆ ಜೋರು ಬೊಬ್ಬೆ ಹೊಡೆದಾಗ ಅವರು ಓಡಿ ಹೋಗಿದ್ದಾರೆ. ಘಟನೆ ಸಂಬಂಧಿಸಿ ಎಸ್ಸಿ-ಎಸ್ಟಿ ಏಕ್ಟ್ ಅಡಿ ಪ್ರಕರಣ ದಾಖಲಾಗಿದೆ.
ಇದೇ ವಿಚಾರದಲ್ಲಿ ಬೆಳ್ಳಾರೆ ಠಾಣೆಯಲ್ಲಿ ಪ್ರತಿ ದೂರು ದಾಖಲಾಗಿದೆ. ರಫೀಕ್ ಮತ್ತು ರಮಿಯುದ್ದೀನ್ ದೋಲ್ಪಾಡಿಯ ಘಟನೆಯ ಬಳಿಕ ಕಾಣಿಯೂರು ಗ್ರಾಮಕ್ಕೆ ತಲುಪಿದಾಗ ಕೆಲವು ಯುವಕರು ಸೇರಿ ಹಲ್ಲೆ ನಡೆಸಿದ್ದಾರೆ. ರಸ್ತೆಗೆ ಪಿಕಪ್ ಅಡ್ಡ ಇಟ್ಟು ಯುವಕರಿದ್ದ ಕಾರನ್ನು ನಿಲ್ಲಿಸಿ, ಅವರಿಗೆ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು. ಕಾರು ಜಖಂಗೊಳಿಸಿ, ಬೆಡ್ ಶೀಟ್ ಗಳನ್ನು ಹಾಳುಗೆಡವಿದ್ದಾರೆಂದು ರಫೀಕ್ ಮತ್ತು ರಮಿಯುದ್ದೀನ್ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ.
Mangalore Sexual assault in the name of selling blankets, two held at Kadaba.
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm