ಬ್ರೇಕಿಂಗ್ ನ್ಯೂಸ್
11-01-23 12:02 pm HK News Desk ಕ್ರೈಂ
ವಾರಂಗಲ್, ಜ.11: ವಂಚಕನೊಬ್ಬ ಅನಾಥ ಭಿಕ್ಷುಕನೊಬ್ಬನಿಗೆ 50 ಲಕ್ಷ ರೂ.ಗಳ ವಿಮೆ ಮಾಡಿಸಿ, ವಿಮೆಯ ಹಣವನ್ನು ದೋಚಿಕೊಳ್ಳಲು ಪೊಲೀಸ್ ಪೇದೆ ಮತ್ತು ಸಹಚರರ ಮೂಲಕವೇ ಭಿಕ್ಷುಕನನ್ನು ಅಪಹರಿಸಿ ಭೀಕರವಾಗಿ ಕೊಲ್ಲಿಸಿದ ಆಘಾತಕಾರಿ ಘಟನೆ ತೆಲಂಗಾಣದ ವಾರಂಗಲ್ನಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಪೇದೆ ಸೇರಿದಂತೆ ನಾಲ್ವರನ್ನು ವಾರಂಗಲ್ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯನ್ನು ವಾರಂಗಲ್ ಜಿಲ್ಲೆಯ ಬೋಡಾ ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಇತರ ಮೂವರು ಆರೋಪಿಗಳಲ್ಲಿ ಮೋತಿಲಾಲ್ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆಗಿದ್ದಾನೆ. ಇತರು ಸತೀಶ್ ಮತ್ತು ಸಾಮ್ಮಣ್ಣ.
ವಂಚಕ ಶ್ರೀಕಾಂತ್ ಬೋಡಾ ಕಳೆದ ಡಿಸೆಂಬರ್ನಲ್ಲಿ ಭಿಕ್ಷುಕನನ್ನು ಕೊಂದು ವಿಮೆ ಹಣ ಪಡೆಯಲು ಸಂಚು ಹೂಡಿದ್ದ. ವಿಮೆ ಕಂಪನಿಯೊಂದರಿಂದ ಆತನ ಹೆಸರಿನಲ್ಲಿ 50 ಲಕ್ಷ ರೂ.ಗೆ ವಿಮೆ ಮಾಡಿಸಿದ್ದ. ಬಳಿಕ ಪೊಲೀಸ್ ಕಾನ್ಸ್ಟೇಬಲ್ ಮೋತಿಲಾಲ್ ಮತ್ತು ಸಹಚರರನ್ನು ಭಿಕ್ಷುಕ ಹತ್ಯೆಗೆ ನಿಯೋಜಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಂಚಕನ ಪ್ಲಾನ್ ಪ್ರಕಾರ ಪೊಲೀಸ್ ಪೇದೆ ಮತ್ತು ಇತರರು ಭಿಕ್ಷುಕನನ್ನು ಕಾರಿನಲ್ಲಿ ಅಪಹರಿಸಿದ್ದರು. ಅತಿಯಾಗಿ ಮದ್ಯವನ್ನು ಕುಡಿಸಿದ ಬಳಿಕ ಭೀಕರವಾಗಿ ಕೊಂದು ಹಾಕಿದ್ದರು. ಬಳಿಕ ಹೆಣವನ್ನು ರಸ್ತೆಯಲ್ಲಿಟ್ಟು ಅದರ ಮೇಲೆ ಕಾರನ್ನು ಎರಡು ಸಲ ಹರಿಸಿ, ರಸ್ತೆ ಅಪಘಾತ ಎಂಬಂತೆ ಬಿಂಬಿಸಿದ್ದರು.
ಭಿಕ್ಷುಕನ ಶವದ ಮರಣೋತ್ತರ ಪರೀಕ್ಷೆಯ ವೇಳೆ ಪೊಲೀಸರಿಗೆ ಅನುಮಾನ ಉಂಟಾಗಿತ್ತು. ಸಾವಿಗೆ ಮುನ್ನ ಉಂಟಾಗಿದ್ದ ಗಾಯಗಳು ಸಂದೇಹಾಸ್ಪದವಾಗಿತ್ತು. ಈ ನಡುವೆ ಪ್ರಮುಖ ಆರೋಪಿ ಶ್ರೀಕಾಂತ್ ಬೋಡಾ ವಿಮೆ ಪರಿಹಾರ ಕ್ಲೇಮ್ ಮಾಡಿಕೊಳ್ಳಲು ವಿಮೆ ಕಂಪನಿಯನ್ನು ಸಂಪರ್ಕಿಸಿದ್ದ. ತನ್ನ ಕಾರಿನ ಚಾಲಕ ವಾಹನ ಚಲಾಯಿಸಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಆತ ಹೇಳಿದ್ದ. ಕ್ಲೇಮ್ ಅನ್ನು ಖಾತರಿಪಡಿಸಿಕೊಳ್ಳಲು ವಿಮೆ ಕಂಪನಿಯು ಪೊಲೀಸರನ್ನು ಸಂಪರ್ಕಿಸಿತ್ತು. ಆಗ ಪೊಲೀಸರ ಕೈಗೆ ಪಾತಕಿಗಳು ಸಿಕ್ಕಿಬಿದ್ದಿದ್ದಾರೆ.
In a shocking incident, a serial fraudster allegedly insured and got killed an orphan beggar to grab the insurance money in Telangana's Warangal in December, police said. Four persons including a police constable who led the hitsquad were arrested by Warangal Police.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
27-07-26 09:48 pm
HK News Staffer
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
27-07-26 11:07 pm
Mangaluru Staffer
ಕಾಪುವಿನಲ್ಲಿ ಎಕ್ಸ್ಪ್ರೆಸ್ ಬಸ್ಗಳ ದರ್ಪ! ಟೈಮಿಂಗ್...
27-07-26 10:21 pm
ಸಚಿವ ಸ್ಥಾನ ಕೊಡಿಸಲು ಮೂರು ಕೋಟಿ ಬೇಡಿಕೆ ; ಕೇರಳದ ಶ...
27-07-26 09:04 pm
ಬೆಂಗಳೂರು ಗ್ಯಾರೇಜ್ ನಲ್ಲಿ ಅಗ್ನಿ ಅವಘಡ ; ಜಾಗ್ವಾರ...
27-07-26 07:35 pm
ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಲೈಂಗಿಕ ಕಿರುಕುಳ ಆರೋ...
27-07-26 01:09 pm