ಬ್ರೇಕಿಂಗ್ ನ್ಯೂಸ್
            
                        02-12-22 10:38 pm HK News Desk ಕ್ರೈಂ
            ಮುಂಬೈ, ಡಿ.2: ದೆಹಲಿಯ ಶ್ರದ್ಧಾ ವಾಲ್ಕರನ್ನು 35 ಪೀಸ್ ಮಾಡಿದ್ದರೆ, ನಿನ್ನನ್ನು 70 ಪೀಸ್ ಮಾಡಿ ಕೊಂದು ಹಾಕುತ್ತೇನೆ ಎಂದು ತನ್ನೊಂದಿಗೆ ಬಲವಂತದಿಂದ ಲೀವಿಂಗ್ ಟುಗೆದರ್ ಸಂಬಂಧ ಇಟ್ಟುಕೊಂಡಿರುವ ಮುಸ್ಲಿಂ ವ್ಯಕ್ತಿ ಬೆದರಿಕೆ ಹಾಕಿದ್ದಾಗಿ ಮಹಿಳೆಯೊಬ್ಬರು ಪೊಲೀಸ್ ದೂರು ನೀಡಿದ್ದಾರೆ.
ಮಹಾರಾಷ್ಟ್ರದ ಧುಲೇ ಜಿಲ್ಲೆಯಲ್ಲಿ ಮಹಿಳೆ ನ.29ರಂದು ದೂರು ದಾಖಲಿಸಿದ್ದು, ಆರೋಪಿ ಅರ್ಶದ್ ಅಮಲ್ ಮಲಿಕ್ ವಿರುದ್ಧ ಆರೋಪ ಮಾಡಿದ್ದಾಳೆ. ಮಹಿಳೆಗೆ ಈ ಹಿಂದೆ ಮದುವೆಯಾಗಿದ್ದು, 2017ರಲ್ಲಿ ಗಂಡ ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದ. ದಂಪತಿಗೆ ಒಂದು ಮಗವೂ ಇತ್ತು. ಆನಂತರ, 2019ರಲ್ಲಿ ಹರ್ಷಲ್ ಮಲಿ ಎನ್ನುವ ಹೆಸರಲ್ಲಿ ವ್ಯಕ್ತಿಯೊಬ್ಬ ಪರಿಚಯವಾಗಿದ್ದ. ಆತ ಧುಲೇಯ ಲಾಲಿಂಗ್ ಗ್ರಾಮದ ಕಾಡಿಗೆ ಕರೆದೊಯ್ದು ತನ್ನ ಮೇಲೆ ಅತ್ಯಾಚಾರ ಎಸಗಿದ್ದ. ಆನಂತರ ಕೃತ್ಯದ ವಿಡಿಯೋ ರೆಕಾರ್ಡ್ ಮಾಡಿ, ಬ್ಲಾಕ್ಮೇಲ್ ಮಾಡುತ್ತಿದ್ದ. 2021ರ ಜುಲೈನಿಂದ ಲಿವಿಂಗ್ ಟುಗೆದರ್ ರಿಲೇಶನ್ ಇಟ್ಕೊಂಡು ಒಟ್ಟಿಗೆ ಇದ್ದೆವು. ಅಮಾಲ್ನೇರ್ ನಲ್ಲಿ ಜೊತೆಗೆ ವಾಸ ಇದ್ದಾಗಲೇ ಆತನ ನೈಜ ಹೆಸರು ಹರ್ಶಲ್ ಮಲಿ ಅಲ್ಲ, ಅರ್ಶದ್ ಸಲೀಮ್ ಮಲೀಕ್ ಅನ್ನುವುದು ತಿಳಿದುಬಂದಿತ್ತು.
ಆನಂತರ, ಅರ್ಶದ್ ಮಲೀಕ್ ಬಲವಂತದಿಂದ ತನ್ನನ್ನು ಒಸ್ಮಾನಾಬಾದ್ ನಲ್ಲಿರುವ ಫ್ಲಾಟಿಗೆ ಕರೆದೊಯ್ದು ಅಲ್ಲಿ ಇರಿಸಿದ್ದ. ಅಲ್ಲದೆ, ಬಲವಂತದಿಂದ ಮತಾಂತರವನ್ನೂ ಮಾಡಿದ್ದ. ತನ್ನ ಮಗುವನ್ನೂ ಮುಸ್ಲಿಂ ಆಗಿ ಮತಾಂತರಿಸಿದ್ದ. ಈ ವೇಳೆ, ಮಲಿಕ್ ತಂದೆಯೂ ಬಂದು ತನ್ನ ಮೇಲೆ ಕಿರುಕುಳ ನೀಡಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಅಲ್ಲದೆ, ಆತ ಹೇಳಿದಂತೆ ಕೇಳದೇ ಇದ್ದರೆ ಸುಟ್ಟ ಗಾಯಗಳನ್ನು ಮಾಡುತ್ತಿದ್ದ ಎಂದು ಪೊಲೀಸರಿಗೆ ತನಗಾದ ಗಾಯವನ್ನು ತೋರಿಸಿದ್ದಾಳೆ.
ಈಗ ಶ್ರದ್ಧಾ ವಾಲ್ಕರ್ ಹತ್ಯೆಯನ್ನು ಉಲ್ಲೇಖಿಸಿ, ಆಕೆಯನ್ನು 35 ಪೀಸ್ ಮಾಡಿ ಕೊಂದಿದ್ದರು. ನಾನು ನಿನ್ನನ್ನು 70 ಪೀಸ್ ಮಾಡುತ್ತೇನೆ ಎಂದು ಬೆದರಿಸುತ್ತಿದ್ದಾನೆಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.
            
            
            Days after the gruesome murder of Shradhha Walkar by her live-in partner Aaftab Amin Poonawala, a man in Maharahstra has used the incident to threaten his live-in partner. A woman from Maharashtra’s Dhule filed a police complaint that she was harassed by her live-in partner Arshad Salim Malik, who threatened her that she would be cut into 70 pieces if she went against his wishes.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm