ಬ್ರೇಕಿಂಗ್ ನ್ಯೂಸ್
02-03-23 09:29 pm Bangalore Correspondent ಕ್ರೈಂ
ಬೆಂಗಳೂರು, ಮಾ.2: ಅಪಾರ್ಟ್ಮೆಂಟ್ ಮೇಲೆ 15 ಕೋಟಿ ಸಾಲ ಇದೆಯೆಂದು ಹೇಳಿ ಬ್ಯಾಂಕ್ ಸಿಬಂದಿ ಏಕಾಏಕಿ ನ್ಯಾಯಾಲಯದ ಆದೇಶದ ನೆಪದಲ್ಲಿ 29 ಮನೆಗಳನ್ನು ಸೀಜ್ ಮಾಡಿ, ನೂರಕ್ಕೂ ಹೆಚ್ಚು ಮಂದಿಯನ್ನು ಬೀದಿಗೆ ತಳ್ಳಿದ ಘಟನೆ ರಾಜಾಜಿನಗರದಲ್ಲಿ ನಡೆದಿದೆ.
ರಾಜಾಜಿನಗರದ ಶಿವನಹಳ್ಳಿಯ ಐಶ್ವರ್ಯ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದೆ. ಶಿವಣ್ಣ ಎಂಬವರಿಗೆ ಸೇರಿದ ಅಪಾರ್ಟ್ಮೆಂಟ್ ಇದಾಗಿದ್ದು, ಬ್ಯಾಂಕ್ ಸಾಲ ಮರುಪಾವತಿ ಮಾಡಿಲ್ಲವೆಂದು ಅಲ್ಲಿರುವ ಮನೆಗಳನ್ನು ಜಪ್ತಿ ಮಾಡಿದ್ದಾರೆ. ಇದರಿಂದ 25 ವರ್ಷಗಳಿಂದ ಮನೆಗಳನ್ನು ಲೀಸ್ ಪಡೆದಿದ್ದವರು ಶಾಕ್ ಆಗಿದ್ದಾರೆ. 29 ಮನೆಗಳ ಸಂಸಾರವನ್ನು ಏಕಾಏಕಿ ಬ್ಯಾಂಕ್ ಸಿಬಂದಿ ಮತ್ತು ಜೊತೆಗೆ ಬಂದಿದ್ದ ಮೂರನೇ ವ್ಯಕ್ತಿಗಳು ದೌರ್ಜನ್ಯ ನಡೆಸಿ ಬೀದಿಗೆ ತಳ್ಳಿದ್ದಾರೆ. ಮನೆಮಂದಿ ಕೂಡಲೇ ಮನೆ ಖಾಲಿ ಮಾಡಬೇಕೆಂದು ಹೇಳಿ ದೌರ್ಜನ್ಯ ಎಸಗಿದ್ದಾರೆ.

ಅಪಾರ್ಟ್ಮೆಂಟ್ ಹೆಸರಲ್ಲಿ ಕೆನರಾ ಬ್ಯಾಂಕ್ ನಿಂದ 15 ಕೋಟಿ ಸಾಲ ಪಡೆದಿದ್ದಾರೆ ಎನ್ನಲಾಗುತ್ತಿದೆ. ಬಹುತೇಕ ಎಲ್ಲ ಕುಟುಂಬದವರು ಮನೆಗಳನ್ನು ಲೀಸ್ ಮೇಲೆ ಪಡೆದಿದ್ದು, ಈಗ ಏಕಾಏಕಿ ಎದ್ದು ಹೋಗಿ ಅಂದರೆ ಎಲ್ಲಿ ಹೋಗುವುದು ಎಂದು ಕಂಗಾಲಾಗಿದ್ದಾರೆ. ಮಾಲೀಕರು ಮಾಡಿದ ದೋಖಾಗೆ ಮನೆಗಳನ್ನು ಭೋಗ್ಯಕ್ಕೆ ಪಡೆದವರು ಈಗ ಸಿಕ್ಕಿಬೀಳುವಂತಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
25 ವರ್ಷಗಳಿಂದ ನಾವು ಮನೆಯಲ್ಲಿದ್ದೀವಿ, ಇದುವರೆಗೂ ಸಾಲದ ಬಗ್ಗೆ ನಮಗೆ ಗೊತ್ತಿಲ್ಲ, ಇಬ್ಬರು ಬ್ಯಾಂಕ್ ಸಿಬಂದಿ, ಥರ್ಡ್ ಪಾರ್ಟಿಯವರನ್ನು ಕರೆಸ್ಕೊಂಡು ಬಂದು ಮನೆ ಒಳಗಡೆ ನುಗ್ಗಿ ದಾಂಧಲೆ ನಡೆಸಿದ್ದಾರೆ, ಅಮ್ಮನ ಮೇಲೆ ಕಾಲಲ್ಲಿ ಒದ್ದಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಮಧ್ಯಾಹ್ನ ಹೊತ್ತಲ್ಲಿ ಬಂದು ದಾಂಧಲೆ ನಡೆಸಿದರೆ ಹೇಗೆ ಎಂದು ಮಾದೇಶ್ ಎಂಬವರು ಸುದ್ದಿ ವಾಹಿನಿಯ ಜೊತೆಗೆ ಅಲವತ್ತುಕೊಂಡಿದ್ದಾರೆ.
Big scam, 15 crore loan in the name of Aishwarya Apartment in Bengaluru, 29 flats seized by Bank in Bangalore, hundreds homeless. Flat residents were shocked after a sudden raid by bank officials.
19-12-25 01:41 pm
Bangalore Correspondent
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 04:43 pm
Mangalore Correspondent
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm