ಎಣ್ಣೆ ಮತ್ತಿನಲ್ಲಿ ಹಾಸ್ಟೆಲ್ ಒಳನುಗ್ಗಿ ಕಿರುಕುಳ ಯತ್ನ ; ಮುಖ್ಯ ಶಿಕ್ಷಕನಿಗೆ ದೊಣ್ಣೆ ಹಿಡಿದು ಥಳಿಸಿದ ವಿದ್ಯಾರ್ಥಿನಿಯರು ! 

15-12-22 01:04 pm       HK News Desk   ಕ್ರೈಂ

ಎಣ್ಣೆ ಮತ್ತಿನಲ್ಲಿ ಹುಡುಗಿಯರ ಹಾಸ್ಟೆಲ್ ಒಳನುಗ್ಗಿ ಅಸಭ್ಯವಾಗಿ ವರ್ತಿಸಿದ ಶಿಕ್ಷಕನಿಗೆ ವಿದ್ಯಾರ್ಥಿನಿಯರೇ ಸೇರಿ ದೊಣ್ಣೆಯಲ್ಲಿ ಬಡಿದು ಹಣ್ಣುಗಾಯಿ ಮಾಡಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. 

ಮಂಡ್ಯ, ಡಿ.15: ಎಣ್ಣೆ ಮತ್ತಿನಲ್ಲಿ ಹುಡುಗಿಯರ ಹಾಸ್ಟೆಲ್ ಒಳನುಗ್ಗಿ ಅಸಭ್ಯವಾಗಿ ವರ್ತಿಸಿದ ಶಿಕ್ಷಕನಿಗೆ ವಿದ್ಯಾರ್ಥಿನಿಯರೇ ಸೇರಿ ದೊಣ್ಣೆಯಲ್ಲಿ ಬಡಿದು ಹಣ್ಣುಗಾಯಿ ಮಾಡಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. 

ಕೈಯಲ್ಲಿ ಕೋಲು, ದೊಣ್ಣೆ ಹಿಡಿದು ಉಗ್ರಾವತಾರ ತಾಳಿದ ವಿದ್ಯಾರ್ಥಿನಿಯರು ಕಾಮುಕ ಶಿಕ್ಷಕನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದಲ್ಲಿ ಘಟನೆ ನಡೆದಿದ್ದು ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ವೈರಲ್ ಆಗಿದೆ. 

ಎಣ್ಣೆ ಏಟಲ್ಲಿ ರಾತ್ರಿ ವಿದ್ಯಾರ್ಥಿನಿಯರ ಹಾಸ್ಟೆಲ್ ಒಳಬಂದಿದ್ದ ಶಿಕ್ಷಕ ಆನಂದ ಚಿನ್ಮಯ ಮೂರ್ತಿ ಎಂಬಾತ ಅಸಭ್ಯ ವರ್ತನೆ ತೋರಿದ್ದಾನೆ. ತಕ್ಷಣವೇ ಎಚ್ಚೆತ್ತ ವಿದ್ಯಾರ್ಥಿನಿಯರೆಲ್ಲ ಸೇರಿ ಶಿಕ್ಷಕನಿಗೆ ಥಳಿಸಿದ್ದಾರೆ. 

ಪದೇ ಪದೇ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಾಕ್ಷಿಯಾದ ಮಂಡ್ಯದಲ್ಲಿ ಈಗ ವಿದ್ಯಾರ್ಥಿನಿಯರೇ ಕೈಗೆ ದೊಣ್ಣೆ ತೆಗೆದುಕೊಂಡಿದ್ದಾರೆ. ಮಳವಳ್ಳಿ ರೇಪ್ ಅಂಡ್ ಮರ್ಡರ್, ಬೇಬಿ ಗ್ರಾಮದಲ್ಲಿ ಶಿಕ್ಷಕನ ಲೈಂಗಿಕ ದೌರ್ಜನ್ಯ ಪ್ರಕರಣ ರಾಜ್ಯದಲ್ಲಿ ಸಂಚಲನ ಉಂಡುಮಾಡಿತ್ತು. ಇದೀಗ ಕಟ್ಟೇರಿ ಗ್ರಾಮದಲ್ಲಿ ಶಿಕ್ಷಕನೇ ಎಣ್ಣೆ ಮತ್ತಲ್ಲಿ ಕಿರುಕುಳ ನೀಡಲು ಹೋಗಿ ಹುಡುಗಿಯರಿಂದಲೇ ಥಳಿತಕ್ಕೆ ಒಳಗಾಗಿದ್ದಾನೆ. 

ವಿಷಯ ತಿಳಿಯುತ್ತಿದ್ದಂತೆ ರಾತ್ರಿಯೇ ಕೆ.ಆರ್.ಎಸ್ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಕಾಮುಕ ಶಿಕ್ಷಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Teacher of RMSV misbehaves with girl Students, horrible beaten in hostel at Mandya. Video of this has gone viral on social media.