ಬ್ರೇಕಿಂಗ್ ನ್ಯೂಸ್
12-12-22 10:22 pm HK News Desk ಕ್ರೈಂ
ಹೈದ್ರಾಬಾದ್, ಡಿ.12 : ಜಾರ್ಖಂಡ್ ರಾಜ್ಯದ ಬುಡಕಟ್ಟು ಜಿಲ್ಲೆ ಜಯ್ತಾರಾ ಈಗ ಸೈಬರ್ ಅಪರಾಧಿಗಳ ಕೇಂದ್ರವಾಗಿ ಪರಿವರ್ತನೆ ಆಗುತ್ತಿದ್ದು ಕುಖ್ಯಾತಿ ಗಳಿಸುತ್ತಿದೆ. ಇಲ್ಲಿನ ಹ್ಯಾಕರ್ಸ್ ಗ್ರಾಹಕರ ಮೊಬೈಲ್ ಸಿಮ್ ಗಳನ್ನೇ ಹ್ಯಾಕ್ ಮಾಡಿ ಓಟಿಪಿ ಇಲ್ಲದೆ ಹಣ ಕದಿಯುವ ಜಾಲ ಹೆಣೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಇತ್ತೀಚೆಗೆ ಭದ್ರತಾ ಸೇವಾ ಸಂಸ್ಥೆಯೊಂದರ ನಿರ್ದೇಶಕರ ಮೊಬೈಲ್ ಸಿಮ್ ನಕಲು ಮಾಡಿ, ಅವರ ಬ್ಯಾಂಕ್ ಖಾತೆಯಿಂದ 50 ಲಕ್ಷ ರೂ. ಎಗರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸೈಬರ್ ಕಳ್ಳರು ಗ್ರಾಹಕರಿಂದ ಒನ್-ಟೈಮ್ ಪಾಸ್ವರ್ಡ್ (OTP) ಕೇಳದೆ ವಹಿವಾಟು ನಡೆಸಿದ್ದು, ಹಣ ಎಗರಿಸಿರುವುದು ಅಚ್ಚರಿ ಮೂಡಿಸಿದೆ. ಈ ಸೈಬರ್ ವಂಚನೆಯ ಮಾಸ್ಟರ್ ಮೈಂಡ್ ಗಳು ಜಾರ್ಖಂಡ್ ರಾಜ್ಯದ ಜಯ್ತಾರಾ ಪ್ರದೇಶದಲ್ಲಿ ನೆಲೆಸಿರಬಹುದು ಎಂದು ಅನುಮಾನ ಪಡಲಾಗಿದೆ.

ಸೈಬರ್ ಕಳ್ಳರು ಮೊಬೈಲ್ ಫೋನ್ ನಲ್ಲಿ ಪದೇ ಪದೇ ಮಿಸ್ ಕಾಲ್ ಗಳನ್ನು ನೀಡುತ್ತಿದ್ದರು. ಆನಂತರ, ಮೊಬೈಲ್ ಸಿಮ್ ಚೆಕ್ ಮಾಡಿ ಹಣ ಇರುವುದನ್ನು ಪತ್ತೆ ಮಾಡಿ, ಸಿಮ್ ಕಾರ್ಡನ್ನು ಹ್ಯಾಕ್ ಮಾಡುತ್ತಾರೆ. ಬಳಿಕ ಬ್ಯಾಂಕ್ ಖಾತೆಗೆ ನೋಂದಣಿ ಮಾಡಿರುವ ಮೊಬೈಲ್ ಸಂಖ್ಯೆಯ ನಕಲಿ ಸಿಮ್ ಕಾರ್ಡ್ ಪಡೆಯುತ್ತಾರೆ. ನಕಲಿ ಸಿಮ್ನಲ್ಲಿ ಒಟಿಪಿಯನ್ನು ಸ್ವೀಕರಿಸಿ, ಅಸಲಿ ಗ್ರಾಹಕನಿಗೆ ತಿಳಿಯದಂತೆ ಹಣ ಕದಿಯುತ್ತಾರೆ.
ಸಾಮಾನ್ಯವಾಗಿ ಮೊಬೈಲ್ ನೆಟ್ವರ್ಕ್ ಸಿಬ್ಬಂದಿ ಎಂದು ಹೇಳಿಕೊಂಡು ಜನರಿಂದ ವೈಯಕ್ತಿಕ ವಿವರಗಳನ್ನು ಸಂಗ್ರಹಿಸುತ್ತಾರೆ. ಅಥವಾ 'ನಿಮ್ಮ ಸಿಮ್ ಕಾರ್ಡ್ ಅನ್ನು 3ಜಿ ಇಂದ 4ಜಿ ಗೆ ಉಚಿತ ಮಾಡುತ್ತೇವೆ' ಎಂದು ಹೇಳಿ ತಮಗೆ ಬೇಕಾದ ಮಾಹಿತಿ ಸಂಗ್ರಹಿಸಿ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಾರೆ.
Jamtara, some 225 km of the state capital of Ranchi, these impostors have been found using a variety of traps to access usernames, passwords and OTPs from their targets. And once their victims share their secret codes with these complete strangers, poof - it's gone. Their bank accounts empty out in the blink of an eye.
19-12-25 01:41 pm
Bangalore Correspondent
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm