ಬ್ರೇಕಿಂಗ್ ನ್ಯೂಸ್
24-11-22 09:17 pm HK News Desk ಕ್ರೈಂ
ದಾವಣಗೆರೆ, ನ.24: ಆರು ತಿಂಗಳ ಗರ್ಭಿಣಿಯಾಗಿದ್ದ ತನ್ನ ಪತ್ನಿಯನ್ನು ಕೊಂದು ಕಾಡಿನಲ್ಲಿ ಹೂತು ಹಾಕಿ, ಏನೂ ಆಗದಂತೆ ನಾಟಕವಾಡಿದ ಕಿರಾತಕ ಪತಿಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ಚನ್ನಗಿರಿಯ ಗಂಗೊಂಡನಹಳ್ಳಿ ನಿವಾಸಿ ಮೋಹನ್ ಕುಮಾರ್ (25) ಆರೋಪಿಯಾಗಿದ್ದು ಆತನ ಹೆತ್ತವರು ನಾಪತ್ತೆಯಾಗಿದ್ದಾರೆ. ಆತನ ಪತ್ನಿ ಚಂದ್ರಕಲಾ(21) ಮೃತ ಯುವತಿ. ಒಂದು ವರ್ಷದ ಹಿಂದೆ ಚಂದ್ರಕಲಾ ಮತ್ತು ಮೋಹನ್ ಮದುವೆಯಾಗಿದ್ದು, ಆರಂಭದಲ್ಲಿಯೇ ಪತ್ನಿಯ ಬಗ್ಗೆ ಕಿರುಕುಳ ನೀಡುತ್ತಿದ್ದ. ಆಕೆಯ ನಡತೆ ಬಗ್ಗೆ ಸಂಶಯಪಟ್ಟು ಯಾರೊಂದಿಗೂ ಮಾತನಾಡಲು ಬಿಡುತ್ತಿರಲಿಲ್ಲ. ಜೊತೆಗೆ, ವರದಕ್ಷಿಣೆ ತರುವಂತೆ ಪೀಡನೆಯನ್ನೂ ನೀಡುತ್ತಿದ್ದ.
ಯಾರ ಜೊತೆ ಮಾತನಾಡಿದರೂ, ಅವರಿಗೆ ಕಟ್ಟಿಕೊಡುವ ಕೆಲಸ ಮಾಡುತ್ತಿದ್ದ. ಇದೇ ರೀತಿ ವಾಗ್ವಾದ, ಸಂಶಯ ಪಡುವುದು ನಡೆದಿದ್ದರಿಂದ ತನ್ನ ಮನೆಯವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಳು. ಅಲ್ಲದೆ, ಗಂಡನ ಮನೆ ಬಿಟ್ಟು ಒಮ್ಮೆ ತವರು ಮನೆಗೆ ಹೋಗಿ ಕುಳಿತಿದ್ದಳು. ಆನಂತರ, ಮಾತುಕತೆ ಮಾಡಿ ಮನೆಯವರು ಒಂದೂವರೆ ತಿಂಗಳ ಹಿಂದೆ ಚಂದ್ರಕಲಾಳನ್ನು ಗಂಡನ ಮನೆಗೆ ಕಳಿಸಿಕೊಟ್ಟಿದ್ದರು. ಮತ್ತೆ ಪತ್ನಿಯೊಂದಿಗೆ ಜಗಳವಾಡಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಅಲ್ಲದೆ, ಆಕೆಯ ಶವವನ್ನು ಚಿಕ್ಕಮಗಳೂರಿನ ಅಜ್ಜಂಪುರ ಬಳಿಯ ಹುನಘಟ್ಟ ಎಂಬಲ್ಲಿನ ಕಾಡಿಗೆ ಕೊಂಡೊಯ್ದು ಗುಂಡಿ ತೋಡಿ ಹೂತು ಹಾಕಿದ್ದ.
ಆನಂತರ, ಅಕ್ಟೋಬರ್ 10ರಂದು ಆರೋಪಿ ಮೋಹನ್ ಕುಮಾರ್ ಪೊಲೀಸ್ ದೂರು ಕೊಟ್ಟು ತನ್ನ ಪತ್ನಿ ನಾಪತ್ತೆಯಾಗಿದ್ದು, ಯಾರ ಜೊತೆಗೋ ಓಡಿ ಹೋಗಿದ್ದಾಳೆಂದು ತಿಳಿಸಿದ್ದ. ಆದರೆ ಚಂದ್ರಕಲಾ ಮನೆಯವರು ಮೋಹನ್ ಕುಮಾರ್ ಬಗ್ಗೆಯೇ ಸಂಶಯ ಪಟ್ಟಿದ್ದು, ಪೊಲೀಸ್ ದೂರು ನೀಡಿದ್ದರು. ಪೊಲೀಸರು ಆತನ ಚಲನವಲನದ ಬಗ್ಗೆ ಗಮನಿಸಿದಾಗ, ಪತ್ನಿ ನಾಪತ್ತೆಯಾಗಿದ್ದಾಳೆಂದು ಹೇಳಿದ ದಿವಸ ತಡರಾತ್ರಿ 2 ಗಂಟೆ ವೇಳೆಗೆ ತನ್ನ ಕಾರಿನಲ್ಲಿ ಹೊರಗೆ ಹೋಗಿರುವುದು ದಾಖಲಾಗಿತ್ತು. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಡ್ರಿಲ್ ಮಾಡಿದಾಗ ನಿಜ ವಿಚಾರ ಬಾಯಿಬಿಟ್ಟಿದ್ದಾನೆ. ಅಲ್ಲದೆ, ಆತನನ್ನೇ ಚಿಕ್ಕಮಗಳೂರಿನ ಕಾಡಿಗೆ ಕರೆದೊಯ್ದು ಶವವನ್ನು ಮತ್ತೆ ಅಗೆದು ತೆಗೆಸಿದ್ದಾರೆ. ಇದೀಗ ಶವದ ಪೋಸ್ಟ್ ಮಾರ್ಟಂ ನಡೆಸಲು ಕಳಿಸಲಾಗಿದೆ.
ತನಿಖೆಯಲ್ಲಿ ಪತ್ನಿಯನ್ನು ಅದಕ್ಕೂ ಮೊದಲೇ ಕೊಲೆ ಮಾಡಲು ಪ್ಲಾನ್ ಹಾಕಿದ್ದ ಅನ್ನುವುದೂ ತಿಳಿದುಬಂದಿದೆ. ಅಲ್ಲದೆ, ಕೊಂದು ಸಾಕ್ಷ್ಯ ಸಿಗದಂತೆ ಮಾಡುವುದು, ಕಾಡಿನಲ್ಲಿ ಮೊದಲೇ ಹೂತು ಹಾಕಲು ಗುಂಡಿ ತೋಡಿದ್ದ ವಿಚಾರವನ್ನೂ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.
A man in Karnataka's Davanagere district was arrested on Thursday for allegedly killing his 6-month pregnant wife and burying her body in the jungle - in a pit he had prepared much earlier, police said. The accused is identified as Mohan Kumar, 25, a resident of Gangondanahalli near Channagiri town near Davanagere. Police have launched a hunt for parents of Mohan, who are on the run.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
17-05-25 01:01 pm
Mangalore Correspondent
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
16-05-25 11:06 pm
Mangalore Correspondent
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm