ಬ್ರೇಕಿಂಗ್ ನ್ಯೂಸ್
23-03-23 02:16 pm Bangalore Correspondent ಕ್ರೈಂ
ಬೆಂಗಳೂರು, ಮಾ.23 : ಪೊಲೀಸರೇ ಆರೋಪಿಯನ್ನು ಬಂಧಿಸಿ ಅಪಹರಣದ ನಾಟಕವಾಡಿದ್ದಲ್ಲದೆ, ಕುಟುಂಬಕ್ಕೆ 40 ಲಕ್ಷ ರೂ.ಗೆ ಬೇಡಿಕೆಯಿಟ್ಟ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧಿಸಿ ಮಾರತ್ ಹಳ್ಳಿ ಠಾಣೆಯ ಪಿಎಸ್ಐ ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಾ.18ರಂದು ಹುಲಿ ಉಗುರು, ಚರ್ಮವನ್ನು ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಮಾರತಹಳ್ಳಿ ಪೊಲೀಸರು ಬಂಧಿಸಿ ಕರೆದೊಯ್ದಿದ್ದರು. ಆದರೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸದೇ ಪ್ರತ್ಯೇಕ ಜಾಗದಲ್ಲಿ ಬಚ್ಚಿಟ್ಟಿದ್ದರು. ಆನಂತರ ಆರೋಪಿ ಸಂಬಂಧಿಕರಿಗೆ ಕರೆ ಮಾಡಿ 40 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದರು. ಇದರಿಂದ ಗಾಬರಿಗೊಂಡ ಆರೋಪಿ ಕುಟುಂಬಸ್ಥರು ಬಾಗಲೂರು ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಬಾಗಲೂರು ಪೊಲೀಸರು ಕಿಡ್ನಾಪ್ ಮಾಡಿ ಕರೆ ಮಾಡಿದ ಜಾಡು ಆಧರಿಸಿ ಪತ್ತೆಗೆ ಜಾಲ ಬೀಸಿದ್ದರು.
ಬಾಗಲೂರು ಪೊಲೀಸರು ತನಿಖೆ ನಡೆಸಿದಾಗ, ಕಿಡ್ನಾಪ್ ಮಾಡಿದ್ದವರು ಮಾರತಹಳ್ಳಿ ಠಾಣೆ ಪಿಎಸ್ಐ ರಂಗೇಶ್ ಮತ್ತು ಹೆಡ್ ಕಾನ್ಸ್ಟೇಬಲ್ ಹರೀಶ್ ಎಂಬುದು ತಿಳಿದುಬಂದಿದೆ. ಪ್ರಕರಣದಲ್ಲಿ ಆರೋಪಿಯನ್ನ ಇಬ್ಬರು ಪೊಲೀಸರು ಕರೆದೊಯ್ದಿದ್ದರು. ಈ ವೇಳೆ, ಪಿಎಸ್ಐ ರಂಗೇಶ್ ಆರೋಪಿ ತಲೆಗೆ ಗನ್ ಇಟ್ಟು ಹಣ ಕೊಡುವಂತೆ ಅವರ ಕಡೆಯವರಿಗೆ ಕರೆ ಮಾಡಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಪೊಲೀಸರೇ ಕಿಡ್ನಾಪ್ ಮಾಡಿದ್ದಾರೆ ಎಂಬುದರ ಬಗ್ಗೆ ಕಮಿಷನರ್ ಪ್ರತಾಪ್ ರೆಡ್ಡಿಗೆ ಮಾಹಿತಿ ಬಂದಿದ್ದು ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣವೇ ಆರೋಪಿಗಳನ್ನು ಬಂಧಿಸುವಂತೆ ಸೂಚನೆ ಕೊಟ್ಟಿದ್ದರು.
ಕಮಿಷನರ್ ಸೂಚನೆ ಮೇರೆಗೆ ಮಂಗಳವಾರ ಹೆಡ್ ಕಾನ್ಸ್ಟೇಬಲ್ ಹರೀಶ್ನನ್ನು ಬಂಧಿಸಿರುವ ಬಾಗಲೂರು ಪೊಲೀಸರು ತಲೆಮರೆಸಿಕೊಂಡಿರುವ ಪಿಎಸ್ಐ ರಂಗೇಶ್ಗಾಗಿ ತೀವ್ರ ಶೋಧ ನಡೆಸಿದ್ದಾರೆ. ಬಾಗಲೂರು ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಎಂ. ಶಿವರಾಮಯ್ಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ರಾಮಾಂಜನಿ ಎಂಬಾತನನ್ನು ಅಪಹರಿಸಿ ಒಯ್ದಿರುವ ಬಗ್ಗೆ ದೂರಿನಲ್ಲಿ ಉಲ್ಲೇಖವಾಗಿದೆ. ಶಬ್ಬೀರ್, ಜಾಕೀರ್, ಪಿಎಸ್ಐ ರಂಗೇಶ್, ಕಾನ್ಸ್ಟೇಬಲ್ ಹರೀಶ್ ಕೆ.ಎಲ್, ಮಹದೇವ ನಾಯಕ್, ಮಹೇಶ್ ಮೇಲೆ ದೂರು ದಾಖಲಾಗಿದೆ.
ಆರೋಪಿ ಎ- 2 ಹರೀಶ್, ಎ-3 ಆರೋಪಿ ಶಬ್ಬೀರ್ ಹಾಗೂ ಎ-4 ಆರೋಪಿ ಜಾಕೀರ್ ಸೇರಿ ಮೂವರನ್ನು ಬಾಗಲೂರು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗೆ ಶೋಧ ಕಾರ್ಯ ಕೈಗೊಂಡಿದ್ದಾರೆ.
Two police officers in Bengaluru have been arrested in connection with the kidnapping a man and demanding Rs 40 lakhs from his family for his release, authorities said on Thursday. The two were identified as Sub-Inspector Rangesh and head constable Harish. The incident had taken place on March 18 and came to light now.
25-04-24 02:19 pm
HK News Desk
Mallikarjun Kharge speech at Kalaburgi: ಮತ ಹಾ...
24-04-24 11:14 pm
ಸಾವಿನ ಮನೆಯಲ್ಲಿ ರಾಜಕಾರಣ ಮಾಡೋದು ಸರಿಯಲ್ಲ ; ಆರೋಪಿ...
24-04-24 07:10 pm
Priyanka Gandhi, PM Modi, Chitradurga: ದೊಡ್ಡ...
23-04-24 10:46 pm
Eshwarappa slams Vijayendra, BJP: ಬಿಜೆಪಿ ಬಗ್ಗ...
23-04-24 09:24 pm
25-04-24 03:49 pm
HK News Desk
Groom electrocuted in Rajasthan: ರೆಸಾರ್ಟ್ ನಲ್...
24-04-24 05:01 pm
Pm Modi, Muslims: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ...
22-04-24 10:37 pm
ಮದುವೆ ಮುಗಿಸಿ ವಾಪಾಸ್ ಆಗುವ ವೇಳೆ ಭೀಕರ ಅಪಘಾತ ; ಓ...
21-04-24 03:23 pm
Surya Tilak, Ram Lallas forehead in Ayodhya:...
17-04-24 08:42 pm
25-04-24 08:45 pm
Udupi Correspondent
Banta Brigade, Mangalore, Brijesh Chowta: ಬಂಟ...
25-04-24 02:42 pm
Vishwa Hindu Parishad, Vhp, Mangalore: ರಾಜ್ಯದ...
25-04-24 12:59 pm
Subramanya Dhareshwara: ಯಕ್ಷಗಾನ ರಂಗದಲ್ಲಿ ಕ್ರಾ...
25-04-24 11:52 am
Brijesh Chowta, Mangalore: ಕಾಂಗ್ರೆಸಿಗೆ ಮತ ನೀಡ...
24-04-24 10:39 pm
25-04-24 03:33 pm
Bangalore Correspondent
Gang raped in Bengaluru: ಬೆಂಗಳೂರಿನಲ್ಲಿ ಯುವತಿ...
25-04-24 12:19 pm
Glide touist bus, Mangalore, crime: ಬೆಂಗಳೂರು...
24-04-24 10:48 pm
ಗಿಫ್ಟ್ ವಿಚಾರದಲ್ಲಿ ಕಿರಿಕ್ ; ಅಣ್ಣ ತಂಗಿಯ ಮದುವೆಗೆ...
24-04-24 05:39 pm
Trading scam, Online fraud, Crime: ದುಪ್ಪಟ್ಟು...
24-04-24 03:41 pm