ತೇಜೋವಧೆ ವರದಿ ; ಕುಂದಾಪುರ ಉದ್ಯಮಿಯಿಂದ 50 ಲಕ್ಷ ಹಣಕ್ಕಾಗಿ ಬ್ಲಾಕ್ಮೇಲ್, ಪತ್ರಕರ್ತರ ವಿರುದ್ಧ ದೂರು

09-01-23 10:18 pm       Udupi Correspondent   ಕ್ರೈಂ

ತೇಜೋವಧೆ ಮಾಡುವ ರೀತಿ ವರದಿ ಬರೆದು ಉದ್ಯಮಿಯೊಬ್ಬರಿಗೆ 50 ಲಕ್ಷ ಹಣ ನೀಡುವಂತೆ ಬ್ಲಾಕ್ಮೇಲ್ ಮಾಡಿ, ಬೆದರಿಸಿದ ಬಗ್ಗೆ ಕೆಲವು ಪತ್ರಕರ್ತರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.

ಕುಂದಾಪುರ, ಜ.9: ತೇಜೋವಧೆ ಮಾಡುವ ರೀತಿ ವರದಿ ಬರೆದು ಉದ್ಯಮಿಯೊಬ್ಬರಿಗೆ 50 ಲಕ್ಷ ಹಣ ನೀಡುವಂತೆ ಬ್ಲಾಕ್ಮೇಲ್ ಮಾಡಿ, ಬೆದರಿಸಿದ ಬಗ್ಗೆ ಕೆಲವು ಪತ್ರಕರ್ತರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.

ಸಹನಾ ಎಸ್ಟೇಟ್ ಅಡ್ಮಿನಿಸ್ಟ್ರೇಟಿವ್ ಕಂಪನಿ ಪಾಲುದಾರ ಸುರೇಶ್ ಶೆಟ್ಟಿ ಎಂಬವರು ಕುಂದಾಪುರ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಟಿಪಿ ಮಂಜುನಾಥ, ಹರೀಶ ಭಂಡಾರಿ ಕುಂಭಾಶಿ, ಮಝರ್ ಸೇರಿ ಹಲವರ ಹೆಸರನ್ನು ಬರೆಯಲಾಗಿದೆ. ಇವರು ಸುರೇಶ್ ಶೆಟ್ಟಿ ಬಗ್ಗೆ ಮಾನಹಾನಿ ಆಗುವ ರೀತಿ ವರದಿ ಬರೆದು ಪತ್ರಿಕೆಯ ಪ್ರತಿಯನ್ನು ವಾಟ್ಸಪ್ ನಲ್ಲಿ ಕಳುಹಿಸಿದ್ದರು. ಆನಂತರ, ಹಣಕ್ಕಾಗಿ ಬ್ಲಾಕ್ಮೇಲ್ ಮಾಡಿದ್ದಾರೆ.

ವರದಿಯನ್ನು ಪ್ರಕಟಿಸದೆ ತೆಗೆದು ಹಾಕಲು 50 ಲಕ್ಷ ನೀಡಬೇಕೆಂದು ಸುರೇಶ್ ಶೆಟ್ಟಿ ಅವರನ್ನು ಬ್ಲಾಕ್ಮೇಲ್ ನಡೆಸಿದ್ದಾರೆ. ಇದರಿಂದ ನೊಂದ ಸುರೇಶ್ ಶೆಟ್ಟಿ, ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Karkala Deformative article about Businessesman in local newspaper, three journalists booked for blackmail for demanding 50 lakhs cash.