ಬ್ರೇಕಿಂಗ್ ನ್ಯೂಸ್
22-10-22 07:29 pm Mangalore Correspondent ಕ್ರೈಂ
ಮಂಗಳೂರು, ಅ.22: ದುಬೈನಲ್ಲಿದ್ದ ವ್ಯಕ್ತಿಯಿಂದ 2.40 ಕೋಟಿ ರೂಪಾಯಿ ಮೌಲ್ಯದ ಜಾಗ ತೋರಿಸಿ, ಅದನ್ನು ಖರೀದಿಸುವ ನೆಪದಲ್ಲಿ ಹಣ ಪಡೆದು ವಂಚಿಸಿದ ಘಟನೆ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬ್ದುಲ್ಲಾ ಉದ್ಯಾವರ ಬೆಲ್ಲಿಕುಂಞ ಎಂಬವರು ದುಬೈನಲ್ಲಿ ಉದ್ಯೋಗದಲ್ಲಿದ್ದು, ಮಂಗಳೂರಿನ ಫಳ್ನೀರ್ ನಲ್ಲಿ ಅಪಾರ್ಟ್ಮೆಂಟಿನಲ್ಲಿ ಫ್ಲಾಟ್ ಹೊಂದಿದ್ದಾರೆ. ಫ್ಲ್ಯಾಟ್ ಖಾಲಿ ಇಡುವುದು ಬೇಡ ಎಂದು ಸಂಬಂಧಿಕ ಮಹಮ್ಮದ್ ಅಬ್ದುಲ್ ಮಜೀದ್ ಎಂಬವರನ್ನು ಉಳಿಯಲು ಕೊಟ್ಟಿದ್ದರು. ಇದೇ ವೇಳೆ, ಅಬ್ದುಲ್ಲಾ ಅವರು ಜಾಗ ಖರೀದಿಸಲು ನೋಡುತ್ತಿದ್ದಾರೆಂದು ತಿಳಿದು ತಾನೇ ಡೀಲ್ ಮಾಡಲು ಮುಂದಾಗಿದ್ದರು.
ಆನಂತರ, ಅಬ್ದುಲ್ಲಾ ಅವರಿಗೆ ಫೋನ್ ಕರೆ ಮಾಡಿದ್ದ ಮಹಮ್ಮದ್ ಅಬ್ದುಲ್ ಮಜೀದ್ ಕೇರಳದಲ್ಲಿ 1.01 ಎಕ್ರೆ ಜಾಗ ಇದೆ. ಅದರ ಮಾಲಕರೂ ದುಬೈನಲ್ಲಿದ್ದಾರೆ. ಒಳ್ಳೆ ಜಾಗವೆಂದು ಹೇಳಿ ಅದರ ಫೋಟೋ ಕಳುಹಿಸಿದ್ದರು. ಆನಂತರ, ಜಾಗ ನೋಡಿ ಓಕೆ ಆಗಿದ್ದರಿಂದ ಮಂಗಳೂರಿಗೆ ಬಂದಿದ್ದ ಅಬ್ದುಲ್ಲಾ ಅವರು ಡೀಲ್ ಮುಗಿಸುವಂತೆ ಹೇಳಿ 2,16,96,470 ರೂ.ಗಳನ್ನು ಮಹಮ್ಮದ್ ಅಬ್ದುಲ್ ಮಜೀದ್ ಅವರಿಗೆ ನೀಡಿದ್ದರು.
ಆದರೆ ಹಣ ಪಡೆದಿದ್ದ ಮಹಮ್ಮದ್ ಜಾಗವನ್ನು ಅಬ್ದುಲ್ಲಾ ಅವರ ಹೆಸರಿಗೆ ರಿಜಿಸ್ಟರ್ ಮಾಡಿಕೊಟ್ಟಿರಲಿಲ್ಲ. ಆನಂತರ, ಈ ಬಗ್ಗೆ ಪ್ರಶ್ನೆ ಮಾಡಿದಾಗ ಬೆದರಿಕೆ ಹಾಕಿದ್ದರು. 2.40 ಕೋಟಿ ಹಣದಲ್ಲಿ ಖರೀದಿಸಿದ್ದ ಜಾಗವನ್ನು ಆಬಳಿಕ ಬೇರೆಯವರಿಗೆ ಮಾರಾಟ ಮಾಡಿ ಮೋಸ ಮಾಡಿದ್ದರು. ಈ ಬಗ್ಗೆ ಸೈಬರ್ ಠಾಣೆಯಲ್ಲಿ ಅಬ್ದುಲ್ಲಾ ಅವರು ದೂರು ನೀಡಿದ್ದಾರೆ.
A case is filed in city CEN police station accusing cheating Rs 2.40 crore on the pretext of providing one acre of land in Kerala.Abdulla Udyavara Bellikunhi is the victim of fraud. He was working and living in Dubai and has an apartment at Falnir. He had given the flat to his relative Mohammed Abdul Majid P for residing. Mohammed Abdul came to know through others that Abdulla is looking out for land. He spoke to Abdulla over a phone call and said that there is 1.01 acre plot for sale in Kerala and its owner is in Dubai.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm