ಬ್ರೇಕಿಂಗ್ ನ್ಯೂಸ್
12-12-22 10:22 pm HK News Desk ಕ್ರೈಂ
ಹೈದ್ರಾಬಾದ್, ಡಿ.12 : ಜಾರ್ಖಂಡ್ ರಾಜ್ಯದ ಬುಡಕಟ್ಟು ಜಿಲ್ಲೆ ಜಯ್ತಾರಾ ಈಗ ಸೈಬರ್ ಅಪರಾಧಿಗಳ ಕೇಂದ್ರವಾಗಿ ಪರಿವರ್ತನೆ ಆಗುತ್ತಿದ್ದು ಕುಖ್ಯಾತಿ ಗಳಿಸುತ್ತಿದೆ. ಇಲ್ಲಿನ ಹ್ಯಾಕರ್ಸ್ ಗ್ರಾಹಕರ ಮೊಬೈಲ್ ಸಿಮ್ ಗಳನ್ನೇ ಹ್ಯಾಕ್ ಮಾಡಿ ಓಟಿಪಿ ಇಲ್ಲದೆ ಹಣ ಕದಿಯುವ ಜಾಲ ಹೆಣೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಇತ್ತೀಚೆಗೆ ಭದ್ರತಾ ಸೇವಾ ಸಂಸ್ಥೆಯೊಂದರ ನಿರ್ದೇಶಕರ ಮೊಬೈಲ್ ಸಿಮ್ ನಕಲು ಮಾಡಿ, ಅವರ ಬ್ಯಾಂಕ್ ಖಾತೆಯಿಂದ 50 ಲಕ್ಷ ರೂ. ಎಗರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸೈಬರ್ ಕಳ್ಳರು ಗ್ರಾಹಕರಿಂದ ಒನ್-ಟೈಮ್ ಪಾಸ್ವರ್ಡ್ (OTP) ಕೇಳದೆ ವಹಿವಾಟು ನಡೆಸಿದ್ದು, ಹಣ ಎಗರಿಸಿರುವುದು ಅಚ್ಚರಿ ಮೂಡಿಸಿದೆ. ಈ ಸೈಬರ್ ವಂಚನೆಯ ಮಾಸ್ಟರ್ ಮೈಂಡ್ ಗಳು ಜಾರ್ಖಂಡ್ ರಾಜ್ಯದ ಜಯ್ತಾರಾ ಪ್ರದೇಶದಲ್ಲಿ ನೆಲೆಸಿರಬಹುದು ಎಂದು ಅನುಮಾನ ಪಡಲಾಗಿದೆ.
ಸೈಬರ್ ಕಳ್ಳರು ಮೊಬೈಲ್ ಫೋನ್ ನಲ್ಲಿ ಪದೇ ಪದೇ ಮಿಸ್ ಕಾಲ್ ಗಳನ್ನು ನೀಡುತ್ತಿದ್ದರು. ಆನಂತರ, ಮೊಬೈಲ್ ಸಿಮ್ ಚೆಕ್ ಮಾಡಿ ಹಣ ಇರುವುದನ್ನು ಪತ್ತೆ ಮಾಡಿ, ಸಿಮ್ ಕಾರ್ಡನ್ನು ಹ್ಯಾಕ್ ಮಾಡುತ್ತಾರೆ. ಬಳಿಕ ಬ್ಯಾಂಕ್ ಖಾತೆಗೆ ನೋಂದಣಿ ಮಾಡಿರುವ ಮೊಬೈಲ್ ಸಂಖ್ಯೆಯ ನಕಲಿ ಸಿಮ್ ಕಾರ್ಡ್ ಪಡೆಯುತ್ತಾರೆ. ನಕಲಿ ಸಿಮ್ನಲ್ಲಿ ಒಟಿಪಿಯನ್ನು ಸ್ವೀಕರಿಸಿ, ಅಸಲಿ ಗ್ರಾಹಕನಿಗೆ ತಿಳಿಯದಂತೆ ಹಣ ಕದಿಯುತ್ತಾರೆ.
ಸಾಮಾನ್ಯವಾಗಿ ಮೊಬೈಲ್ ನೆಟ್ವರ್ಕ್ ಸಿಬ್ಬಂದಿ ಎಂದು ಹೇಳಿಕೊಂಡು ಜನರಿಂದ ವೈಯಕ್ತಿಕ ವಿವರಗಳನ್ನು ಸಂಗ್ರಹಿಸುತ್ತಾರೆ. ಅಥವಾ 'ನಿಮ್ಮ ಸಿಮ್ ಕಾರ್ಡ್ ಅನ್ನು 3ಜಿ ಇಂದ 4ಜಿ ಗೆ ಉಚಿತ ಮಾಡುತ್ತೇವೆ' ಎಂದು ಹೇಳಿ ತಮಗೆ ಬೇಕಾದ ಮಾಹಿತಿ ಸಂಗ್ರಹಿಸಿ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಾರೆ.
Jamtara, some 225 km of the state capital of Ranchi, these impostors have been found using a variety of traps to access usernames, passwords and OTPs from their targets. And once their victims share their secret codes with these complete strangers, poof - it's gone. Their bank accounts empty out in the blink of an eye.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm