ಬ್ರೇಕಿಂಗ್ ನ್ಯೂಸ್
03-02-23 11:38 pm Mangaluru Correspondent ಕ್ರೈಂ
ಮಂಗಳೂರು, ಫೆ.3: ಧೂಳೆಬ್ಬಿಸಿಕೊಂಡು ಹೋಗಬೇಡ ಎಂದು ಬುದ್ಧಿವಾದ ಹೇಳಿದ ವ್ಯಕ್ತಿಯನ್ನು ಟಿಪ್ಪರ್ ಹಾಯಿಸಿ ಚಾಲಕನೇ ಕೊಲೆಗೈದ ಘಟನೆ ಮೂಡುಬಿದ್ರೆಯಲ್ಲಿ ನಡೆದಿದೆ. ಕೋಟೆಬಾಗಿಲು ನಿವಾಸಿ ಫಯಾಜ್ (63) ಕೊಲೆಯಾದವರು.
ಶುಕ್ರವಾರ ಮಧ್ಯಾಹ್ನ ಮಸೀದಿಗೆ ತೆರಳುತ್ತಿದ್ದಾಗ ಟಿಪ್ಪರ್ ಚಾಲಕ ಹ್ಯಾರಿಸ್ ಬಳಿ ಧೂಳು ಎಬ್ಬಿಸಿಕೊಂಡು ಸಾಗುತ್ತಿದ್ದ ಬಗ್ಗೆ ಪ್ರಶ್ನೆ ಮಾಡಿದ್ದರು. ಶಾಲಾ ಮಕ್ಕಳು ಹೋಗುವ ದಾರಿ, ಈ ರೀತಿ ಯಾಕೆ ಹೋಗುತ್ತೀಯಾ ಎಂದು ಕೇಳಿದ್ದರು. ಅದಕ್ಕೆ ಹ್ಯಾರಿಸ್, ನೀನು ಯಾರು ಕೇಳಲು ಎಂದು ಮರು ಪ್ರಶ್ನೆ ಮಾಡಿದ್ದು ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು.
ಆನಂತರ ಮಸೀದಿಯಿಂದ ಮರಳುತ್ತಿದ್ದಾಗ ಇದೇ ವಿಚಾರದಲ್ಲಿ ಇಬ್ಬರ ಮಧ್ಯೆ ಜಗಳ ಆಗಿದೆ. ಟಿಪ್ಪರ್ ಬಾಗಿಲಿನ ಬಳಿ ಹತ್ತಿ ನಿಂತಿದ್ದ ಫಯಾಜ್ ಮೇಲೆ ರಾಡಿನಿಂದ ಹ್ಯಾರಿಸ್ ಹಲ್ಲೆ ಮಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಫಯಾಜ್ ಬಾಗಿಲು ತೆಗೆದು ಒಳಗೆ ನುಗ್ಗಲು ಯತ್ನಿಸಿದ್ದು ಇದೇ ವೇಳೆ ಹ್ಯಾರಿಸ್ ಟಿಪ್ಪರ್ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಬಾಗಿಲಿನಲ್ಲಿ ನೇತಾಡಿಕೊಂಡಿದ್ದ ಫಯಾಜ್ ಕೆಳಕ್ಕೆ ಬಿದ್ದಿದ್ದು ಅದೇ ಟಿಪ್ಪರಿನ ಹಿಂದಿನ ಚಕ್ರ ಫಯಾಜ್ ಕಾಲು, ತೊಡೆಯ ಭಾಗದಿಂದ ಹರಿದು ಹೋಗಿದೆ.
ಕೂಡಲೇ ಫಯಾಜ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಒಯ್ದಿದ್ದು ಅಷ್ಟರಲ್ಲಿ ಮೃತಪಟ್ಟಿದ್ದಾರೆ. ಹ್ಯಾರಿಸ್ ಟಿಪ್ಪರ್ ಬಿಟ್ಟು ಪರಾರಿಯಾಗಿದ್ದಾನೆ. ಮೂಡುಬಿದ್ರೆ ಠಾಣೆಯಲ್ಲಿ ಕೊಲೆ ಕೇಸು ದಾಖಲಾಗಿದೆ.
Moodbidri murder man moved down by a tipper truck driver over silly issue. Mangaluru city and Moodbidri town witnessed one each gruesome murder on Friday, February 3, when an unidentified miscreant stabbed a jewellery shop worker to death and a tipper truck driver mowed down an elderly man under the wheels of his vehicle, respectively.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm