ಹಾಸನ; ಜನವಸತಿ ಪ್ರದೇಶದಲ್ಲೇ ಯುವಕನನ್ನು ಕೊಂದು ಶವ ಸುಟ್ಟ ಹಂತಕರು 

11-02-23 08:09 pm       HK News Desk   ಕ್ರೈಂ

ಹಾಸನ ಜಿಲ್ಲೆ ಅರಸೀಕೆರೆ ನಗರದ ಶ್ರೀನಗರ ಸಮೀಪದ ರೈಲ್ವೆ ಟ್ರ್ಯಾಕ್ ಸಮೀಪ 25 ವರ್ಷದ ಯುವಕನೊಬ್ಬನ್ನು ಕೊಂದು  ಮೃತದೇಹವನ್ನು ಸುಟ್ಟು ಹಾಕಲಾಗಿದೆ.

ಹಾಸನ,ಫೆ.11 : ಹಾಸನ ಜಿಲ್ಲೆ ಅರಸೀಕೆರೆ ನಗರದ ಶ್ರೀನಗರ ಸಮೀಪದ ರೈಲ್ವೆ ಟ್ರ್ಯಾಕ್ ಸಮೀಪ 25 ವರ್ಷದ ಯುವಕನೊಬ್ಬನ್ನು ಕೊಂದು  ಮೃತದೇಹವನ್ನು ಸುಟ್ಟು ಹಾಕಲಾಗಿದೆ.

ಜನವಸತಿ ಸಮೀಪವೇ, ರೈಲ್ವೆ ಟ್ರ್ಯಾಕ್‌ ಬಳಿ ಈ ಭೀಕರ ಘಟನೆ ನಡೆದಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ಶನಿವಾರ ಬೆಳಗ್ಗೆ ಇಲ್ಲಿನ ರೈಲ್ವೇ ಟ್ರ್ಯಾಕ್‌ ಬಳಿ ಬೆಂಕಿ ಹೊತ್ತು ಉರಿಯುವುದನ್ನು  ಗಮನಿಸಿದ ಸ್ಥಳೀಯರು ಹೋಗಿ ನೋಡಿದಾಗ ಅದೊಂದು ಶವ ಎನ್ನುವುದು ಗೊತ್ತಾಗಿದೆ. ರಾತ್ರಿ ಕೊಲೆ ಮಾಡಿ ಬೆಳಗ್ಗಿನ ಜಾವ ಇಲ್ಲಿಗೆ ತಂದು ಬೆಂಕಿ ಹಚ್ಚಿರುವ ಸಾಧ್ಯತೆ ಇದೆ. ಅಥವಾ ಕೆಲವು ದಿನಗಳ ಹಿಂದೆ ಕೊಂದು, ಶವವನ್ನು ಕಟ್ಟಿ ಇಟ್ಟುಕೊಂಡು ರಾತ್ರಿ ಇಲ್ಲಿಗೆ ತಂದು ಸುಟ್ಟಿರುವ ಸಾಧ್ಯತೆಯೂ ಇದೆ.

ಅಂದಾಜು 25 ವರ್ಷ ಪ್ರಾಯದ ಯುವಕನ ಶವ ಇದಾಗಿದ್ದು, ಯಾರು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಅರಸೀಕೆರೆ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಎಸ್ಪಿ ಹರಿರಾಮ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಗುರುತು ಪತ್ತೆಗೆ ಮುಂದಾದ ಪೊಲೀಸರು ಸಾರ್ವಜನಿಕರಿಂದ ಈ ಬಗ್ಗೆ ಮಾಹಿತಿ ಕೋರಿದ್ದಾರೆ. ಜತೆಗೆ ನಾಪತ್ತೆಯಾಗಿರುವ ವ್ಯಕ್ತಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೊಲೆ ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹ ಕೇಳಿಬಂದಿದ್ದು, ಪೊಲೀಸರು ಕೂಡಾ ಅದೇ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

Hassan a 25 year old murdered, body gutted in fire.