ಬ್ರೇಕಿಂಗ್ ನ್ಯೂಸ್
02-03-23 09:29 pm Bangalore Correspondent ಕ್ರೈಂ
ಬೆಂಗಳೂರು, ಮಾ.2: ಅಪಾರ್ಟ್ಮೆಂಟ್ ಮೇಲೆ 15 ಕೋಟಿ ಸಾಲ ಇದೆಯೆಂದು ಹೇಳಿ ಬ್ಯಾಂಕ್ ಸಿಬಂದಿ ಏಕಾಏಕಿ ನ್ಯಾಯಾಲಯದ ಆದೇಶದ ನೆಪದಲ್ಲಿ 29 ಮನೆಗಳನ್ನು ಸೀಜ್ ಮಾಡಿ, ನೂರಕ್ಕೂ ಹೆಚ್ಚು ಮಂದಿಯನ್ನು ಬೀದಿಗೆ ತಳ್ಳಿದ ಘಟನೆ ರಾಜಾಜಿನಗರದಲ್ಲಿ ನಡೆದಿದೆ.
ರಾಜಾಜಿನಗರದ ಶಿವನಹಳ್ಳಿಯ ಐಶ್ವರ್ಯ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದೆ. ಶಿವಣ್ಣ ಎಂಬವರಿಗೆ ಸೇರಿದ ಅಪಾರ್ಟ್ಮೆಂಟ್ ಇದಾಗಿದ್ದು, ಬ್ಯಾಂಕ್ ಸಾಲ ಮರುಪಾವತಿ ಮಾಡಿಲ್ಲವೆಂದು ಅಲ್ಲಿರುವ ಮನೆಗಳನ್ನು ಜಪ್ತಿ ಮಾಡಿದ್ದಾರೆ. ಇದರಿಂದ 25 ವರ್ಷಗಳಿಂದ ಮನೆಗಳನ್ನು ಲೀಸ್ ಪಡೆದಿದ್ದವರು ಶಾಕ್ ಆಗಿದ್ದಾರೆ. 29 ಮನೆಗಳ ಸಂಸಾರವನ್ನು ಏಕಾಏಕಿ ಬ್ಯಾಂಕ್ ಸಿಬಂದಿ ಮತ್ತು ಜೊತೆಗೆ ಬಂದಿದ್ದ ಮೂರನೇ ವ್ಯಕ್ತಿಗಳು ದೌರ್ಜನ್ಯ ನಡೆಸಿ ಬೀದಿಗೆ ತಳ್ಳಿದ್ದಾರೆ. ಮನೆಮಂದಿ ಕೂಡಲೇ ಮನೆ ಖಾಲಿ ಮಾಡಬೇಕೆಂದು ಹೇಳಿ ದೌರ್ಜನ್ಯ ಎಸಗಿದ್ದಾರೆ.

ಅಪಾರ್ಟ್ಮೆಂಟ್ ಹೆಸರಲ್ಲಿ ಕೆನರಾ ಬ್ಯಾಂಕ್ ನಿಂದ 15 ಕೋಟಿ ಸಾಲ ಪಡೆದಿದ್ದಾರೆ ಎನ್ನಲಾಗುತ್ತಿದೆ. ಬಹುತೇಕ ಎಲ್ಲ ಕುಟುಂಬದವರು ಮನೆಗಳನ್ನು ಲೀಸ್ ಮೇಲೆ ಪಡೆದಿದ್ದು, ಈಗ ಏಕಾಏಕಿ ಎದ್ದು ಹೋಗಿ ಅಂದರೆ ಎಲ್ಲಿ ಹೋಗುವುದು ಎಂದು ಕಂಗಾಲಾಗಿದ್ದಾರೆ. ಮಾಲೀಕರು ಮಾಡಿದ ದೋಖಾಗೆ ಮನೆಗಳನ್ನು ಭೋಗ್ಯಕ್ಕೆ ಪಡೆದವರು ಈಗ ಸಿಕ್ಕಿಬೀಳುವಂತಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
25 ವರ್ಷಗಳಿಂದ ನಾವು ಮನೆಯಲ್ಲಿದ್ದೀವಿ, ಇದುವರೆಗೂ ಸಾಲದ ಬಗ್ಗೆ ನಮಗೆ ಗೊತ್ತಿಲ್ಲ, ಇಬ್ಬರು ಬ್ಯಾಂಕ್ ಸಿಬಂದಿ, ಥರ್ಡ್ ಪಾರ್ಟಿಯವರನ್ನು ಕರೆಸ್ಕೊಂಡು ಬಂದು ಮನೆ ಒಳಗಡೆ ನುಗ್ಗಿ ದಾಂಧಲೆ ನಡೆಸಿದ್ದಾರೆ, ಅಮ್ಮನ ಮೇಲೆ ಕಾಲಲ್ಲಿ ಒದ್ದಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಮಧ್ಯಾಹ್ನ ಹೊತ್ತಲ್ಲಿ ಬಂದು ದಾಂಧಲೆ ನಡೆಸಿದರೆ ಹೇಗೆ ಎಂದು ಮಾದೇಶ್ ಎಂಬವರು ಸುದ್ದಿ ವಾಹಿನಿಯ ಜೊತೆಗೆ ಅಲವತ್ತುಕೊಂಡಿದ್ದಾರೆ.
Big scam, 15 crore loan in the name of Aishwarya Apartment in Bengaluru, 29 flats seized by Bank in Bangalore, hundreds homeless. Flat residents were shocked after a sudden raid by bank officials.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 06:02 pm
HK News Staffer
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm