ಬ್ರೇಕಿಂಗ್ ನ್ಯೂಸ್
20-02-23 09:55 pm Mangalore Correspondent ಕ್ರೈಂ
ಮಂಗಳೂರು, ಫೆ.20 : ಫೇಸ್ಬುಕ್ ನಲ್ಲಿ ಬಂದಿದ್ದ ಉದ್ಯೋಗ ಜಾಹೀರಾತು ನಂಬಿ ಅದಕ್ಕೆ ಅರ್ಜಿ ಹಾಕಿದ್ದಲ್ಲದೆ, ಅಪರಿಚಿತರು ಹೇಳಿದಂತೆ ವಿವಿಧ ಕಾರಣಕ್ಕೆ 9.79 ಲಕ್ಷ ರೂಪಾಯಿ ನೀಡಿ ವ್ಯಕ್ತಿಯೊಬ್ಬರು ವಂಚನೆಗೊಳಗಾದ ಬಗ್ಗೆ ಎಸ್ಪಿ ಕಚೇರಿಯ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ರಾಜೇಶ್ ಆಳ್ವ ಎಂಬವರು ಹಯಾಟೆಕ್ ಪ್ರಾಪರ್ ಸೊಲ್ಯುಶನ್ ಎಂಬ ಸಂಸ್ಥೆಯಲ್ಲಿ ವರ್ಕ್ ಫ್ರಂ ಹೋಮ್ ಕೆಲಸ ಮಾಡಿಕೊಂಡಿದ್ದರು. ಕಂಪನಿಯಲ್ಲಿ ಕಡಿಮೆ ವೇತನ ಇದ್ದುದರಿಂದ ಫೇಸ್ಬುಕ್ ನಲ್ಲಿ ಬಂದಿದ್ದ ಮತ್ತೊಂದು ಉದ್ಯೋಗದ ಆಫರ್ ನೋಡಿ ಅರ್ಜಿ ಹಾಕಿದ್ದರು. ಅದರಲ್ಲಿದ್ದ ವಾಟ್ಸಪ್ ನಂಬರಿಗೆ ವಿಚಾರಿಸಿದಾಗ, ಜಾಬ್ ಅಪ್ಲಿಕೇಷನ್ ಫಾರ್ಮ್ ಕಳುಹಿಸಿದ್ದರು. ಬಯೋಡೇಟಾ ಕಳುಹಿಸಿ, ಆ ಕಡೆಯಿಂದ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವೀಸಾ ಪ್ರೊಸೆಸಿಂಗ್ ಚಾರ್ಜ್, ಕಸ್ಟಮ್ ಕ್ಲಿಯರೆನ್ಸ್ ಹಾಗೂ ವಿವಿಧ ಚಾರ್ಜ್ ಹೆಸರಲ್ಲಿ ಹಣ ಕಳುಹಿಸಿದ್ದಾರೆ.
ಎಟಿಎಂ ಕ್ಯಾಶ್ ಡಿಪಾಸಿಟ್ ಮೆಷಿನ್ ಹಾಗೂ ಫೋನ್ ಪೇ, ಪೇಟಿಎಂ ಮೂಲಕ ಅಪರಿಚಿತರು ನೀಡಿದ್ದ ಬ್ಯಾಂಕ್ ಖಾತೆಗಳಿಗೆ ಸುಮಾರು 9,97,000 ಹಣವನ್ನು ಕಳುಹಿಸಿದ್ದಾರೆ. ಉನ್ನತ ಉದ್ಯೋಗ ಸಿಗುತ್ತದೆ ಎಂದು ನಂಬಿ ತನ್ನಲ್ಲಿದ್ದ ಲಕ್ಷಾಂತರ ಹಣವನ್ನು ಕಳಕೊಂಡಿದ್ದಾರೆ. ಕಳೆದ ಡಿಸೆಂಬರ್ 18ರಿಂದ ಫೆಬ್ರವರಿ 20ರ ನಡುವೆ ವಂಚನೆ ಎಸಗಲಾಗಿದೆ ಎಂದು ರಾಜೇಶ್ ಆಳ್ವ ದೂರು ನೀಡಿದ್ದಾರೆ.
Mangalore Facebook Job offer advertising fraud, man loses 9.79 lakhs.
20-06-25 10:36 am
Bangalore Correspondent
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
19-06-25 10:58 pm
HK News Desk
ಕೇರಳ ಸಿಎಂ ಸ್ವಂತ ಊರಿನಲ್ಲೇ ಮುಸ್ಲಿಂ ಗುಂಪಿನ ನೈತಿಕ...
19-06-25 08:26 pm
Israel-Iran’s War: ಇಸ್ರೇಲಿನ ಅತಿದೊಡ್ಡ ಆಸ್ಪತ್ರೆ...
19-06-25 07:13 pm
ಪಾಕ್ ಸೇನಾ ಮುಖ್ಯಸ್ಥನಿಗೆ ಡೊನಾಲ್ಡ್ ಟ್ರಂಪ್ ಔತಣ ಕೂ...
18-06-25 09:54 pm
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತಷ್ಟು ಸುಲಭ ;...
18-06-25 08:49 pm
20-06-25 07:10 pm
Mangalore Correspondent
Chakravarthy Sulibele: ಕುಂದಾಪುರದಲ್ಲಿ ಅಖಂಡ ಭಾರ...
20-06-25 03:54 pm
ಆರೆಸ್ಸೆಸ್ ನಾಯಕರ ಮನೆಗಳಿಗೆ ಮಿಡ್ ನೈಟ್ ಪರಿಶೀಲನೆ ;...
20-06-25 02:59 pm
ಒಂದೇ ಮರ ತೆರವಿಗೆ ಸೂಚಿಸಿದ್ದ ಸೋಮೇಶ್ವರ ಪುರಸಭೆ ; ಐ...
19-06-25 10:08 pm
ಜಪ್ಪಿನಮೊಗರು ಕಾರು ಅಪಘಾತಕ್ಕೆ ಮದ್ಯ ಸೇವನೆ, ಅತಿ ವೇ...
19-06-25 07:48 pm
20-06-25 02:04 pm
Mangalore Correspondent
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm